ಮಹಾರಾಷ್ಟ್ರದ ಸಚಿವಾಲಯದಲ್ಲಿ ”ವಂದೇ ಮಾತರಂ”ನ ಸಾಮೂಹಿಕ ಗಾಯನ! Vande Mataram Mass Singing

”ವಂದೇ ಮಾತರಂ” ಸಾಮೂಹಿಕ ಗಾಯನದಲ್ಲಿ ಉಪಸ್ಥಿತರಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಇತರರು

ಮುಂಬಯಿ, ನವೆಂಬರ್ 7 (ಸುದ್ದಿ) – ”ವಂದೇ ಮಾತರಂ”ನ ಶತಕೋತ್ತರ ಸುವರ್ಣ ಮಹೋತ್ಸವದ ವರ್ಷಾಚರಣೆ ನಿಮಿತ್ತ ನವೆಂಬರ್ 7 ರಂದು ಸಚಿವಾಲಯದಲ್ಲಿ ಸಚಿವರು, ಅಧಿಕಾರಿಗಳು ಮತ್ತು ನೌಕರರು ”ವಂದೇ ಮಾತರಂ”ನ ಸಾಮೂಹಿಕ ಗಾಯನ ಮಾಡಿದರು. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ ಶೆಲಾರ್, ಕೌಶಲ್ಯ ಅಭಿವೃದ್ಧಿ ಸಚಿವ ಮಂಗಲ ಪ್ರಭಾತ ಲೋಢಾ, ಮುಖ್ಯ ಕಾರ್ಯದರ್ಶಿ ರಾಜೇಶ ಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಈ ಸಮಯದಲ್ಲಿ ಉಪಸ್ಥಿತರಿದ್ದರು. ‘ಪದ್ಮಶ್ರೀ’ ವಿಜೇತ ಪದ್ಮಜಾ ಫೇಣಾಣಿ-ಜೋಗಳೇಕರ ಅವರು ಸಾಮೂಹಿಕ ಗಾಯನದ ನೇತೃತ್ವ ವಹಿಸಿದ್ದರು. ಈ ಸಮಯದಲ್ಲಿ ಸಚಿವಾಲಯದ ಎಲ್ಲ ಮಹಡಿಗಳ ತೆರೆದ ಸ್ಥಳದಲ್ಲಿ ನಿಂತು ಎಲ್ಲರೂ ಮಾತೃಭೂಮಿಗೆ ನಮಸ್ಕರಿಸಿದರು. ಸಚಿವಾಲಯದ ತ್ರಿಮೂರ್ತಿ ಅಂಗಳದಲ್ಲಿ ಈ ಕಾರ್ಯಕ್ರಮ ನಡೆಯಿತು. ವೇದಿಕೆಯ ಪಕ್ಕದಲ್ಲಿ ಭಾರತಮಾತೆಯ ಚಿತ್ರವನ್ನು ಇರಿಸಲಾಗಿತ್ತು.

”ವಂದೇ ಮಾತರಂ” ಸರ್ವಧರ್ಮೀಯರ ಪ್ರೇರಣಾಗೀತೆ! – ದೇವೇಂದ್ರ ಫಡಣವೀಸ್, ಮುಖ್ಯಮಂತ್ರಿ, ಮಹಾರಾಷ್ಟ್ರ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ”ವಂದೇ ಮಾತರಂ” ಅಮೂಲ್ಯ ಕೊಡುಗೆ ನೀಡಿದೆ. ಸ್ವತಂತ್ರ ಭಾರತದ ಧ್ವಜವನ್ನು ಸಿದ್ಧಪಡಿಸುವಾಗಲೂ ಅದರ ಮೇಲೆ ”ವಂದೇ ಮಾತರಂ” ಎಂದು ಬರೆಯಲಾಗಿತ್ತು. ‘ಅಹಿಂಸೆಯಿಂದ ಸ್ವಾತಂತ್ರ್ಯ ದೊರೆಯಿತು’ ಎಂದು ಹೇಳುವವರ ಮತ್ತು ಸ್ವಾತಂತ್ರ್ಯಕ್ಕಾಗಿ ಕ್ರಾಂತಿ ಮಾಡಿದವರ ಇಬ್ಬರಿಗೂ ”ವಂದೇ ಮಾತರಂ” ಪ್ರೇರಣಾಗೀತೆಯಾಯಿತು. ”ವಂದೇ ಮಾತರಂ” ಧಾರ್ಮಿಕ ಗೀತೆಯಾಗಿದೆ ಎಂದು ಕೆಲವರು ವಿವಾದ ಸೃಷ್ಟಿಸುತ್ತಿದ್ದಾರೆ. ಮೌಲಾನಾ ಆಜಾದ್ ಅವರು ”ವಂದೇ ಮಾತರಂ” ಗೀತೆಯು ಎಲ್ಲ ಧರ್ಮಗಳಿಗೂ ಪ್ರೇರಣಾಗೀತೆ ಎಂದು ಹೇಳಿದ್ದರು. ರಾಷ್ಟ್ರಗೀತೆಯ ಮೂಲಕ ರಾಷ್ಟ್ರೀಯ ಭಾವನೆ ಪ್ರತಿಯೊಬ್ಬ ನಾಗರಿಕನಿಗೂ ತಲುಪುತ್ತದೆ. ಪ್ರತಿಯೊಂದು ಶಾಲೆಯಲ್ಲಿ ”ವಂದೇ ಮಾತರಂ” ಹಾಡಬೇಕು, ಎಂದು ಹೇಳಿದರು.