|

ಭುವನೇಶ್ವರ (ಒಡಿಶಾ) – ಎರಡು ದಿನಗಳ ಹಿಂದೆ, ಬಾಂಗ್ಲಾದೇಶದ ನುಸುಳುಕೋರರಿಗೆ ಭಾರತದಲ್ಲಿ ಆಶ್ರಯ ನೀಡಿ ಅವರಿಂದ ಅಪರಾಧಗಳನ್ನು ಮಾಡಿಸುತ್ತಿದ್ದ ಗುಂಪನ್ನು ಪೊಲೀಸರು ಬಯಲುಗೊಳಿಸಿದ್ದಾರೆ. ಈ ಗುಂಪಿನ ಮುಖ್ಯ ಸೂತ್ರಧಾರ ಸಿಕಂದರ್ ಆಲಮ್ ಅಲಿಯಾಸ್ ಸಿಕೋ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಅನೇಕ ಅನುಮಾನಾಸ್ಪದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಕೋನ ಕಿರಿಯ ಸಹೋದರ ಅಬ್ದುಲ್ ಮೋತಾಲಿಫ್ ಖಾನ್ ಅಲಿಯಾಸ್ ಟಿಕಿ ಎಂಬಾತನನ್ನು ಕೂಡ ಖೋರಧಾದಲ್ಲಿ ಬಂಧಿಸಲಾಗಿದೆ.
1. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸಿಕೋ ನುಸುಳುಕೋರರಿಗೆ ಜಗತಸಿಂಗಪುರ ಜಿಲ್ಲೆಯ ಬಹರಾಮಪುರದಲ್ಲಿ ಸರಕಾರಿ ಭೂಮಿಯ ಮೇಲೆ ಗುಡಿಸಲುಗಳನ್ನು ಕಟ್ಟಿಸಿಕೊಟ್ಟಿದ್ದನು. (ಪೊಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ! ಇಷ್ಟೊಂದು ಅಕ್ರಮ ಕಟ್ಟಡ ನಿರ್ಮಾಣವಾಗುವವರೆಗೆ ಪೊಲೀಸರು ಮತ್ತು ಆಡಳಿತ ಮಂಡಳಿಯು ನಿದ್ರಿಸುತ್ತಿತ್ತೇ, ಎಂದು ಸಾಮಾನ್ಯ ಜನರಿಗೆ ಪ್ರಶ್ನೆ ಮೂಡಿದರೆ ತಪ್ಪೇನಿದೆ ! – ಸಂಪಾದಕರು) ಪೊಲೀಸರು ದಾಳಿ ಮಾಡಿದ ನಂತರ, ಗುಡಾರಗಳಲ್ಲಿ ವಾಸಿಸುತ್ತಿದ್ದ ಸುಮಾರು 30 ಬಾಂಗ್ಲಾದೇಶದ ಪ್ರಜೆಗಳು ಪರಾರಿಯಾಗಿದ್ದಾರೆ.
2. ಪೊಲೀಸರು ಅವರನ್ನೂ ಹುಡುಕುತ್ತಿದ್ದಾರೆ. ಆಡಳಿತವು ತಕ್ಷಣವೇ ಕ್ರಮ ಕೈಗೊಂಡು ಸರಕಾರಿ ಭೂಮಿಯ ಮೇಲಿನ ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದೆ. ಇದರಲ್ಲಿ ಸಿಕೋನ 10 ಕೊಠಡಿಗಳ ಕಾಂಕ್ರೀಟ್ ಮನೆ ಮತ್ತು 7 ಗುಡಿಸಲುಗಳು ಸೇರಿವೆ.
3. ಪೊಲೀಸರು ಸಿಕೋನ ಮನೆಯಿಂದ 3 ಕತ್ತಿ, 1 ಬಂದೂಕು ಮತ್ತು 7 ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ನುಸುಳುಕೋರರ ಈ ಅನಧಿಕೃತ ಜಾಲವನ್ನು ನಡೆಸಲು ಸಿಕೋಗೆ ವಿದೇಶದಿಂದ ಹಣಕಾಸು ನೆರವು ಸಿಗುತ್ತಿತ್ತೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ