ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ನವರಾತ್ರಿ ಉತ್ಸವದವರೆಗೆ ರಾತ್ರಿ ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಗುಂಡು ಹಾರಿಸಲು ಆದೇಶ!

ಗುವಾಹಟಿ (ಅಸ್ಸಾಂ) – ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ರಾತ್ರಿ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಗುಂಡು ಹಾರಿಸಲು ನೀಡಲಾಗಿರುವ ಆದೇಶವು ನವರಾತ್ರಿ ಉತ್ಸವದವರೆಗೆ ಮುಂದುವರಿಯಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ತಿಳಿಸಿದ್ದಾರೆ. 2025 ರ ಜೂನ್ 13 ರಂದು ನಡೆದ ಗಲಭೆಗಳ ನಂತರ ಈ ಆದೇಶವನ್ನು ನೀಡಲಾಗಿತ್ತು.

ಕೊಕ್ರಾಜಾರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸರಮಾ, ಈ ನಿರ್ಧಾರವು ಮುನ್ನೆಚ್ಚರಿಕೆ ಕ್ರಮವಾಗಿದ್ದು, ಧುಬ್ರಿಯಲ್ಲಿ ಶಾಂತಿ ಕಾಪಾಡಲು ಮತ್ತು ಅಲ್ಲಿನ ಸನಾತನ ಧರ್ಮೀಯ ಅಲ್ಪಸಂಖ್ಯಾತರನ್ನು ಮತಾಂಧರಿಂದ ರಕ್ಷಿಸಲು ಇದನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಸದ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಯಾವುದೇ ಹೊಸ ಹಿಂಸಾತ್ಮಕ ಘಟನೆಗಳು ನಡೆದಿಲ್ಲ; ಆದರೆ ಯಾರಾದರೂ ಅಶಾಂತಿ ಹರಡಲು ಪ್ರಯತ್ನಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಸಂಪಾದಕೀಯ ನಿಲುವು

ಇಂತಹ ಆದೇಶ ಹೊರಡಿಸಿದರೆ ಮಾತ್ರ ಮತಾಂಧರನ್ನು ನಿಯಂತ್ರಿಸಬಹುದು, ಭಾಜಪ ಆಡಳಿತವಿರುವ ಅಸ್ಸಾಂನಿಂದ ಇತರ ರಾಜ್ಯಗಳು ಇದನ್ನು ಕಲಿಯಬೇಕು!