ಹಿಂದೂ ಗಿರಾಕಿಯ ಕೈಯ 3 ಬೆರಳುಗಳಿಗೆ ಗಂಭೀರ ಗಾಯ!

ಠಾಣೆ – ಡೊಂಬಿವಲಿ ಪೂರ್ವದ ಎಂ.ಐ.ಡಿ.ಸಿ. ಪ್ರದೇಶದಲ್ಲಿರುವ ಎಮ್ಸ್ ಆಸ್ಪತ್ರೆ ಎದುರು ಮತಾಂಧ ತೆಂಗಿನಕಾಯಿ ಮಾರಾಟಗಾರನು ಹಿಂದೂ ಗಿರಾಕಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ಘಟನೆ ಅಕ್ಟೋಬರ್ 30 ರಂದು ಮಧ್ಯಾಹ್ನ ಸಂಭವಿಸಿದೆ. ಈ ದಾಳಿಯಲ್ಲಿ ದಯಾನಂದ ಮಹಾದೇವ ಜತನ (ವಯಸ್ಸು 58 ವರ್ಷ) ಅವರ ಕೈಯ 3 ಬೆರಳುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರ ಕಿರುಬೆರಳು ಸಂಪೂರ್ಣವಾಗಿ ತುಂಡಾಗಿದೆ. ಈ ಪ್ರಕರಣದ ಕುರಿತು ಮಾನಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ತೆಂಗಿನಕಾಯಿ ಮಾರಾಟಗಾರ ಸಲೀಂ ಸದ್ಯ ಪರಾರಿಯಾಗಿದ್ದಾನೆ. ಈ ಘಟನೆಯ ನಂತರ ಸ್ಥಳೀಯ ವ್ಯಾಪಾರಿಗಳು ಮತ್ತು ನಿವಾಸಿಗಳಲ್ಲಿ ಭಯದ ವಾತಾವರಣ ಉಂಟಾಗಿದೆ. (ಕಾನೂನಿನ ಭಯ ಇಲ್ಲದಿರುವುದರಿಂದಲೇ ಮತಾಂಧರು ಇಂತಹ ಕೃತ್ಯಗಳನ್ನು ಮಾಡುವ ಧೈರ್ಯ ಮಾಡುತ್ತಿದ್ದಾರೆ! – ಸಂಪಾದಕರು)
ಇಲ್ಲಿನ ಮಿಲಾಪನಗರ ಪ್ರದೇಶದ ನಿವಾಸಿ ದಯಾನಂದ ಜತನ ಅವರು ಎಮ್ಸ್ ಆಸ್ಪತ್ರೆಯ ಬಳಿಯ ತೆಂಗಿನಕಾಯಿ ಮಾರಾಟಗಾರ ಸಲೀಂನಿಂದ ತೆಂಗಿನಕಾಯಿ ಖರೀದಿಸಲು ಹೋಗಿದ್ದರು. ಜತನ್ ಅವರಿಗೆ ತೆಂಗಿನಕಾಯಿ ಒಣಗಿದೆ ಮತ್ತು ಕೆಟ್ಟಿದೆ ಎಂದು ಅನಿಸಿತು; ಆದ್ದರಿಂದ ಅವರು ಸಲೀಂಗೆ ಈ ಬಗ್ಗೆ ಕೇಳಿದರು. ಆಗ ಅವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಕೋಪಗೊಂಡ ಸಲೀಂ ಹಠಾತ್ತನೆ ಜತನ್ ಅವರಿಗೆ ತಳ್ಳಾಡುತ್ತಾ, ತೆಂಗಿನಕಾಯಿ ಸುಲಿಯುವ ಚಾಕುವಿನಿಂದ ಜತನ್ ಅವರ ಎಡಗೈ ಮೇಲೆ ಹಲ್ಲೆ ಮಾಡಿದನು. ಜತನ ಅವರಿಗೆ ಇಲ್ಲಿನ ಎಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಸಂಪಾದಕೀಯ ನಿಲುವುಮತಾಂಧರ ಕ್ರೂರತೆಯನ್ನು ಗಮನಿಸಿರಿ ಮತ್ತು ಅವರ ಬಳಿ ಏನನ್ನಾದರೂ ಖರೀದಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿರಿ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!