೨೦೧೨ ರಲ್ಲಿ ಪೊಲೀಸ್ ವಾಹನದ ಮೇಲೆ ಬಾಂಬ್ ಎಸೆದ ಪ್ರಕರಣ

ತಿರುವನಂತಪುರಂ (ಕೇರಳ) – ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರ್ ನಗರಸಭೆ ಚುನಾವಣೆಯ ಹಾಲಿ ಅಭ್ಯರ್ಥಿಗಳಾಗಿರುವ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ (ಮಾಕಪ) ವಿ.ಕೆ. ನಿಷಾದ್ ಮತ್ತು ಟಿ.ಸಿ.ವಿ. ನಂದಕುಮಾರ್ ಎಂಬ ಇಬ್ಬರು ಕಾರ್ಯಕರ್ತರಿಗೆ ೨೦೧೨ ರಲ್ಲಿ ಪೊಲೀಸ್ ವಾಹನದ ಮೇಲೆ ಬಾಂಬ್ ಎಸೆದ ಪ್ರಕರಣದಲ್ಲಿ ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕೊಲೆ ಯತ್ನ ಮತ್ತು ಸ್ಫೋಟಕ ಕಾಯ್ದೆಯಡಿ ಅಪರಾಧಗಳಿಗೆ ನ್ಯಾಯಾಲಯವು ಇವರಿಬ್ಬರನ್ನು ದೋಷಿ ಎಂದು ತೀರ್ಪು ನೀಡಿದೆ. ಇಬ್ಬರಿಗೂ ತಲಾ ಎರಡೂವರೆ ಲಕ್ಷ ರೂಪಾಯಿ ದಂಡವನ್ನು ಸಹ ವಿಧಿಸಲಾಗಿದೆ. ದಂಡವನ್ನು ಪಾವತಿಸದಿದ್ದರೆ ಅವರಿಗೆ ಮತ್ತೊಂದು ವರ್ಷದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
೧. ನಿಷಾದ್ ಮತ್ತು ನಂದಕುಮಾರ್ ಇಬ್ಬರೂ ಮಾಕಪದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ ಎಂಬ ಯುವ ಸಂಘಟನೆಯ ಸದಸ್ಯರಾಗಿದ್ದಾರೆ. ನಿಷಾದ್ ಪಯ್ಯನೂರ್ ನಗರಸಭೆಯ ಹಿಂದಿನ ಅವಧಿಯ ಸದಸ್ಯರೂ ಆಗಿದ್ದಾರೆ.
೨. ಆಗಸ್ಟ್ ೧, ೨೦೧೨ ರಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತ ಅರಿಯಿಲ್ ಶುಕ್ಕೂರ್ ಅವರ ಕೊಲೆ ಪ್ರಕರಣದಲ್ಲಿ ಮಾಕಪದ ಅಂದಿನ ಜಿಲ್ಲಾ ಕಾರ್ಯದರ್ಶಿ ಪಿ. ಜಯರಾಜನ್ ಅವರನ್ನು ಬಂಧಿಸಿದ ನಂತರ ಈ ಘಟನೆ ಸಂಭವಿಸಿತ್ತು. ಆ ಸಮಯದಲ್ಲಿ ಈ ಇಬ್ಬರೂ ಪೊಲೀಸರ ವಾಹನದ ಮೇಲೆ ಬಾಂಬ್ ಎಸೆದಿದ್ದರು. ಅದೃಷ್ಟವಶಾತ್, ಬಾಂಬ್ಗಳು ಸ್ಫೋಟಗೊಳ್ಳಲಿಲ್ಲ ಮತ್ತು ಯಾವುದೇ ಜೀವಹಾನಿ ಸಂಭವಿಸಲಿಲ್ಲ.
ಸಂಪಾದಕೀಯ ನಿಲುವುಈಗ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷವು ಒಂದು ರಾಜಕೀಯ ಪಕ್ಷವಲ್ಲ, ಬದಲಿಗೆ ದೇಶದ್ರೋಹಿ, ಭಯೋತ್ಪಾದಕ ಮತ್ತು ನಕ್ಸಲ್ ಚಟುವಟಿಕೆಗಳನ್ನು ನಡೆಸುವ ಪಕ್ಷವಾಗಿರುವುದರಿಂದ, ಅದರ ಮೇಲೆ ನಿಷೇಧ ಹೇರುವುದು ಸೂಕ್ತವಾಗಿದೆ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ