ವಿಶೇಷ ತನಿಖಾ ದಳದಿಂದ ಅಕ್ಕಸಾಲಿಗನಿಂದ ೪೦೦ ಗ್ರಾಂ ಗಿಂತ ಹೆಚ್ಚು ಚಿನ್ನ ವಶಕ್ಕೆ ! – Sabarimala Gold Smith Arrested

ಶಬರಿಮಲೈ ಅಯ್ಯಪ್ಪ ದೇವಸ್ಥಾನದಲ್ಲಿನ ಚಿನ್ನದ ಕಳ್ಳತನದ ಪ್ರಕರಣ !

ತಿರುವನಂತಪುರಂ (ಕೇರಳ) – ಕೇರಳದ ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ದೇವಾಲಯದಲ್ಲಿ ೨೦೧೯ ರಲ್ಲಿ ನಡೆದ ಚಿನ್ನದ ಕಳ್ಳತನದ ಪ್ರಕರಣದ ತನಿಖೆಯಲ್ಲಿ ವಿಶೇಷ ತನಿಖಾ ದಳ (ಎಸ್‍ಐಟಿ) ದೊಡ್ಡ ಯಶಸ್ಸುಗಳಿಸಿದೆ. ಪೊಲೀಸ್ ವರಿಷ್ಠಾಧಿಕಾರಿ ಶಶಿಧರನ್ ಅವರ ನೇತೃತ್ವದ ಈ ತನಿಖಾ ತಂಡವು ಬಳ್ಳಾರಿ ಮೂಲದ ಒಬ್ಬ ಅಕ್ಕಸಾಲಿಗನಿಂದ ೪೦೦ ಗ್ರಾಂ ಗಿಂತ ಹೆಚ್ಚು ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡಿದೆ. ಈ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯ ಪತ್ತನಂತಿಟ್ಟದಲ್ಲಿರುವ ಮನೆಯಿಂದ ಸುಮಾರು ೨ ಲಕ್ಷ ರೂಪಾಯಿ ನಗದನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಒಂದು ವರದಿಯ ಪ್ರಕಾರ, ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಶಬರಿಮಲೆ ದೇವಸ್ಥಾನದ ಅರ್ಚಕ ಎಂದು ತನ್ನನ್ನು ತಾನು ಪರಿಚಯಿಸಿಕೊಂಡು ಗೋವರ್ಧನ್ ಎಂಬ ಅಕ್ಕಸಾಲಿಗನಿಗೆ ಈ ಚಿನ್ನವನ್ನು ಮಾರಾಟ ಮಾಡಿದ್ದ. ಪೊಟ್ಟಿ ೨೦೧೯ ರಲ್ಲಿ ೪೭೬ ಗ್ರಾಂ ಚಿನ್ನವನ್ನು ಮಾರುಕಟ್ಟೆ ಬೆಲೆಯಲ್ಲಿ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.