ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಮಾಹಿತಿ! (ಮುಂಬಯಿ) ಮುಂಬೈನಲ್ಲಿ ವರ್ಷದಲ್ಲಿ ೧ ಲಕ್ಷ ೨೮ ಸಾವಿರ ನಾಗರಿಕರಿಗೆ ನಾಯಿ ಕಡಿತ! – Eknath Shinde Dog Bite

ಮುಂಬಯಿ – ೨೦೨೪ ರ ವರ್ಷದಲ್ಲಿ ೧ ಲಕ್ಷ ೨೮ ಸಾವಿರದ ೨೫೨ ನಾಗರಿಕರಿಗೆ ನಾಯಿಗಳು ಕಚ್ಚಿವೆ. ೨೦೨೪ ರ ದಾಖಲೆಗಳ ಪ್ರಕಾರ, ರಾಜ್ಯದಲ್ಲಿ ೪೦ ಲಕ್ಷ ಮತ್ತು ಮುಂಬೈನಲ್ಲಿ ೯೧ ಸಾವಿರದ ೭೫೭ ಬೀದಿ ನಾಯಿಗಳಿವೆ. ‘ಅನಿಮಲ್ ವೆಲ್ಫೇರ್ ಬೋರ್ಡ್’ ನಿಗದಿಪಡಿಸಿದ ‘ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್’ ಸಂಸ್ಥೆಯು ಈ ವರದಿಯನ್ನು ನೀಡಿದೆ ಎಂದು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದರು. ಈ ಬಗ್ಗೆ ಶಿವಸೇನೆಯ ಶಾಸಕ ಸುನಿಲ್ ಶಿಂದೆ ಅವರು ಪ್ರಶ್ನೆ ಕೇಳಿದ್ದರು.

೧. ಬೀದಿ ನಾಯಿಗಳ ಸಂತಾನಹರಣ, ಲಸಿಕೆ, ರೇಬೀಸ್ ನಿರ್ಮೂಲನೆ, ಮನುಷ್ಯ-ನಾಯಿ ಸಂಘರ್ಷವನ್ನು ತಪ್ಪಿಸುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

೨. ನಾಗರಿಕರ ದೂರುಗಳಿಗಾಗಿ ಪ್ರತ್ಯೇಕ ‘ವೆಬ್‌ಪೋರ್ಟಲ್’ ಅನ್ನು ಸಿದ್ಧಪಡಿಸಲಾಗುತ್ತಿದೆ. ೭೫೬೪೯ ೭೬೬೪೯ ಈ ಸಹಾಯಕ ಸಂಖ್ಯೆಯನ್ನು ನೀಡಲಾಗಿದೆ. ಬೀದಿ ನಾಯಿಗಳಿಗೆ ಆಶ್ರಯ ನೀಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಖಾಲಿ ಜಾಗಗಳಿಗಾಗಿ ಸಮಿತಿಯನ್ನು ನೇಮಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಮಾಹಿತಿ ನೀಡಲಾಯಿತು.

೩. ಒಂದು ಪಶ್ಚಿಮ ಉಪನಗರದಲ್ಲಿ ಹುಚ್ಚು ನಾಯಿಯೊಂದು ೨೬ ವಿದ್ಯಾರ್ಥಿಗಳಿಗೆ ಕಚ್ಚಿದೆ. ದಿಂಡೋಷಿಯಲ್ಲಿ ಒಂದು ನಾಯಿಯು ೪ ಜನರಿಗೆ ಕಚ್ಚಿದೆ.

೪. ಈ ಬೀದಿ ನಾಯಿಗಳನ್ನು ತಕ್ಷಣ ಹಿಡಿಯಬೇಕೆಂದು ಶಿವಸೇನೆಯ ಮುಖ್ಯ ಸಚೇತಕ ಸುನಿಲ್ ಪ್ರಭು ಅವರು ವಿಧಾನಸಭೆಯಲ್ಲಿ ಬೇಡಿಕೆ ಇಟ್ಟಿದ್ದರು. ಅದರ ನಂತರ ಪೀಠಾಧ್ಯಕ್ಷ ಸಮೀರ್ ಕುಣಾವರ್ ಅವರು ಸರ್ಕಾರವು ಇದನ್ನು ತಕ್ಷಣ ಗಮನಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದರು.