ಹಿಂದೂಗಳ ವಿರೋಧದ ನಂತರ ಕಲ್ಮಾ ಕಲಿಸುವುದನ್ನು ನಿಲ್ಲಿಸಲಾಯಿತು!

(ಕಲ್ಮಾ ಎಂದರೆ ಅಲ್ಲಾಹ್ನ ವೈಭವವನ್ನು ಹೇಳುವ ಹೇಳಿಕೆಗಳು)
ಉಧಮ್ ಸಿಂಗ್ ನಗರ್ (ಉತ್ತರಾಖಂಡ) – ಇಲ್ಲಿನ ಕೌಶಲ್ಯಪುರಿ ಪ್ರದೇಶದ ಆದರ್ಶ್ ಜನತಾ ಮಾಂಟೆಸ್ಸರಿ ಎಂಬ ಖಾಸಗಿ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ‘ಕಲ್ಮಾ’ ಕಲಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದ ನಂತರ ದೊಡ್ಡ ಗದ್ದಲ ಉಂಟಾಗಿದೆ. ಕಲ್ಮಾ ಕಲಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಮುಖ್ಯೋಪಾಧ್ಯಾಯರ ಸ್ಪಷ್ಟೀಕರಣ ಮತ್ತು ಒಪ್ಪಿಗೆ
ಶಾಲೆಯ ಮುಖ್ಯೋಪಾಧ್ಯಾಯ ಗಿರೀಶ್ ಚಂದ್ರ ಸೈನಿ ಅವರು, ಶಾಲೆಯಲ್ಲಿ ೧೧೦ ಹಿಂದೂ ಮತ್ತು ೮೦ ಮುಸ್ಲಿಂ ಮಕ್ಕಳು ಕಲಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಶಾಲೆಯಲ್ಲಿ ಸುಮಾರು ಒಂದು ವರ್ಷದಿಂದ ಪ್ರಾರ್ಥನೆಯ ಸಮಯದಲ್ಲಿ ಎಲ್ಲ ಮಕ್ಕಳಿಗೂ ‘ಕಲ್ಮಾ’ವನ್ನು ಕಲಿಸಲಾಗುತ್ತಿತ್ತು. ಆದಾಗ್ಯೂ, ಅವರು ಕಲ್ಮಾ ಕಲಿಸಿದ್ದು ತಪ್ಪು ಎಂದು ಒಪ್ಪಿಕೊಂಡರು ಮತ್ತು ಅದನ್ನು ಕಲಿಸುವುದನ್ನು ನಿಲ್ಲಿಸಿದರು.
ಜಿಲ್ಲಾ ಮುಖ್ಯ ಶಿಕ್ಷಣಾಧಿಕಾರಿ ಪಿ.ಎಸ್. ರಾವತ್ ಅವರು, ವಿಚಾರಣೆಯಲ್ಲಿ ತಿಳಿದು ಬಂದಿದ್ದೇನೆಂದರೆ, ಶಾಲೆಯು ಇರುವ ಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದೆ; ಆದರೆ ಅಲ್ಲಿ ಹಿಂದೂ ಮಕ್ಕಳು ಸಹ ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ನೀತಿಯ ಪ್ರಕಾರ ಇದು ತಪ್ಪು. ಶಾಲೆಗೆ ನೋಟಿಸ್ ಜಾರಿ ಮಾಡಲಾಗಿದೆ ಮತ್ತು ಅದರ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸಂಪಾದಕೀಯ ನಿಲುವುಇದಕ್ಕೆ ಕಾರಣರಾದವರನ್ನು ಸಹ ಶಿಕ್ಷಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!