ಆನ್ಲೈನ್ ಆಟದಲ್ಲಿ ₹೧೩ ಲಕ್ಷ ಕಳೆದುಕೊಂಡ ೬ ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ! 6th Class Boy Suicide Online Games

  • ಇಂತಹ ಆ್ಯಪ್‌ಗಳನ್ನು ಸರಕಾರ ಈಗಾಗಲೇ ನಿಷೇಧಿಸಿದೆ. ಆದ್ದರಿಂದ ಮಕ್ಕಳ ಜೀವನವನ್ನು ಹಾಳು ಮಾಡುವ ಇಂತಹ ಆ್ಯಪ್‌ಗಳ ಮಾಲೀಕರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು!

  • ಇಂತಹ ಆನ್‌ಲೈನ್ ಆಟಗಳಿಗೆ ಮಕ್ಕಳು ಬಲಿಯಾಗದಂತೆ ತಡೆಯಲು ಅವರಿಗೆ ಸಾಧನೆ ಕಲಿಸುವುದು ಆವಶ್ಯಕ!

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಲಕ್ಷ್ಮಣಪುರಿಯಲ್ಲಿ ೬ ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಆಟದಲ್ಲಿ ₹೧೩ ಲಕ್ಷ ಕಳೆದುಕೊಂಡು ನೊಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಕೂಡಲೇ ಮೋಹನಲಾಲ್‌ಗಂಜ್ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

೧. ಲಕ್ಷ್ಮಣಪುರಿಯ ಧನುಸಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸುರೇಶಕುಮಾರ್ ಯಾದವ್ ಅವರ ಏಕೈಕ ಪುತ್ರ ಯಶಕುಮಾರ್ (೧೪ ವರ್ಷ) ೬ನೇ ತರಗತಿಯಲ್ಲಿ ಓದುತ್ತಿದ್ದನು.

೨. ಸುರೇಶಕುಮಾರ್ ಯಾದವ್ ಅವರು, ಯೂನಿಯನ್ ಬ್ಯಾಂಕ್‌ನ ಬಿಜನೋರ್ ಶಾಖೆಯಲ್ಲಿ ತಮ್ಮ ಖಾತೆ ಇದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ ೧೫ ರಂದು ಅವರು ಪಾಸ್‌ಬುಕ್ ಅಪ್‌ಡೇಟ್ ಮಾಡಿದಾಗ, ಖಾತೆಯಲ್ಲಿದ್ದ ₹೧೩ ಲಕ್ಷ ಕಡಿಮೆ ಆಗಿರುವುದು ಗಮನಕ್ಕೆ ಬಂದಿದೆ.

೩. ಈ ಬಗ್ಗೆ ವಿಚಾರಿಸಿದಾಗ, ಆನ್‌ಲೈನ್ ಗೇಮಿಂಗ್ ಮೂಲಕ ಹಣ ವರ್ಗಾವಣೆ ಆಗಿರುವುದಾಗಿ ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ. ಮಗ ಆಟ ಆಡಲು ಬಳಸುತ್ತಿದ್ದ ಮೊಬೈಲ್ ಫೋನ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರಿಂದ ಈ ಹಣ ವರ್ಗಾವಣೆಯಾಗಿದೆ.

೪. ಸುರೇಶಕುಮಾರ್ ಮನೆಗೆ ಬಂದು ಯಶಕುಮಾರ್‌ಗೆ ಹಣ ಕಳೆದುಕೊಂಡಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಆತ ವಿಷಯ ಮರೆಮಾಚಲು ಯತ್ನಿಸಿದ್ದ, ಆದರೆ ನಂತರ ಆನ್‌ಲೈನ್ ಆಟ ಆಡಿ ಹಣ ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆಗ ತಂದೆ ಆತನಿಗೆ ಆ ಆಟವನ್ನು ಆಡದಂತೆ ಎಚ್ಚರಿಕೆ ನೀಡಿದ್ದಾರೆ.

೫. ಅದರನಂತರ ಟ್ಯೂಷನ್ ಶಿಕ್ಷಕರು, ಯಶ್ ಜೊತೆ ಮಾತನಾಡಿ ಅವನಿಗೆ ವಿಷಯ ತಿಳಿ ಹೇಳುವುದಾಗಿ ಹೇಳಿದ್ದು, ಚಿಂತಿಸಬೇಡಿ ಎಂದು ಸುರೇಶಕುಮಾರ್‌ಗೆ ಭರವಸೆ ನೀಡಿದ್ದಾರೆ. ಟ್ಯೂಷನ್ ಮುಗಿದ ನಂತರ, ಯಶ್ ತನ್ನ ಕೋಣೆಗೆ ಹೋಗಿ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

೬. ಎರಡು ವರ್ಷಗಳ ಹಿಂದೆ, ತಮ್ಮ ಜಮೀನಿನ ಒಂದು ಭಾಗವನ್ನು ಮಾರಿ ಆ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡಿದ್ದರು ಎಂದು ಸುರೇಶಕುಮಾರ್ ಹೇಳಿದ್ದಾರೆ. ಅವರು ಪೇಂಟಿಂಗ್ ಕೆಲಸ ಮಾಡಿ ತಮ್ಮ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.