ಎಲ್ಲ ಆರೋಪಿಗಳು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು

ಕಣ್ಣೂರು (ಕೇರಳ) – ಇಲ್ಲಿನ ನ್ಯಾಯಾಲಯವು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಇಬ್ಬರು ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ತಲಶ್ಶೇರಿ ಹೆಚ್ಚುವರಿ ಸತ್ರ ನ್ಯಾಯಾಲಯವು ೧೪ ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ. ಈ ಎಲ್ಲಾ ಆರೋಪಿಗಳು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಾಗಿದ್ದಾರೆ. ನಿರ್ದೋಷಿ ಎಂದು ಬಿಡುಗಡೆಗೊಂಡವರಲ್ಲಿ ಎನ್.ಕೆ. ಸುನಿಲ್ ಕುಮಾರ್ ಅಲಿಯಾಸ್ ಕೋಡಿ ಸುನಿ, ಕೆ.ಕೆ. ಮೊಹಮ್ಮದ್ ಶಫಿ, ಕೆ. ಶಿನೋಜ್, ಟಿ. ಸುಜೀತ, ಟಿ.ಕೆ. ಸುಮೇಶ, ಟಿ.ಪಿ. ಶಮೀಲ, ಎ.ಕೆ. ಶಮ್ಮಾಸ್, ಕೆ.ಕೆ. ಅಬ್ಬಾಸ್, ರಾಹುಲ್, ಕೆ.ವಿ. ವಿನೀಶ್, ಪಿ.ವಿ. ವಿಜಿತ್, ಫೈಸಲ್, ಸಾರೀಶ್ ಮತ್ತು ಟಿ.ಪಿ. ಸಜೀರ್ ಸೇರಿದ್ದಾರೆ. ಉಳಿದ ೨ ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ.
ಮೇ ೨೮, ೨೦೧೦ ರಂದು ಕೇರಳದ ನವ ಮಾಹೆಯಲ್ಲಿ ವಿಜಿತ್ ಮತ್ತು ಶಿನೋಜ್ ಎಂಬ ಸಂಘದ ಸ್ವಯಂಸೇವಕರ ಮೇಲೆ ಬಾಂಬ್ ಎಸೆಯಲಾಗಿತ್ತು. ದಾಳಿ ನಡೆದಾಗ, ವಿಜಿತ್ ಮತ್ತು ಶಿನೋಜ್ ಅವರು ಪಲ್ಲೂರ್ನಲ್ಲಿ ಸಿಪಿಎಂನ ಓರ್ವ ಕಾರ್ಯಕರ್ತನ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಹೆ ನ್ಯಾಯಾಲಯಕ್ಕೆ ಹಾಜರಾಗಿ ಮನೆಗೆ ಮರಳುತ್ತಿದ್ದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ