
ನವ ದೆಹಲಿ – ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಈಗ ತನ್ನ ಸಂಘಟನೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳಲು ನಿರ್ಧರಿಸಿದೆ. ಇದರ ಅಡಿಯಲ್ಲಿ, ಜೈಶ್ ಭಯೋತ್ಪಾದಕ ಮಸೂದ್ ಅಜರ್ ಹೆಸರಿನಲ್ಲಿ ಪತ್ರವನ್ನು ಪ್ರಸಾರ ಮಾಡುವ ಮೂಲಕ ತನ್ನ ಮಹಿಳಾ ಶಾಖೆಯ ಸ್ಥಾಪನೆಯನ್ನು ಘೋಷಿಸಿದೆ. ಈ ಸಂಘಟನೆಗೆ ‘ಜಮಾತ್-ಅಲ್-ಮೋಮಿನಾತ್’ ಎಂದು ಹೆಸರಿಡಲಾಗಿದೆ. ಬಹಾವಲ್ಪುರದ ಮರ್ಕಜ್ (ಪ್ರಧಾನ ಕಚೇರಿ) ಉಸ್ಮಾನ್-ಓ-ಅಲಿಯಲ್ಲಿ ಮಹಿಳಾ ನೇಮಕಾತಿ ಪ್ರಾರಂಭಿಸಿದೆ.
ಮಸೂದ್ ಅಜರ್ನ ಸಹೋದರಿ ಪ್ರಮುಖಳು!
‘ಅಲ್-ಕಲಾಂ ಮೀಡಿಯಾ’ ಎಂಬ ಪ್ರಚಾರ ಶಾಖೆಯ ಮೂಲಕ ಜೈಶ್ ಪ್ರಸಾರ ಮಾಡಿದ ಪತ್ರದಲ್ಲಿ, ಜಮಾತ್-ಅಲ್-ಮೋಮಿನಾತ್ನ ಮಹಿಳಾ ಶಾಖೆಯ ಮುಖ್ಯಸ್ಥೆಯಾಗಿ ಮಸೂದ್ ಅಜರ್ನ ಸಹೋದರಿ ಸಾದಿಯಾ ಅಜರ್ ಅವರನ್ನು ನೇಮಿಸಲಾಗಿದೆ ಎಂದು ಹೇಳಲಾಗಿದೆ. ‘ಆಪರೇಷನ್ ಸಿಂಧೂರ್’ನಲ್ಲಿ ಜೈಶ್ನ ಪ್ರಧಾನ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ ಆಕೆಯ ಪತಿ ಯೂಸುಫ್ ಅಜರ್ ಹತ್ಯೆಯಾಗಿದ್ದ.
ಜೈಶ್ ಬಹಾವಲ್ಪುರ್, ಕರಾಚಿ, ಮುಜಫರಾಬಾದ್, ಕೊಟ್ಲಿ, ಹರಿಪುರ ಮತ್ತು ಮಾನ್ಸೆಹರಾ ಅವರ ಪ್ರಧಾನ ಕಚೇರಿಗಳಲ್ಲಿ ಕಲಿಯುತ್ತಿರುವ ಬಡ ಮಹಿಳೆಯರನ್ನು ಮತ್ತು ತಮ್ಮ ಭಯೋತ್ಪಾದಕ ಕಮಾಂಡರ್ಗಳ ಪತ್ನಿಯರನ್ನು ಈ ಮಹಿಳಾ ಶಾಖೆಯಲ್ಲಿ ನೇಮಿಸಿಕೊಂಡಿದೆ.
ಮಹಿಳಾ ಶಾಖೆಯ ಉದ್ದೇಶ!
ಮಹಿಳೆಯರ ಬ್ರೈನ್ವಾಶ್ ಮಾಡುವುದು ಮತ್ತು ಅವರನ್ನು ತಮ್ಮ ಬಲೆಗೆ ಬೀಳಿಸುವುದು ಇದರ ಗುರಿಯಾಗಿದೆ. ಈ ಶಾಖೆಯು ಮಾನಸಿಕ ಪ್ರಚಾರ ಮತ್ತು ನೇಮಕಾತಿ ಕಾರ್ಯವನ್ನು ಮಾಡುತ್ತದೆ. ಈ ಗುಂಪಿನ ಚಟುವಟಿಕೆಗಳು ಸಾಮಾಜಿಕ ಮಾಧ್ಯಮಗಳು ಮತ್ತು ಕೆಲವು ಮದರಸಾಗಳ ಜಾಲದ ಮೂಲಕ ನಿರಂತರವಾಗಿ ನಡೆಯುತ್ತಿವೆ.
‘ಆಪರೇಷನ್ ಸಿಂಧೂರ್’ ನಂತರ ಜೈಶ್ನ ಹೆಜ್ಜೆ!
ಈ ಹಿಂದೆ ಜೈಶ್ ಮಹಿಳೆಯರು ಶಸ್ತ್ರಾಸ್ತ್ರಗಳನ್ನು ಎತ್ತಿಕೊಳ್ಳುವುದನ್ನು, ಯುದ್ಧಕ್ಕೆ ಹೋಗುವುದನ್ನು ಅಥವಾ ಸಂಘಟನೆಯಲ್ಲಿ ಭಾಗವಹಿಸುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತಿತ್ತು; ಆದರೆ ಮೂಲಗಳ ಪ್ರಕಾರ, ‘ಆಪರೇಷನ್ ಸಿಂಧೂರ್’ ನಂತರ ಬದಲಾದ ಪರಿಸ್ಥಿತಿಯಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಆತನ ಸಹೋದರ ತಲ್ಹಾ ಅಲ್ ಸೈಫ್ ಅವರು ಮಹಿಳೆಯರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಮಹಿಳೆಯರನ್ನು ಬಳಸಿಕೊಳ್ಳುವ ಭಯೋತ್ಪಾದಕ ಸಂಘಟನೆಗಳು!
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ, ಬೋಕೋ ಹರಾಮ್, ಮತ್ತು ಹಮಾಸ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ಮಹಿಳೆಯರನ್ನು ಬಳಸಿಕೊಂಡಿವೆ. ಈ ಸಂಘಟನೆಗಳು ಮಹಿಳೆಯರನ್ನು ಆತ್ಮಹತ್ಯಾ ದಾಳಿಕೋರರಾಗಿ ಬಳಸಿಕೊಂಡಿವೆ; ಆದರೆ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದೀನ್ ಈ ಕೆಲಸಕ್ಕಾಗಿ ಎಂದಿಗೂ ಮಹಿಳೆಯರನ್ನು ಬಳಸಿಲ್ಲ. ಈಗ ಜೈಶ್ ಮಹಿಳೆಯರ ಒಂದು ಶಾಖೆಯನ್ನು ಸ್ಥಾಪಿಸಿರುವುದನ್ನು ನೋಡಿದರೆ, ಈ ಮಹಿಳೆಯರನ್ನು ಆತ್ಮಹತ್ಯಾ ಬಾಂಬ್ ಸ್ಫೋಟಗಳಿಗೆ ಬಳಸುವ ಸಾಧ್ಯತೆ ಇದೆ.
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !