
ಮುಂಬಯಿ – ೨೦೨೪ ರ ವರ್ಷದಲ್ಲಿ ೧ ಲಕ್ಷ ೨೮ ಸಾವಿರದ ೨೫೨ ನಾಗರಿಕರಿಗೆ ನಾಯಿಗಳು ಕಚ್ಚಿವೆ. ೨೦೨೪ ರ ದಾಖಲೆಗಳ ಪ್ರಕಾರ, ರಾಜ್ಯದಲ್ಲಿ ೪೦ ಲಕ್ಷ ಮತ್ತು ಮುಂಬೈನಲ್ಲಿ ೯೧ ಸಾವಿರದ ೭೫೭ ಬೀದಿ ನಾಯಿಗಳಿವೆ. ‘ಅನಿಮಲ್ ವೆಲ್ಫೇರ್ ಬೋರ್ಡ್’ ನಿಗದಿಪಡಿಸಿದ ‘ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್’ ಸಂಸ್ಥೆಯು ಈ ವರದಿಯನ್ನು ನೀಡಿದೆ ಎಂದು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದರು. ಈ ಬಗ್ಗೆ ಶಿವಸೇನೆಯ ಶಾಸಕ ಸುನಿಲ್ ಶಿಂದೆ ಅವರು ಪ್ರಶ್ನೆ ಕೇಳಿದ್ದರು.
೧. ಬೀದಿ ನಾಯಿಗಳ ಸಂತಾನಹರಣ, ಲಸಿಕೆ, ರೇಬೀಸ್ ನಿರ್ಮೂಲನೆ, ಮನುಷ್ಯ-ನಾಯಿ ಸಂಘರ್ಷವನ್ನು ತಪ್ಪಿಸುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
೨. ನಾಗರಿಕರ ದೂರುಗಳಿಗಾಗಿ ಪ್ರತ್ಯೇಕ ‘ವೆಬ್ಪೋರ್ಟಲ್’ ಅನ್ನು ಸಿದ್ಧಪಡಿಸಲಾಗುತ್ತಿದೆ. ೭೫೬೪೯ ೭೬೬೪೯ ಈ ಸಹಾಯಕ ಸಂಖ್ಯೆಯನ್ನು ನೀಡಲಾಗಿದೆ. ಬೀದಿ ನಾಯಿಗಳಿಗೆ ಆಶ್ರಯ ನೀಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಖಾಲಿ ಜಾಗಗಳಿಗಾಗಿ ಸಮಿತಿಯನ್ನು ನೇಮಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಮಾಹಿತಿ ನೀಡಲಾಯಿತು.
೩. ಒಂದು ಪಶ್ಚಿಮ ಉಪನಗರದಲ್ಲಿ ಹುಚ್ಚು ನಾಯಿಯೊಂದು ೨೬ ವಿದ್ಯಾರ್ಥಿಗಳಿಗೆ ಕಚ್ಚಿದೆ. ದಿಂಡೋಷಿಯಲ್ಲಿ ಒಂದು ನಾಯಿಯು ೪ ಜನರಿಗೆ ಕಚ್ಚಿದೆ.
೪. ಈ ಬೀದಿ ನಾಯಿಗಳನ್ನು ತಕ್ಷಣ ಹಿಡಿಯಬೇಕೆಂದು ಶಿವಸೇನೆಯ ಮುಖ್ಯ ಸಚೇತಕ ಸುನಿಲ್ ಪ್ರಭು ಅವರು ವಿಧಾನಸಭೆಯಲ್ಲಿ ಬೇಡಿಕೆ ಇಟ್ಟಿದ್ದರು. ಅದರ ನಂತರ ಪೀಠಾಧ್ಯಕ್ಷ ಸಮೀರ್ ಕುಣಾವರ್ ಅವರು ಸರ್ಕಾರವು ಇದನ್ನು ತಕ್ಷಣ ಗಮನಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!