ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವು ವಿಮಾನ ಅಪಘಾತದಲ್ಲಿ ಆಗಿರಲಿಲ್ಲ! – ಉಪರಾಷ್ಟ್ರಪತಿ Netaji Subhash Chandra Bose

 

ರಾಮನಾಥಪುರಂ (ತಮಿಳುನಾಡು) – ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವು 1945 ರ ವಿಮಾನ ಅಪಘಾತದಲ್ಲಿ ಆಗಿರಲಿಲ್ಲ, ಎಂದು ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಅಕ್ಟೋಬರ್ 31 ರಂದು ಹೇಳಿಕೆ ನೀಡಿದ್ದಾರೆ. ರಾಮನಾಥಪುರಂ ಸಮೀಪದ ಪಾಸುಮಪೋನನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮುತ್ತುರಾಮಲಿಂಗ ತೇವರ್ ಅವರ 118 ನೇ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ರಾಧಾಕೃಷ್ಣನ್ ಅವರು ಮಾತು ಮುಂದುವರೆಸಿ, ”ನನ್ನ ಬಳಿ ಖಚಿತವಾದ ಪುರಾವೆಗಳು ಇಲ್ಲ; ಆದರೆ ನೇತಾಜಿ ಅವರ ಸಾವು ಆ ದುರಂತದಲ್ಲಿ ಆಗಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ. ಸ್ವತಃ ನೇತಾಜಿಯವರ ಅನುಯಾಯಿಗಳಾಗಿದ್ದ ತೇವರ್ ಅವರು ಇದನ್ನು ಹೇಳಿದ್ದರು ಮತ್ತು ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ತೇವರ್ ಅವರು ತಮ್ಮ ಜೀವನದಲ್ಲಿ ಎಂದಿಗೂ ಸುಳ್ಳು ಹೇಳಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ತೇವರ್ ಅವರ ಕೊಡುಗೆಯನ್ನು ಗೌರವಿಸಿ ಪ್ರಧಾನಿ ನೆಹರು ಅವರು ಅವರನ್ನು ಮುಖ್ಯಮಂತ್ರಿ ಮಾಡಲು ಬಯಸಿದ್ದರು; ಆದರೆ ಅವರು ಅದನ್ನು ನಿರಾಕರಿಸಿದರು. ‘ನೇತಾಜಿಯವರಿಗೆ ನ್ಯಾಯ ಸಿಗಬೇಕು’ ಎಂಬುದೇ ಅವರ ಏಕೈಕ ಗುರಿಯಾಗಿತ್ತು, ಎಂದು ಹೇಳಿದರು.