ಅನೇಕ ಷರತ್ತುಗಳ ಮೇಲೆ ಪಾರಿವಾಳಗಳಿಗೆ ೪ ವಿಭಿನ್ನ ಸ್ಥಳಗಳಲ್ಲಿ ಕಾಳು ಹಾಕಲು ಅನುಮತಿ!

ಮುಂಬಯಿ – ನಾಗರಿಕರ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಗಮನದಲ್ಲಿಟ್ಟುಕೊಂಡು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಆಡಳಿತವು ಮುಂಬಯಿನಲ್ಲಿ ೪ ಸ್ಥಳಗಳಲ್ಲಿ ಬೆಳಿಗ್ಗೆ ೭ ರಿಂದ ೯ ರವರೆಗೆ ಪಾರಿವಾಳಗಳಿಗೆ ಕಾಳು ಹಾಕಲು ಅವಕಾಶ ಕಲ್ಪಿಸಲು ಅನುಮತಿ ನೀಡಲು ಸಮ್ಮತಿಸಿದೆ. ಆ ಸ್ಥಳಗಳೆಂದರೆ: ವರ್ಲಿ ಜಲಾಶಯ, ಲೋಖಂಡ್ವಾಲಾ ಬ್ಯಾಕ್ ರೋಡ್ನಲ್ಲಿರುವ ಮ್ಯಾಂಗ್ರೋವ್ಸ್ ಪ್ರದೇಶ, ಮುಲುಂಡ್ ಕ್ರೀಕ್ ಬಳಿಯ ಪ್ರದೇಶ ಮತ್ತು ಬೋರಿವಲಿಯ ಗೋರೈ ಮೈದಾನ. ಆದಾಗ್ಯೂ, ಈ ಪಾರಿವಾಳ ಗೂಡುಗಳ (ಕಬೂತರ್ಖಾನಾ) ನಿರ್ವಹಣೆಯನ್ನು ನೋಡಿಕೊಳ್ಳಲು ಸಾಮಾಜಿಕ ಸಂಸ್ಥೆಗಳು ಮುಂದೆ ಬಂದರೆ ಮಾತ್ರ ಈ ಅನುಮತಿ ನೀಡಲಾಗುವುದು ಎಂದು ಬಿಎಂಸಿ ಸ್ಪಷ್ಟಪಡಿಸಿದೆ. ಪಾರಿವಾಳಗಳ ಜಾಗದ ಸ್ವಚ್ಛತೆಯನ್ನು ಕಾಪಾಡುವುದು, ನಾಗರಿಕರ ದೂರುಗಳು ಬಂದಾಗ ಅವುಗಳನ್ನು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ಈ ಎಲ್ಲಾ ವಿಷಯಗಳ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳು ಗಮನ ಹರಿಸಬೇಕಾಗುತ್ತದೆ ಎಂದು ಮಹಾನಗರ ಪಾಲಿಕೆ ಹೇಳಿದೆ.
ಪಾರಿವಾಳಗಳಿಗೆ ನಿರ್ದಿಷ್ಟ ಸಮಯದಲ್ಲಿ ನಿಯಂತ್ರಿತ ರೀತಿಯಲ್ಲಿ ಆಹಾರ ಹಾಕುವ ಬಗ್ಗೆ ಬಂದಿದ್ದ ೩ ಅರ್ಜಿಗಳ ಮೇಲೆ ಬಿಎಂಸಿ ನಾಗರಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ನಂತರ, ೯ ಸಾವಿರದ ೭೭೯ ಸಲಹೆಗಳು ಮತ್ತು ಆಕ್ಷೇಪಣೆಗಳು ಸ್ವೀಕೃತಗೊಂಡವು. ಪಾರಿವಾಳ ಗೂಡುಗಳನ್ನು ಮುಚ್ಚುವುದು, ಮುಂದುವರಿಸುವುದು, ಸ್ವಚ್ಛತೆ, ನಿಯಂತ್ರಿತ ಕಾಳು ಹಾಕುವುದು ಮುಂತಾದ ಅಂಶಗಳು ಅವುಗಳಲ್ಲಿ ಸೇರಿದ್ದವು. ಆಕ್ಷೇಪಣೆಗಳಲ್ಲಿ ಆರೋಗ್ಯ, ಮಾಲಿನ್ಯ ಮತ್ತು ಜನದಟ್ಟಣೆಯ ವಿಷಯಗಳೂ ಇದ್ದವು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!