ಮತದಾರರ ಪಟ್ಟಿಗಳ ಕುಲಂಕುಶ ಪರಿಶೀಲನೆಯ ಭಯದಿಂದ ಬಾಂಗ್ಲಾದೇಶಿ ನುಸುಳುಕೋರರು ತಾಯ್ನಾಡಿಗೆ ಪಲಾಯನ ಮಾಡಲು ಯತ್ನ : Bengal SIR Process

ಗಡಿಯಲ್ಲಿ 89 ಬಾಂಗ್ಲಾದೇಶಿ ನುಸುಳುಕೋರರ ಬಂಧನ

AI ರಚಿತವಾದ ಫೋಟೋ

ಉತ್ತರ 24 ಪರಗಣ (ಪಶ್ಚಿಮ ಬಂಗಾಳ) – ಚುನಾವಣಾ ಆಯೋಗವು 12 ರಾಜ್ಯಗಳ ಮತದಾರರ ಪಟ್ಟಿಗಳ ವಿಶೇಷ ಕುಲಂಕುಶ ಪರಿಶೀಲನೆಯನ್ನು ಘೋಷಿಸಿದ ನಂತರ, ಬಾಂಗ್ಲಾದೇಶಿ ನುಸುಳುಕೋರರಲ್ಲಿ ಭಯವುಂಟಾಗಿದೆ. ಅನೇಕರು ದೇಶವನ್ನು ತೊರೆದು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಶೀರ್‌ಹಾಟ್ ಗಡಿಯಿಂದ ಬಾಂಗ್ಲಾದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದ 48 ನುಸುಳುಕೋರರನ್ನು ಗಡಿ ಭದ್ರತಾ ದಳವು (BSF) ಹಿಡಿದು ಪೊಲೀಸರಿಗೆ ಒಪ್ಪಿಸಿದೆ. ಎಲ್ಲಾ ಆರೋಪಿಗಳು ಪಶ್ಚಿಮಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿ ಮನೆಗೆಲಸ ಅಥವಾ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. (ನುಸುಳುಕೋರರು ಮನೆಗೆಲಸ ಮತ್ತು ಕಾರ್ಮಿಕರಾಗಿ ಕೆಲಸ ಮಾಡುವಾಗ, ಅವರು ಪೊಲೀಸರಿಗೆ ಮತ್ತು ಅವರಿಗೆ ಕೆಲಸ ನೀಡುವ ಭಾರತೀಯರಿಗೆ ಏಕೆ ಗೊತ್ತಾಗಲಿಲ್ಲ? ಅಥವಾ ಇದು ತಿಳಿದಿದ್ದರೂ, ಅವರು ಕಡಿಮೆ ಕೂಲಿಗೆ ಕೆಲಸ ಮಾಡುತ್ತಿದ್ದರು ಎಂದು ನಿರ್ಲಕ್ಷಿಸಲಾಯಿತೇ? ಇದರ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು! – ಸಂಪಾದಕರು) ಕಳೆದ 3 ದಿನಗಳಲ್ಲಿ ಒಟ್ಟು 89 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹವರನ್ನು ಬಂಧಿಸಿ, ಸಾಕುವುದಕ್ಕಿಂತ ಮತ್ತು ಅವರನ್ನು ಅವರ ದೇಶಕ್ಕೆ ಹಿಂದಿರುಗಿಸುವ ಪ್ರಕ್ರಿಯೆಯನ್ನು ನಡೆಸುವುದಕ್ಕಿಂತ, ಅವರು ತಾವಾಗಿಯೇ ತಮ್ಮ ದೇಶಕ್ಕೆ ಮರಳುತ್ತಿದ್ದರೆ, ಅವರನ್ನು ತಡೆಯಬಾರದು ಎಂದು ಭಾರತೀಯರು ಭಾವಿಸುತ್ತಾರೆ!