ಅಮರಾವತಿಯಲ್ಲಿ ನಾಪತ್ತೆಯಾದ 504 ಬಾಂಗ್ಲಾದೇಶಿ, ರೋಹಿಂಗ್ಯಾ ಮತ್ತು ಅಕ್ರಮ ನಾಗರಿಕರ ವಿರುದ್ಧ ಪ್ರಕರಣ ದಾಖಲು!

ಅಮರಾವತಿ – ಅಮರಾವತಿ ಜಿಲ್ಲೆಯಲ್ಲಿ ನಾಪತ್ತೆಯಾಗಿರುವ 504 ಬಾಂಗ್ಲಾದೇಶಿ, ರೋಹಿಂಗ್ಯಾ ಮತ್ತು ಅಕ್ರಮ ನಾಗರಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾಜಪದ ಮಾಜಿ ಸಂಸದ ಕಿರಿಟ ಸೋಮಯ್ಯ ಅವರ ಮುಂದಾಳತ್ವದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇದರಲ್ಲಿ 485 ಮುಸಲ್ಮಾನರು ಮತ್ತು 19 ಹಿಂದೂಗಳು ಸೇರಿದ್ದಾರೆ.

ಅಮರಾವತಿ ಮಹಾನಗರ ಪಾಲಿಕೆಯು 1 ಸಾವಿರದ 709 ಜನನ ಪ್ರಮಾಣಪತ್ರಗಳನ್ನು ಅಕ್ರಮವಾಗಿ ನೀಡಿತ್ತು. ಅವುಗಳನ್ನು ರದ್ದುಪಡಿಸಿ ಮರಳಿ ಪಡೆಯಲು ಕ್ರಮಗಳು ನಡೆಯುತ್ತಿವೆ ಎಂದು ಕಿರಿಟ ಸೋಮಯ್ಯ ಅವರು ಮಾಹಿತಿ ನೀಡಿದ್ದರು.

ಸಂಪಾದಕೀಯ ನಿಲುವು

ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಿದರೆ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಬೀಳುತ್ತದೆ!