ತೃಣಮೂಲ ಕಾಂಗ್ರೆಸ್ ಸರಕಾರದಿಂದ ಜಾವೇದ್ ಅಖ್ತರ್ ಅವರ ಉಪಸ್ಥಿತಿಯ ಕಾರ್ಯಕ್ರಮ ರದ್ದು- Javed Akhtar Event Cancelled

ಕೊಲಕಾತಾ – ಬಂಗಾಳದ ಉರ್ದು ಅಕಾಡೆಮಿಯಲ್ಲಿ ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಜಾವೇದ್ ಅಖ್ತರ್ ಅವರನ್ನು ಆಹ್ವಾನಿಸಲಾಗಿತ್ತು; ಆದರೆ, ‘ಜಮಿಯತ್ ಉಲೆಮಾ-ಎ-ಹಿಂದ್’ ವಿರೋಧ ವ್ಯಕ್ತಪಡಿಸಿದ ನಂತರ ಈ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಯಿತು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಸಚಿವರಾದ ಸಿದ್ಧಿಕುಲ್ಲಾ ಚೌಧರಿ ಅವರ ಆದೇಶದ ಮೇರೆಗೆ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಜಮಿಯತ್ ಉಲೆಮಾ-ಎ-ಹಿಂದ್, ಜಾವೇದ್ ಅಖ್ತರ್ ಅವರ ಆಹ್ವಾನವನ್ನು ವಿರೋಧಿಸಿ ಪತ್ರ ಬರೆದಿತ್ತು. (ತೃಣಮೂಲ ಕಾಂಗ್ರೆಸ್‌ನ ಮತಾಂಧತೆ ಇದರಿಂದ ಕಂಡು ಬರುತ್ತದೆ! ಜಾವೇದ್ ಅಖ್ತರ್ ಅವರನ್ನು ಸುಧಾರಣಾವಾದಿ ಮುಸ್ಲಿಂ ಎಂದು ಪರಿಗಣಿಸಲಾಗಿದೆ. ಮತಾಂಧ ಚಟುವಟಿಕೆಗಳಲ್ಲಿ ತೊಡಗಿರುವ ಜಮಿಯತ್ ಉಲೆಮಾ-ಎ-ಹಿಂದ್‌ನ ಕಟ್ಟರವಾದಿ ಚಟುವಟಿಕೆಗಳ ಬಗ್ಗೆ ಅವರಿಗೆ ಏನು ಹೇಳಬೇಕಾಗಿದೆ? – ಸಂಪಾದಕರು) ಪತ್ರದಲ್ಲಿ, ಜಾವೇದ್ ಅಖ್ತರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ನೋವಾಗಬಹುದು. ಜಾವೇದ್ ಅಖ್ತರ್ ಈ ಹಿಂದೆ ಇಸ್ಲಾಂ ಬಗ್ಗೆ ಅವಮಾನಕರ ಹೇಳಿಕೆಗಳನ್ನು ನೀಡಿದ್ದಾರೆ. ಆದ್ದರಿಂದ ಅಲ್ಪಸಂಖ್ಯಾತ ಸಮುದಾಯದವರ ಮನಸ್ಸಿನಲ್ಲಿ ಅವರ ಬಗ್ಗೆ ಕೋಪವಿದೆ ಎಂದು ತಿಳಿಸಲಾಗಿದೆ.

ಸಂಪಾದಕೀಯ ನಿಲುವು

ಈಗ ಅಭಿವ್ಯಕ್ತಿ ಸ್ವಾತಂತ್ರ್ಯದವರು ಈ ವಿಷಯದ ಬಗ್ಗೆ ಯಾಕೆ ಸುಮ್ಮನಿದ್ದಾರೆ?