ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ಮದರಸಾಗಳಿಗೆ ಅಪರಿಮಿತ ಅಧಿಕಾರ ನೀಡುವ ವಿಧೇಯಕವನ್ನು ಹಿಂಪಡೆದ ಯೋಗಿ ಆದಿತ್ಯನಾಥ ಸರಕಾರ!

ಲಕ್ಷ್ಮಣಪುರಿ (ಉತ್ತರಪ್ರದೇಶ) – ಹಿಂದಿನ ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ಅಂಗೀಕರಿಸಲ್ಪಟ್ಟಿದ್ದ, ಮದರಸಾ ಶಿಕ್ಷಕರನ್ನು ಕಾನೂನು ಕ್ರಮದಿಂದ ರಕ್ಷಿಸುವ ವಿಧೇಯಕವನ್ನು ಈಗಿನ ಯೋಗಿ ಆದಿತ್ಯನಾಥ ಸರಕಾರವು ಹಿಂಪಡೆದಿದೆ. ಈ ವಿಧೇಯಕದಲ್ಲಿ ಸಂವಿಧಾನವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು ಮತ್ತು ಮದರಸಾಗಳಿಗೆ ಅಪರಿಮಿತ ಅಧಿಕಾರಗಳನ್ನು ನೀಡಲಾಗಿತ್ತು.

೧. ಸಚಿವ ಓಂ ಪ್ರಕಾಶ ರಾಜಭರ ಅವರು ಮಾತನಾಡುತ್ತಾ, ೨೦೦೬ ರಲ್ಲಿ ಉತ್ತರಪ್ರದೇಶ ಮದರಸಾ ಅಧ್ಯಾಪಕರು ಮತ್ತು ಇತರ ಸಿಬ್ಬಂದಿ ವೇತನ ವಿಧೇಯಕವನ್ನು ಅಂಗೀಕರಿಸಲಾಗಿತ್ತು ಎಂದು ತಿಳಿಸಿದರು.

೨. ಈ ವಿಧೇಯಕದ ಪ್ರಕಾರ, ಮದರಸಾದ ಯಾವುದೇ ಶಿಕ್ಷಕ ಅಥವಾ ಸಿಬ್ಬಂದಿಯ ವಿರುದ್ಧ ತನಿಖೆ ಅಥವಾ ಮೊಕದ್ದಮೆಯನ್ನು ದಾಖಲಿಸಲು ಅವಕಾಶವಿರಲಿಲ್ಲ. ವೇತನ ನೀಡುವಲ್ಲಿ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗೆ ಶಿಕ್ಷೆ ನೀಡುವ ಸೌಲಭ್ಯವೂ ಈ ವಿಧೇಯಕದಲ್ಲಿತ್ತು.

೩. ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ನಂತರ, ಅಂದಿನ ರಾಜ್ಯಪಾಲ ರಾಮ ನಾಯ್ಕ ಅವರು ಈ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು.

೪. ಈ ವಿಧೇಯಕವು ಸಂವಿಧಾನದ ಚೌಕಟ್ಟಿನಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಈ ಕಾರಣದಿಂದಾಗಿ ಸಮಾಜವಾದಿ ಪಕ್ಷದ ಸರಕಾರದ ಕಾಲದಲ್ಲಿ ಈ ವಿಧೇಯಕವು ಜಾರಿಗೆ ಬರಲು ಸಾಧ್ಯವಾಗಿರಲಿಲ್ಲ.

೫. ೨೦೧೭ ರಲ್ಲಿ ಅಧಿಕಾರಕ್ಕೆ ಬಂದ ಭಾಜಪ ಸರಕಾರಕ್ಕೆ ರಾಷ್ಟ್ರಪತಿಗಳು ಈ ವಿಧೇಯಕವನ್ನು ಮರಳಿ ಕಳುಹಿಸಿದರು.

೬. ಅನೇಕ ಲೋಪದೋಷಗಳಿದ್ದ ಕಾರಣ, ಕೇಂದ್ರ ಸರಕಾರವು ಸಂವಿಧಾನದ ಚೌಕಟ್ಟಿಗೆ ಅನುಗುಣವಾಗಿ ಹೊಸ ವಿಧೇಯಕವನ್ನು ತರುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು. ಈಗ ರಾಜ್ಯ ಸಚಿವ ಸಂಪುಟವು ಈ ಹಳೆಯ ವಿಧೇಯಕವನ್ನು ಹಿಂಪಡೆಯುವ ಪ್ರಸ್ತಾವನೆಗೆ ಸಮ್ಮತಿ ನೀಡಿದೆ.