ಜಾಹೀರಾತುಗಳಲ್ಲಿ ಇತರ ಸಂಸ್ಥೆಗಳ ಉತ್ಪನ್ನಗಳನ್ನು ‘ಮೋಸ’ ಎಂದು ಹೇಳುವುದು ತಪ್ಪು!

ಪತಂಜಲಿಯ ಚ್ಯವನಪ್ರಾಶ ಜಾಹೀರಾತಿನಲ್ಲಿ ಇತರ ಸಂಸ್ಥೆಗಳ ಉತ್ಪನ್ನಗಳನ್ನು ‘ಮೋಸ’ ಎಂದು ಕರೆದ ಪ್ರಕರಣ

ನವದೆಹಲಿ – ಜಾಹೀರಾತುಗಳಲ್ಲಿ ಇತರ ಸಂಸ್ಥೆಗಳ ಉತ್ಪನ್ನಗಳನ್ನು ‘ಮೋಸ’ ಎಂದು ಹೇಳುವುದು ತಪ್ಪು; ಏಕೆಂದರೆ ಅದು ಅಪಮಾನಕರ ಮತ್ತು ಆಕ್ಷೇಪಾರ್ಹವಾಗಿದೆ, ಎಂದು ದೆಹಲಿ ಹೈಕೋರ್ಟ್ ಯೋಗಋಷಿ ರಾಮದೇವ ಬಾಬಾ ಅವರ ‘ಪತಂಜಲಿ’ ಸಂಸ್ಥೆಯ ಚ್ಯವನಪ್ರಾಶ ಜಾಹೀರಾತಿಗೆ ಮಧ್ಯಂತರ ತಡೆ ನೀಡಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಕಾಯ್ದಿರಿಸಿದೆ. ‘ಡಾಬರ್ ಇಂಡಿಯಾ’ ಸಂಸ್ಥೆಯು ‘ಪತಂಜಲಿ’ ವಿರುದ್ಧ ಮಾನಹಾನಿ ಮತ್ತು ಅನ್ಯಾಯ ಪೂರ್ವಕ ಸ್ಪರ್ಧೆಯ ಮೊಕದ್ದಮೆಯನ್ನು ದಾಖಲಿಸಿದೆ.

ನೀವು ಅವುಗಳನ್ನು ಕಳಪೆ ಎಂದು ಹೇಳಬಹುದು; ಆದರೆ ‘ಮೋಸ’ ಎಂದು ಕರೆಯಬೇಡಿ!

ಪತಂಜಲಿಯ ಹಿರಿಯ ವಕೀಲ ರಾಜೀವ್ ನಾಯರ್ ಅವರನ್ನು ಹೈಕೋರ್ಟ್ ಪ್ರಶ್ನಿಸಿತು: ‘ಮೋಸ’ ಎಂಬುದರ ಬದಲಿಗೆ ‘ಕಳಪೆ’ ಎಂಬ ಪದವನ್ನು ಬಳಸಿದರೆ ತೊಂದರೆ ಇದೆಯೇ? ನೀವು ಅವೆಲ್ಲವನ್ನೂ ಮೋಸ ಎಂದು ಹೇಳುತ್ತಿದ್ದೀರಿ ಮತ್ತು ‘ನಾನು ಮಾತ್ರ ಸರಿಯಾದವನು’ ಎನ್ನುತ್ತಿದ್ದೀರಿ. ಉಳಿದ ಎಲ್ಲ ಚ್ಯವನಪ್ರಾಶಗಳನ್ನು ನೀವು ಹೇಗೆ ಮೋಸ ಎಂದು ಹೇಳಬಹುದು? ನೀವು ಅವುಗಳನ್ನು ಕಳಪೆ ಎಂದು ಹೇಳಬಹುದು; ಆದರೆ ಅವುಗಳನ್ನು ಮೋಸ ಎಂದು ಕರೆಯಬೇಡಿ. ‘ಮೋಸ’ ಪದವನ್ನು ಹೊರತುಪಡಿಸಿ ನಿಘಂಟಿನಲ್ಲಿ ನಿಮಗೆ ಬೇರೆ ಯಾವುದೇ ಪದ ಸಿಗುವುದಿಲ್ಲವೇ?

ಜಾಹೀರಾತಿನಲ್ಲಿ ಏನಿದೆ?

ಪತಂಜಲಿಯ ಹೊಸ ‘ಪತಂಜಲಿ ಸ್ಪೆಷಲ್ ಚ್ಯವನಪ್ರಾಶ’ದ ಜಾಹೀರಾತಿನಲ್ಲಿ ರಾಮದೇವ ಬಾಬಾ ಅವರು ‘ಚ್ಯವನಪ್ರಾಶದ ಹೆಸರಿನಲ್ಲಿ ಹೆಚ್ಚಿನ ಜನರಿಗೆ ವಂಚನೆಯಾಗುತ್ತಿದೆ’ ಎಂದು ಹೇಳುತ್ತಾರೆ. ಈ ಜಾಹೀರಾತಿನಲ್ಲಿ, ಪತಂಜಲಿಯು ತನ್ನ ಈ ಉತ್ಪನ್ನದಲ್ಲಿ ಆಯುರ್ವೇದದ ೫೧ ಗಿಡಮೂಲಿಕೆಗಳು ಮತ್ತು ಕೇಸರಿ ಇದೆ ಎಂದು ಹೇಳಿಕೊಂಡಿದೆ.