ಹಲಾಲ್ ಮಾಂಸ ಬೇಡವಾದರೆ, ಹಿಂದೂ ಖಾಟಿಕ್ ಸಮಾಜವನ್ನು ಜಾಗೃತಗೊಳಿಸಿ! – ರಮೇಶ ಶಿಂದೆ HJS Event Halal Meat

ವೇದಿಕೆಯ ಮೇಲೆ ಎಡದಿಂದ ಶ್ರೀ. ದೇವದತ್ತ ಮಾಜಿ, ಡಾ. ಒಮೆಂದ್ರ ರತ್ನು, ಶ್ರೀ. ಸಂದೀಪ ಬಾಲಕೃಷ್ಣ, ಶ್ರೀ. ರಮೇಶ ಶಿಂದೆ ಮತ್ತು ಶ್ರೀ. ಜೈ ಅಹುಜಾ.

ಭಾರತದಲ್ಲಿನ ‘ಹಲಾಲ್ ಆರ್ಥಿಕತೆ’ ಎಂಬ ಶತ್ರುಬೋಧದ ಅಡಿಯಲ್ಲಿ ನಡೆದ ಚರ್ಚಾ ಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಮೇಶ ಶಿಂದೆ ಅವರೊಂದಿಗೆ ಶ್ರೀ. ಜೈ ಅಹುಜಾ, ಡಾ. ಒಮೆಂದ್ರ ರತ್ನು ಮತ್ತು ಶ್ರೀ. ದೇವದತ್ತ ಮಾಜಿ ಅವರು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಶ್ರೀ. ರಮೇಶ ಶಿಂದೆ ಅವರು,

1. ಎಲ್ಲ ಕಡೆಯ ಮುಸಲ್ಮಾನರು ಹಲಾಲ್ ಉತ್ಪನ್ನಗಳಿಗೆ ಬೇಡಿಕೆ ಇಡುತ್ತಾರೆ; ಆದರೆ ಒಬ್ಬ ಹಿಂದೂ ಕೂಡ ‘ಹಲಾಲ್ ಉತ್ಪನ್ನಗಳು ಬೇಡ’ ಎಂದು ಧ್ವನಿ ಎತ್ತುವುದಿಲ್ಲ ಅಥವಾ ಅಂತಹ ಬೇಡಿಕೆ ಇಡುವುದಿಲ್ಲ.

2. ಯಾವುದೇ ಮುಸಲ್ಮಾನನಿಗೆ, ‘ನಾನು ನಿನಗೆ 50 ರೂಪಾಯಿ ಅಗ್ಗದ ದರದಲ್ಲಿ ‘ಝಟ್ಕಾ’ ಮಾಂಸವನ್ನು ಕೊಡುತ್ತೇನೆ’ ಎಂದು ಹೇಳಿದರೆ, ಅವನು ಅದನ್ನು ನಿರಾಕರಿಸುತ್ತಾನೆ. ಆದರೆ, ಇದಕ್ಕೆ ವಿರುದ್ಧವಾಗಿ, ಹಿಂದೂವಿಗೆ ‘ಝಟ್ಕಾ’ ಇರಲಿ ಅಥವಾ ‘ಹಲಾಲ್’ ಇರಲಿ, ಅದರ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ.

3. ಮತ್ತೊಂದೆಡೆ, ಹಿಂದೂಗಳು ಮಾಂಸ ವ್ಯಾಪಾರ ಮಾಡಲು ಸಿದ್ಧರಿರುವುದಿಲ್ಲ. ಅದರಲ್ಲಿ ಅವರಿಗೆ ಕೆಲವು ತೊಂದರೆಗಳಿರುವುದು ಕಂಡುಬಂದಿದೆ. ಈ ವ್ಯವಹಾರ ಮಾಡಿದರೆ ಮದುವೆಗೆ ಹೆಣ್ಣು ಮಕ್ಕಳು ಸಿಗುವುದಿಲ್ಲ. ಕೆಲವು ಕಡೆ ಒಂದು ತಪ್ಪು ಕಲ್ಪನೆಯೂ ಇದೆ, ಅಂದರೆ, ಪ್ರಾಣಿಗಳನ್ನು ಕೊಂದರೆ ಪಾಪ ತಗಲುತ್ತದೆ. ಆದ್ದರಿಂದ ಮಾಂಸವನ್ನು ಮಾರಾಟ ಮಾಡುವ ಹಿಂದೂ ವ್ಯಾಪಾರಿಗಳು ಕೂಡ ಮುಸಲ್ಮಾನರು ಕೊಂದ ಪ್ರಾಣಿಗಳ ಮಾಂಸವನ್ನೇ ತಂದು ಮಾರಾಟ ಮಾಡುತ್ತಾರೆ.

4. ಖಾಟಿಕ್ ಸಮಾಜದ ಅನೇಕ ಜನರು ಅಶಿಕ್ಷಿತರು ಮತ್ತು ಧರ್ಮದ ಬಗ್ಗೆ ಅರಿವಿಲ್ಲದ ಕಾರಣ ಅವರಿಗೆ ಈ ಬಗ್ಗೆ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ. ಇಸ್ಲಾಂ ಧರ್ಮ ಇಲ್ಲದಿದ್ದಾಗಲೂ ಜನರು ಮಾಂಸಾಹಾರ ಸೇವಿಸುತ್ತಿದ್ದರು. ಆಗ ಹಿಂದೂಗಳು ಪ್ರಾಣಿಗಳನ್ನು ಕೊಂದರೆ ಅವರಿಗೆ ಪಾಪ ತಗಲುತ್ತಿರಲಿಲ್ಲವೇ? ಆದ್ದರಿಂದ ಈ ನಿಟ್ಟಿನಲ್ಲಿ ಹಿಂದೂಗಳಿಗೆ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ.

5. ಈ ಎಲ್ಲಾ ಭಯಾನಕತೆಯನ್ನು ಅಂಕಿ-ಅಂಶಗಳ ರೂಪದಲ್ಲಿ ನೋಡಿದರೆ, ಕೇವಲ ಕೋಳಿ ಮತ್ತು ಮೇಕೆ ಮಾಂಸದ ಒಟ್ಟು ವ್ಯಾಪಾರವು ₹10 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಇದರಲ್ಲಿ ಹೆಚ್ಚಿನ ಮಾಂಸದ ಉತ್ಪಾದನೆಯು ಹಲಾಲ್ ವಿಧಾನದಲ್ಲಿ ಆಗುತ್ತದೆ.

‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯ ಮೂಲಕ ಹಿಂದೂತ್ವನಿಷ್ಠ ಸಂಘಟನೆಗಳು ಹೇಗೆ ಒಗ್ಗೂಡಿ ಹಿಂದೂ ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಿವೆ ಎಂಬುದರ ಬಗ್ಗೆಯೂ ಶ್ರೀ. ಶಿಂದೆ ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಈ ವೇಳೆ ವೈದ್ಯರಾದ ಡಾ. ರತ್ನು ಅವರು, ಹಲಾಲ್ ಮಾಂಸವು ಆರೋಗ್ಯದ ದೃಷ್ಟಿಯಿಂದ ಹಾನಿಕಾರಕವಾಗಿದ್ದು, ‘ಝಟ್ಕಾ’ ಮಾಂಸವು ಸುರಕ್ಷಿತವಾಗಿದೆ ಎಂದು ಹೇಳಿದರು.