ಸೇನೆಯು ಕೆಲಸವನ್ನು ನಿಲ್ಲಿಸಿ ಭೂಮಿಯನ್ನು ವಶಕ್ಕೆ ಪಡೆಯಿತು !

ಭಾಗ್ಯನಗರ (ತೆಲಂಗಾಣ) – ಇಲ್ಲಿನ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದ ರೆಹವೋಟ್ ನಗರದಲ್ಲಿ ೨೨ ಸಾವಿರದ ೫೦೦ ಚದರ ಅಡಿ ಭೂಮಿಯನ್ನು ತೆಲಂಗಾಣ ವಕ್ಫ್ ಮಂಡಳಿಯು ವಕ್ಫ್ ಭೂಮಿ ಎಂದು ಘೋಷಿಸಿ ಅಲ್ಲಿ ಕಬ್ರ (ಕಬರಸ್ತಾನ್) ನಿರ್ಮಿಸುವ ಪ್ರಕ್ರಿಯೆ ಪ್ರಾರಂಭಿಸಿತ್ತು; ಆದರೆ ಈ ಭೂಮಿ ಭಾರತೀಯ ರಕ್ಷಣಾ ಪಡೆಯದಾಗಿದ್ದರಿಂದ ಸೇನೆಯು ಈ ಕೆಲಸವನ್ನು ನಿಲ್ಲಿಸಿ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಈ ಕ್ಷೇತ್ರದಲ್ಲಿ ಶೀಘ್ರದಲ್ಲಿ ಉಪಚುನಾವಣೆ ನಡೆಯಲಿದ್ದು, ಅದಕ್ಕಾಗಿಯೇ ರಾಜ್ಯದ ಕಾಂಗ್ರೆಸ್ ಸರಕಾರವು ವಕ್ಫ್ ಮಂಡಳಿಗೆ ಕಬ್ರಕ್ಕಾಗಿ ಅನುವೋಟಿ ನೀಡಿತ್ತು.
ಈ ಭೂಮಿ ರಕ್ಷಣಾ ಇಲಾಖೆಯ ಆಸ್ತಿಯಾಗಿದ್ದು, ವಕ್ಫ್ ಮಂಡಳಿಗೆ ಇದರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸೇನೆಯು ತಿಳಿಸಿದೆ. ಈ ಪ್ರದೇಶದಲ್ಲಿ ಯಾವುದೇ ಅತಿಕ್ರಮಣವನ್ನು ತಡೆಯಲು ಸೇನೆಯು ಕ್ರಮಗಳನ್ನು ಪ್ರಾರಂಭಿಸಿದೆ.

ಕಾಂಗ್ರೆಸ್ ವೋಟಬ್ಯಾಂಕ್ ರಾಜಕೀಯಕ್ಕಾಗಿ ಯಾವುದೇ ಮಟ್ಟಕ್ಕೆ ಇಳಿಯಬಹುದು !
ಜುಬಿಲಿ ಹಿಲ್ಸ್ ಉಪಚುನಾವಣೆಯ ಮೊದಲು ತನ್ನ ವೋಟಬ್ಯಾಂಕನ್ನು ಸಂತುಷ್ಟಪಡಿಸಲು ಕಾಂಗ್ರೆಸ್ ಸರಕಾರವು ಮುಸಲ್ಮಾನರಿಗಾಗಿ ಸೇನೆಯ ಈ ಭೂಮಿಯನ್ನು ನೀಡಿದೆ ಎಂದು ಭಾಜಪ ಹೇಳಿದೆ. ಭೂಮಿಯನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸುವುದು, ಸಂಸತ್ತಿನಲ್ಲಿ ವಕ್ಫ್ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವುದು ವೋಟ್ತು ಈಗ ಸೇನೆಯ ಭೂಮಿಯನ್ನು ಕಬಳಿಸಲು ಪ್ರಯತ್ನಿಸುವುದು, ಈ ಎಲ್ಲ ವಿಷಯಗಳು ಕಾಂಗ್ರೆಸ್ ವೋಟಬ್ಯಾಂಕ್ ರಾಜಕೀಯಕ್ಕಾಗಿ ಯಾವುದೇ ಮಟ್ಟಕ್ಕೆ ಇಳಿಯಬಹುದು ಎಂಬುದನ್ನು ತೋರಿಸುತ್ತವೆ, ಎಂದು ಹೇಳಿದೆ.
ಸಂಪಾದಕೀಯ ನಿಲುವು‘ಕಾಂಗ್ರೆಸ್ ಸರಕಾರ ಎಂದರೆ ಪಾಕಿಸ್ತಾನಿ ಆಡಳಿತ’ ಎಂದು ಪ್ರತಿ ಬಾರಿಯೂ ಸಾಬೀತಾಗುತ್ತದೆ, ಇದನ್ನೇ ಈ ಘಟನೆ ಹೇಳುತ್ತದೆ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !