ಗೋವಾ ರಾಜ್ಯಕ್ಕೆ ಇದ್ದ ನಿರ್ಣಯ ಇಡೀ ದೇಶಕ್ಕೆ ಅನ್ವಯ!

ಜಾರ್ಖಂಡ್ – ದೇಶದ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಗಾಗಿ ಸರ್ವೋಚ್ಚ ನ್ಯಾಯಾಲಯವು ನವೆಂಬರ್ 13 ರಂದು ಐತಿಹಾಸಿಕ ಆದೇಶವನ್ನು ನೀಡಿದ್ದು, ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳ ಒಳಗೆ, ಹಾಗೆಯೇ ಅವುಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸುವಂತಿಲ್ಲ ಎಂದು ಸ್ಪಷ್ಟ ನಿರ್ಣಯ ನೀಡಿದೆ. ಮುಖ್ಯ ನ್ಯಾಯಮೂರ್ತಿ ಭೂಷಣ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ ಚಂದ್ರನ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಟಿ.ಎನ್. ಗೋದಾವರ್ಮನ್ ತಿರುಮಲಪಾಡ್ ಪ್ರಕರಣದಲ್ಲಿ ತೀರ್ಪು ನೀಡಿದೆ. ಈ ಹಿಂದೆ ಇಂತಹ ನಿಯಮವು ಕೇವಲ ಗೋವಾ ರಾಜ್ಯಕ್ಕೆ ಅನ್ವಯವಾಗಿತ್ತು; ಆದರೆ ಈಗ ಅದು ಇಡೀ ದೇಶಕ್ಕೆ ಅನ್ವಯವಾಗಲಿದೆ.
1. ನ್ಯಾಯಾಲಯವು, ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವುದು ವನ್ಯಜೀವಿಗಳಿಗೆ ಅಪಾಯಕಾರಿಯಾಗುತ್ತದೆ, ಆದ್ದರಿಂದ, ದೇಶಾದ್ಯಂತ ಇಂತಹ ಯಾವುದೇ ಗಣಿಗಾರಿಕೆ ಅನುಮತಿಯನ್ನು ಮಾನ್ಯ ಮಾಡಲಾಗುವುದಿಲ್ಲ, ಎಂದು ಅಭಿಪ್ರಾಯಪಟ್ಟಿತು.
2. ನ್ಯಾಯಾಲಯವು ಜಾರ್ಖಂಡ್ ನ ಸರಂಡಾ ಪ್ರದೇಶವನ್ನು ‘ವನ್ಯಜೀವಿ ಅಭಯಾರಣ್ಯ’ ಎಂದು ಘೋಷಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಆ ಪ್ರದೇಶದ ಆದಿವಾಸಿಗಳು ಮತ್ತು ವನವಾಸಿಗಳ ಹಕ್ಕುಗಳನ್ನು ಅರಣ್ಯ ಹಕ್ಕುಗಳ ಕಾಯಿದೆಯಡಿಯಲ್ಲಿ ಸಂರಕ್ಷಿಸಲು ಸಹ ಹೇಳಿದೆ, ಜೊತೆಗೆ ಶಾಲೆಗಳು, ರೈಲು ಮಾರ್ಗಗಳು, ಆಸ್ಪತ್ರೆಗಳಂತಹ ಮೂಲಭೂತ ಸೌಕರ್ಯಗಳು ಯಥಾಸ್ಥಿತಿ ಉಳಿಯುತ್ತವೆ; ಆದರೆ ಆ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆಯನ್ನು ನಡೆಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
3. ಈ ನಿರ್ಣಯದಿಂದಾಗಿ ದೇಶಾದ್ಯಂತ ಎಲ್ಲ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳ ಸುತ್ತಲೂ ‘ನೋ ಮೈನಿಂಗ್ ಜೋನ್’ (ಗಣಿಗಾರಿಕೆ ನಿಷೇಧಿತ ಪ್ರದೇಶ) ನಿಗದಿಪಡಿಸಲಾಗಿದ್ದು, ಇದರಿಂದ ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ಸಿಗಲಿದೆ ಎಂದು ಪರಿಸರ ತಜ್ಞರ ಅಭಿಪ್ರಾಯವಾಗಿದೆ.
4. ‘ಗೋವಾ ಫೌಂಡೇಶನ್’ ಪ್ರಕರಣದಲ್ಲಿ ಗೋವಾಕ್ಕೆ ಈ ನಿಷೇಧವನ್ನು ಈಗಾಗಲೇ ಜಾರಿಗೊಳಿಸಲಾಗಿತ್ತು; ಆದರೆ ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಈ ನಿಯಮವನ್ನು ದೇಶಾದ್ಯಂತ ಜಾರಿಗೊಳಿಸುವುದು ಅವಶ್ಯಕ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಗೋವಾ ಫೌಂಡೇಶನ್ ಪ್ರಕರಣದ ನಿರ್ದೇಶನಗಳು ಕೇವಲ ಗೋವಾ ರಾಜ್ಯಕ್ಕೆ ಮಾತ್ರ ಇದ್ದವು; ಆದರೆ ಈಗ ಅವು ಎಲ್ಲ ರಾಜ್ಯಗಳಿಗೆ ಅನ್ವಯವಾಗುತ್ತವೆ. ಈ ಕುರಿತಾದ ಜೂನ್ 3, 2022 ರ ಹಿಂದಿನ ನಿರ್ದೇಶನಗಳಲ್ಲಿಯೂ ಸುಧಾರಣೆ ಮಾಡಲಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ