ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಉಚ್ಚ ನ್ಯಾಯಾಲಯದಿಂದ ಅನುಮತಿ! RSS Procession Permission

ಸಮಯ ಮತ್ತು ಸ್ವಯಂಸೇವಕರ ಸಂಖ್ಯೆಯಲ್ಲಿ ಕಡಿತ

ಕಲಬುರಗಿ – ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠವು ಅನುಮತಿ ನೀಡಿದೆ. ಕೆಲವು ಷರತ್ತುಗಳನ್ನು ವಿಧಿಸಿ ನವೆಂಬರ್ ೧೬ ರಂದು ಪಥಸಂಚಲನ ನಡೆಸಲು ಅನುಮತಿ ನೀಡಲಾಗಿದೆ. ಮಧ್ಯಾಹ್ನ ೩:೩೦ ರಿಂದ ಸಂಜೆ ೬:೩೦ ರವರೆಗೆ ಈ ಸಂಚಲನಕ್ಕೆ ಅನುಮತಿ ಕೋರಲಾಗಿತ್ತು; ಆದರೆ ನ್ಯಾಯಾಲಯವು ಸಂಜೆ ೫:೪೫ ರವರೆಗಿನ ಸಮಯವನ್ನು ಮಾತ್ರ ನೀಡಿದೆ, ಜೊತೆಗೆ, ೮೫೦ ಸಮವಸ್ತ್ರಧಾರಿ ಸ್ವಯಂಸೇವಕರಿಗೆ ಅನುಮತಿ ಕೋರಲಾಗಿತ್ತು, ಆದರೆ ನ್ಯಾಯಾಲಯವು ಕೇವಲ ೩೦೦ ಸಮವಸ್ತ್ರಧಾರಿ ಸ್ವಯಂಸೇವಕರು ಭಾಗವಹಿಸಲು ಅನುಮತಿ ನೀಡಿದೆ.