
ಪಾಲಕ್ಕಾಡ್ (ಕೇರಳ) – ಇಲ್ಲಿ ಛತ್ತೀಸ್ಗಢ ಮೂಲದ ವಲಸೆ ಕಾರ್ಮಿಕ ರಾಮ ನಾರಾಯಣ ಬಘೇಲ್ (31) ನನ್ನು ಡಿಸೆಂಬರ್ 17 ರಂದು ಒಂದು ಗುಂಪು ಬಾಂಗ್ಲಾದೇಶಿ ಎಂದು ತಪ್ಪಾಗಿ ಭಾವಿಸಿ ಥಳಿಸಿ ಹತ್ಯೆ ಮಾಡಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವನ ದೇಹದ ಮೇಲೆ 80ಕ್ಕೂ ಹೆಚ್ಚು ಗಾಯಗಳು ಪತ್ತೆಯಾಗಿವೆ. ರಾಮ ನಾರಾಯಣ ಬಘೇಲ್ ಛತ್ತೀಸ್ಗಢದ ಸಕ್ತಿ ಜಿಲ್ಲೆಯ ಕರ್ಹಿ ಗ್ರಾಮದ ನಿವಾಸಿಯಾಗಿದ್ದನು. ಅವನು ಒಂದು ವಾರದ ಹಿಂದೆ ಕೆಲಸಕ್ಕಾಗಿ ಪಾಲಕ್ಕಾಡ್ ಜಿಲ್ಲೆಗೆ ಬಂದಿದ್ದನು.
ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಆರೋಪಿಗಳನ್ನು ಬಂಧಿಸಿದ್ದಾರೆ. ಅವರಲ್ಲಿ ಮುರಳಿ, ಪ್ರಸಾದ, ಅನು, ಬಿಪಿನ್ ಮತ್ತು ಆನಂದನ ಸೇರಿದ್ದಾರೆ. ಇವರೆಲ್ಲರೂ ಅಟ್ಟಪ್ಪಲ್ಲಂ ಗ್ರಾಮದ ನಿವಾಸಿಗಳು. ರಾಮ ನಾರಾಯಣ್ಗೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯರು ಅಟ್ಟಪ್ಪಲ್ಲಂ ಪ್ರದೇಶದಲ್ಲಿ ರಾಮ ನಾರಾಯಣ್ರನ್ನು ಕಳ್ಳತನದ ಶಂಕೆಯ ಮೇಲೆ ಹಿಡಿದು, ಅವರನ್ನು ಅಮಾನವೀಯವಾಗಿ ಥಳಿಸಿದ್ದಾರೆ. ಪೊಲೀಸರ ಪ್ರಕಾರ, ರಾಮ ನಾರಾಯಣ್ ಅಮಲಿನಲ್ಲಿದ್ದನು; ಆದರೆ ಅವನ ಬಳಿ ಕಳ್ಳತನದ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎನ್ನಲಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ