
ಕೊಲಕಾತಾ (ಬಂಗಾಳ) – ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಹುವಾ ಮೊಯಿತ್ರಾ ಅವರು ಮಾತನಾಡಿ, ‘ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರ ತಲೆ ಕತ್ತರಿಸಿ ಅದನ್ನು ಫಲಕದ ಮೇಲೆ ಇಟ್ಟು ಜನರಿಗೆ ತೋರಿಸಬೇಕು’ ಎಂದು ಕಿಡಿ ಕಾರಿದ್ದಾರೆ. ಈ ವರ್ಷದ ಆರಂಭದಿಂದಲೂ ಮೋದಿ ಸರಕಾರವು ಭಾರತದಲ್ಲಿ ನೆಲೆಸಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ಹೊರಹಾಕಲು ‘ಆಪರೇಷನ್ ಪುಶ್ಬ್ಯಾಕ್’ ಅನ್ನು ಪ್ರಾರಂಭಿಸಿತ್ತು. ಅದರ ಹಿನ್ನೆಲೆಯಲ್ಲಿ ಮೊಯಿತ್ರಾ ಅವರು ಮಾತನಾಡುತ್ತಿದ್ದರು. ಅಕ್ರಮ ವಲಸಿಗರಿಗೆ ಪಶ್ಚಿಮ ಬಂಗಾಳವು ಅತ್ಯಂತ ಸುಲಭ ಮಾರ್ಗವಾಗಿದೆ ಎಂಬುದನ್ನು ಅವರು ಅಲ್ಲಗಳೆದರು.
ಮೊಯಿತ್ರಾ ಅವರು ಮುಂದುವರಿದು ಹೇಳಿದ್ದೇನೆಂದರೆ…,
1. ನಮ್ಮ ಗಡಿಗಳನ್ನು ರಕ್ಷಿಸುವವರು ಯಾರೂ ಇಲ್ಲವೇ? ಇತರ ದೇಶಗಳ ಲಕ್ಷಾಂತರ-ಕೋಟಿಗಟ್ಟಲೆ ಜನರು ಭಾರತವನ್ನು ಪ್ರವೇಶಿಸುತ್ತಿದ್ದಾರೆ. ಒಂದು ವೇಳೆ ಅವರು ನಮ್ಮ ತಾಯಂದಿರು -ಸಹೋದರಿಯರ ಮೇಲೆ ಕಣ್ಣಿಟ್ಟಿದ್ದರೆ, ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದರೆ, ಮೊದಲು ಅಮಿತ್ ಶಾ ಅವರ ತಲೆ ಕತ್ತರಿಸಿ ಫಲಕದ ಮೇಲೆ ಇಡಬೇಕು.
“Amit Shah’s head should be cut off and put on the table” – Mahua Moitra, Trinamool Congress MP pic.twitter.com/MeDsBNyiJy
— BJP West Bengal (@BJP4Bengal) August 29, 2025
2. ಅಕ್ರಮ ನುಸುಳುವಿಕೆಯನ್ನು ತಡೆಯದಿರುವುದು ಗೃಹಮಂತ್ರಿಗಳ ವೈಫಲ್ಯವಾಗಿದೆ.
3. ಸ್ಥಳೀಯ ಜನರು ಗಡಿ ಭದ್ರತಾ ದಳದ ಸೈನಿಕರಿಗೆ ಹೆದರುತ್ತಾರೆ. ಬಂಗಾಳದಲ್ಲಿ ಯಾರೂ ಅಕ್ರಮವಾಗಿ ಪ್ರವೇಶಿಸುತ್ತಿರುವುದು ನಮಗೆ ಕಾಣಿಸುತ್ತಿಲ್ಲ.
ಸಂಪಾದಕೀಯ ನಿಲುವುಭಾರತದಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಯಾರೂ ಯಾರ ಮೇಲೆಯೂ ಟೀಕಿಸಬಹುದು; ಆದರೆ ಟೀಕಿಸುವಾಗ ಮೊಯಿತ್ರಾ ಅವರು ಉಪಯೋಗಿಸಿದ ಭಾಷೆ, ಅದೂ ಕೂಡ ಕೇಂದ್ರ ಗೃಹಮಂತ್ರಿಗಳ ಬಗ್ಗೆ, ಇದು ದ್ವೇಷಪೂರಿತ ಮತ್ತು ಖಂಡನೀಯವಾಗಿದೆ. ಇಂತಹ ಜನರಿಂದ ಕೂಡಿರುವ ಪಕ್ಷ ಒಂದು ರಾಜ್ಯದಲ್ಲಿ ಅಧಿಕಾರದಲ್ಲಿರುವುದು ನಾಚಿಕೆಗೇಡಿನ ವಿಷಯವಾಗಿದೆ. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ