ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್! : Bengaluru Airport Namaz

ಸಂಘದ ಪಥಸಂಚಲನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳು ಇದಕ್ಕೆ ಅನುಮತಿ ನೀಡಿದ್ದಾರೆಯೇ? – ಭಾಜಪದ ಪ್ರಶ್ನೆ

ವಿಮಾನ ನಿಲ್ದಾಣದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಮುಸ್ಲಿಮರು

ಬೆಂಗಳೂರು – ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕೆಲವು ಮುಸಲ್ಮಾನರು ನಮಾಜ್ ಮಾಡುತ್ತಿರುವ ವಿಡಿಯೋವನ್ನು ಭಾಜಪದ ರಾಜ್ಯ ವಕ್ತಾರ ವಿಜಯ ಪ್ರಸಾದ್ ಅವರು ‘ಎಕ್ಸ್’ (X) ನಲ್ಲಿ ಪ್ರಸಾರ ಮಾಡಿದ್ದಾರೆ.

ಸರಕಾರಕ್ಕೆ ಭದ್ರತೆಯ ಚಿಂತೆ ಇಲ್ಲವೇ?

ವಿಜಯ ಪ್ರಸಾದ್ ಅವರು, ‘ಈ ಜನರು ಅತಿ ಹೆಚ್ಚು ಭದ್ರತೆ ಇರುವ ವಿಮಾನ ನಿಲ್ದಾಣದ ಆವರಣದಲ್ಲಿ ನಮಾಜ್ ಮಾಡಲು ಅನುಮತಿ ತೆಗೆದುಕೊಂಡಿದ್ದರೇ? ವಿಮಾನ ನಿಲ್ದಾಣದ ‘ಟರ್ಮಿನಲ್ 2′ ರಲ್ಲಿ ಇದಕ್ಕೆ ಹೇಗೆ ಅನುಮತಿ ನೀಡಬಹುದು? ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಇದನ್ನು ಅನುಮೋದಿಸುತ್ತಾರೆಯೇ? ರಾಷ್ಟ್ರೀಯ ಸ್ವಯಂಸೇವಕ ಸಂಘವು ಸರಕಾರಿ ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ಪಥಸಂಚಲನ ಮಾಡಿದಾಗ, ಸರಕಾರ ಏಕೆ ಆಕ್ಷೇಪಿಸುತ್ತದೆ? ಮತ್ತು ನಮಾಜ್‌ನಂತಹ ವಿಷಯಗಳ ಕಡೆಗೆ ಏಕೆ ಕಣ್ಣುಮುಚ್ಚಿ ಕುಳಿತುಕೊಳ್ಳುತ್ತದೆ? ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಇದು ಗಂಭೀರ ಭದ್ರತಾ ಕಾಳಜಿ ಅಲ್ಲವೇ?’, ಎಂದು ಪ್ರಶ್ನಿಸಿದ್ದಾರೆ.

ಸಂಪಾದಕೀಯ ನಿಲುವು

ಈಗ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದಕ್ಕೆ ಕಾನೂನು ಮೂಲಕ ನಿಷೇಧ ಹೇರಬೇಕು ಮತ್ತು ನಿಷೇಧವನ್ನು ಉಲ್ಲಂಘಿಸುವವರಿಂದ ಲಕ್ಷಾಂತರ ರೂಪಾಯಿ ದಂಡವನ್ನು ವಸೂಲಿ ಮಾಡಬೇಕು!