ರಾಷ್ಟ್ರೀಯವಾದಿ ಕಾಂಗ್ರೆಸ್ಸಿನ ಶರದ್ ಪವಾರ್ ಬಣದ ಮುಂಬ್ರಾ-ಕಳವಾ ಅಧ್ಯಕ್ಷ ಶಮೀಮ್ ಖಾನ್ ವಿರುದ್ಧ ದೂರು ದಾಖಲು

  • ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಪ್ರಕರಣ!

  • ಶಾಸಕ ಜಿತೇಂದ್ರ ಆವ್ಹಾಡ ಅವರ ಸಮ್ಮುಖದಲ್ಲೇ ನಡೆದ ಘಟನೆ!

ಮುಂಬ್ರಾ (ಠಾಣೆ ಜಿಲ್ಲೆ) – ರಾಷ್ಟ್ರೀಯವಾದಿ ಕಾಂಗ್ರೆಸ ಶರದ ಪವಾರ್ ಬಣದ ಮುಂಬ್ರಾ-ಕಳವಾ ಅಧ್ಯಕ್ಷ ಶಮೀಮ ಖಾನ್ ಅವರು ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಈ ಪ್ರಕರಣದಲ್ಲಿ ಶಮೀಮ ಖಾನ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಶಮೀಮ ಖಾನ್ ಅವರು ಪಹಲ್ಗಾಮ್ ಆಕ್ರಮಣಕ್ಕೆ ಪ್ರತ್ಯುತ್ತರ ನೀಡಲು ಒಂಬತ್ತು ತಿಂಗಳ ಹಿಂದೆ ಮುಂಬ್ರಾದಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದರು. ಅದರಲ್ಲಿ ಮಾಜಿ ಸಚಿವ ಮತ್ತು ಮುಂಬ್ರಾ-ಕಳವಾ ಶಾಸಕ ಜಿತೇಂದ್ರ ಆವ್ಹಾಡ ಅವರೊಂದಿಗೆ ಅನೇಕ ಕಾರ್ಯಕರ್ತರು ಮತ್ತು ಸ್ಥಳೀಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಮೀಮ ಖಾನ್ ಅವರು ‘ಪಾಕಿಸ್ತಾನ್ ಮುರ್ದಾಬಾದ್’ ಬದಲಿಗೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ನೀಡಿದರು. ಸ್ವಲ್ಪ ಸಮಯದ ನಂತರ ಇದು ಗಮನಕ್ಕೆ ಬಂದಾಗ, ಅವರು ‘ಪಾಕಿಸ್ತಾನ್ ಮುರ್ದಾಬಾದ್’ ಎಂದು ಘೋಷಣೆ ಕೂಗಿದರು. ಈ ವಿಡಿಯೋ ಸಧ್ಯ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಶಾಸಕ ಜಿತೇಂದ್ರ ಆವ್ಹಾಡ ಅವರಿಗೆ ಈ ಘೋಷಣೆ ತಪ್ಪಾಗಿದೆ ಎಂಬುದು ಹೇಗೆ ಅರಿವಾಗಲಿಲ್ಲ? ಅಥವಾ ಅವರು ಬೇಕಂತಲೇ ಅದನ್ನು ನಿರ್ಲಕ್ಷಿಸಿ ಮುಸ್ಲಿಂ ಪ್ರೇಮವನ್ನು ಪ್ರದರ್ಶಿಸಿದರೇ? ‘ದೇಶದ್ರೋಹವನ್ನು ಬೆಂಬಲಿಸುತ್ತಿದ್ದರೂ ಅದನ್ನು ತಡೆಯದ ಶಾಸಕ ಜಿತೇಂದ್ರ ಆವ್ಹಾಡ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಯಾರಿಗಾದರೂ ಅನಿಸಿದರೆ, ಅದರಲ್ಲಿ ತಪ್ಪೇನಿದೆ?
  • ಪಾಕಿಸ್ತಾನವನ್ನು ಹಾಡಿಹೊಗಳುವ ನಾಯಕರನ್ನು ಹೊಂದಿರುವ ರಾಜಕೀಯ ಬಣಕ್ಕೆ ತನ್ನ ಹೆಸರಿನಲ್ಲಿ ‘ರಾಷ್ಟ್ರೀಯವಾದಿ’ ಎಂಬ ಪದವನ್ನು ಬಳಸುವ ಹಕ್ಕಿದೆಯೇ? ಇಂತಹವರ ಮೇಲೆ ಈ ಬಣ ಯಾವ ಕ್ರಮ ಕೈಗೊಂಡಿದೆ? ಅಥವಾ ಈ ಬಣಕ್ಕೂ ಈ ಕೃತ್ಯ ಒಪ್ಪಿಗೆಯಾಗಿದೆಯೇ?