ಎಲ್ಲ ಆರೋಪಿಗಳು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು

ಕಣ್ಣೂರು (ಕೇರಳ) – ಇಲ್ಲಿನ ನ್ಯಾಯಾಲಯವು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಇಬ್ಬರು ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ತಲಶ್ಶೇರಿ ಹೆಚ್ಚುವರಿ ಸತ್ರ ನ್ಯಾಯಾಲಯವು ೧೪ ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ. ಈ ಎಲ್ಲಾ ಆರೋಪಿಗಳು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಾಗಿದ್ದಾರೆ. ನಿರ್ದೋಷಿ ಎಂದು ಬಿಡುಗಡೆಗೊಂಡವರಲ್ಲಿ ಎನ್.ಕೆ. ಸುನಿಲ್ ಕುಮಾರ್ ಅಲಿಯಾಸ್ ಕೋಡಿ ಸುನಿ, ಕೆ.ಕೆ. ಮೊಹಮ್ಮದ್ ಶಫಿ, ಕೆ. ಶಿನೋಜ್, ಟಿ. ಸುಜೀತ, ಟಿ.ಕೆ. ಸುಮೇಶ, ಟಿ.ಪಿ. ಶಮೀಲ, ಎ.ಕೆ. ಶಮ್ಮಾಸ್, ಕೆ.ಕೆ. ಅಬ್ಬಾಸ್, ರಾಹುಲ್, ಕೆ.ವಿ. ವಿನೀಶ್, ಪಿ.ವಿ. ವಿಜಿತ್, ಫೈಸಲ್, ಸಾರೀಶ್ ಮತ್ತು ಟಿ.ಪಿ. ಸಜೀರ್ ಸೇರಿದ್ದಾರೆ. ಉಳಿದ ೨ ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ.
ಮೇ ೨೮, ೨೦೧೦ ರಂದು ಕೇರಳದ ನವ ಮಾಹೆಯಲ್ಲಿ ವಿಜಿತ್ ಮತ್ತು ಶಿನೋಜ್ ಎಂಬ ಸಂಘದ ಸ್ವಯಂಸೇವಕರ ಮೇಲೆ ಬಾಂಬ್ ಎಸೆಯಲಾಗಿತ್ತು. ದಾಳಿ ನಡೆದಾಗ, ವಿಜಿತ್ ಮತ್ತು ಶಿನೋಜ್ ಅವರು ಪಲ್ಲೂರ್ನಲ್ಲಿ ಸಿಪಿಎಂನ ಓರ್ವ ಕಾರ್ಯಕರ್ತನ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಹೆ ನ್ಯಾಯಾಲಯಕ್ಕೆ ಹಾಜರಾಗಿ ಮನೆಗೆ ಮರಳುತ್ತಿದ್ದರು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ