ವಿಧಾನಸಭೆಯಿಂದ…

ನಾಗ್ಪುರ, ಡಿಸೆಂಬರ್ ೧೧ (ವಾರ್ತೆ) – ಮಹಾರಾಷ್ಟ್ರದ ಸಾವಿರಾರು ದೇವಸ್ಥಾನಗಳ ಆಡಳಿತದಲ್ಲಿ ಪ್ರಮುಖ ಬದಲಾವಣೆ ತರುವ ‘ಸಾರ್ವಜನಿಕ ಧರ್ಮದರ್ಶಿ ವ್ಯವಸ್ಥೆ ಸುಧಾರಣೆ ವಿಧೇಯಕ’ವನ್ನು ಡಿಸೆಂಬರ್ ೧೧ ರಂದು ಎರಡೂ ಸದನಗಳಲ್ಲಿ ಅಂಗೀಕರಿಸಲಾಯಿತು. ಈ ವಿಧೇಯಕದಲ್ಲಿ ದೇವಸ್ಥಾನಗಳೊಂದಿಗೆ ಶತಮಾನಗಳಿಂದ ಸಂಪರ್ಕ ಹೊಂದಿರುವ ಗುರವ್, ಅರ್ಚಕರು ಮತ್ತು ಸೇವಾದಾರರು, ಹಾಗೂ ದೇವಸ್ಥಾನಗಳ ಭೂಮಿ ಮತ್ತು ಇತರ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ.
ಈ ಹಿಂದೆ ಅನೇಕ ದೇವಸ್ಥಾನಗಳ ಇನಾಮ್ ಭೂಮಿ ಮಾರಾಟದ ಪ್ರಕರಣಗಳಲ್ಲಿ ಧರ್ಮದರ್ಶಿ ಮಂಡಳಿ ಮತ್ತು ವಹಿವಾಟುದಾರರು, ಗುರವ್, ಅರ್ಚಕರು ಇವರ ನಡುವೆ ವಿವಾದಗಳು ಉಂಟಾಗಿವೆ. ಹೊಸ ತಿದ್ದುಪಡಿಯ ಮೂಲಕ ಈ ಭೂಮಿಗಳನ್ನು ‘ದೇವಸ್ಥಾನ ಇನಾಮ್’ ಎಂದು ನೋಂದಾಯಿಸಲಾಗುತ್ತದೆ ಮತ್ತು ಅವುಗಳನ್ನು ಮಾರಾಟ ಮಾಡುವಾಗ ಧರ್ಮದಾಯ ಆಯುಕ್ತರು ಮತ್ತು ರಾಜ್ಯ ಸರಕಾರದ ಪೂರ್ವಾನುಮತಿ ಪಡೆಯುವುದು ಅವಶ್ಯಕ ಎಂದು ಸ್ಪಷ್ಟಪಡಿಸಲಾಗಿದೆ. ವಿಧೇಯಕದಲ್ಲಿ ಅಖಂಡ ಅಥವಾ ಖಾಯಂ ಧರ್ಮದರ್ಶಿ ಮತ್ತು ಸಾವಧಿ (ನಿಶ್ಚಿತ ಅವಧಿಯ) ಧರ್ಮದರ್ಶಿಗಳ ನೇಮಕಾತಿ ವಿಧಾನ ಮತ್ತು ಅಧಿಕಾರಾವಧಿಗೆ ಸಂಬಂಧಿಸಿದಂತೆ ಸಹ ಸ್ಪಷ್ಟವಾದ ನಿಬಂಧನೆಗಳಿವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!