2026ರ ಪ.ಬಂಗಾಳ ಚುನಾವಣೆಯು ಅಕ್ರಮ ವಲಸಿಗರನ್ನು ತಡೆಯುವ ವಿಷಯದ ಮೇಲೆಯೇ ನಡೆಯಲಿದೆ! – ಅಮಿತ ಶಾಹ

ಕೊಲಕಾತಾ – 2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾಜಕೀಯ ತಾಪಮಾನ ಹೆಚ್ಚಾಗಿದೆ. ರಾಜಕೀಯ ಪಕ್ಷಗಳು ಚುನಾವಣಾ ದೃಷ್ಟಿಯಿಂದ ಸಿದ್ಧತೆಗಳನ್ನೂ ಆರಂಭಿಸಿವೆ. ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾಹ ಅವರು ಡಿಸೆಂಬರ್ 30 ರಂದು ಕೊಲಕಾತಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಅವರು ರಾಜ್ಯದ ತೃಣಮೂಲ ಕಾಂಗ್ರೆಸ್ ಪಕ್ಷದ ಮೇಲೆ ಅಕ್ರಮ ವಲಸೆ, ಭ್ರಷ್ಟಾಚಾರ, ದುರಾಡಳಿತ ಸೇರಿದಂತೆ ಹಲವು ವಿಷಯಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು. 2026ರಲ್ಲಿ ಪ.ಬಂಗಾಳದಲ್ಲಿ ಭಾಜಪ ಸರಕಾರ ಸ್ಥಾಪನೆಯಾಗಲಿದೆ. ಅಕ್ರಮ ವಲಸೆ ತಡೆಗಟ್ಟುವ ವಿಷಯದ ಮೇಲೆಯೇ 2026ರ ಪ.ಬಂಗಾಳ ಚುನಾವಣೆ ನಡೆಯಲಿದೆ, ಎಂದು ಶಾಹ ಹೇಳಿದರು.

ಶಾಹ ಅವರು ಮುಂದೆ ಮಾತನಾಡಿ:

೧. ಚುನಾವಣೆಯಲ್ಲಿ ಗೆಲ್ಲಲು ಮಮತಾ ಬ್ಯಾನರ್ಜಿ ಅವರು ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

೨. ತೃಣಮೂಲ ಕಾಂಗ್ರೆಸ್ ಸರಕಾರವು ಭೂಮಿ ನೀಡದ ಕಾರಣ ಕೇಂದ್ರ ಸರಕಾರವು ಬಾಂಗ್ಲಾದೇಶದ ಗಡಿಯಲ್ಲಿ ಬೇಲಿ ಹಾಕುವ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

೩. ಕಳೆದ 15 ವರ್ಷಗಳ ತೃಣಮೂಲ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಭಯ, ಭ್ರಷ್ಟಾಚಾರ ಮತ್ತು ದುರಾಡಳಿತ ನಡೆಯುತ್ತಿದೆ. ಇದರಿಂದಾಗಿ ಬಂಗಾಳದ ಸಾಮಾನ್ಯ ನಾಗರಿಕರು ಚಿಂತಿತರಾಗಿದ್ದಾರೆ. ಭ್ರಷ್ಟಾಚಾರದಿಂದಾಗಿ ಪ.ಬಂಗಾಳದ ಅಭಿವೃದ್ಧಿ ಕುಂಠಿತಗೊಂಡಿದೆ.

೪. ಪ.ಬಂಗಾಳದ ಗಡಿಯಲ್ಲಿ ನಡೆಯುತ್ತಿರುವ ಅಕ್ರಮ ವಲಸೆಯು ದೇಶದ ರಾಷ್ಟ್ರೀಯ ಭದ್ರತೆಯ ವಿಷಯವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು.

೫. ಏಪ್ರಿಲ್ 2026ರ ನಂತರ ಪ.ಬಂಗಾಳದಲ್ಲಿ ಭಾಜಪ ಸರಕಾರ ಸ್ಥಾಪನೆಯಾದಾಗ, ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಮತ್ತೆ ಪುನರುಜ್ಜೀವನಗೊಳಿಸಲಾಗುವುದು.