‘ಪಾಂಡುರಗನಿಗೆ ಮಾಂಸಾಹಾರ ನಡೆಯುತ್ತದೆ’ ಎಂಬ ಸುಪ್ರಿಯಾ ಸುಳೆಯವರ ಹೇಳಿಕೆಯ ಪ್ರಕರಣ

ಮುಂಬಯಿ – ಶರದ್ ಚಂದ್ರ ಪವಾರ್ ಬಣದ ಸಂಸದೆ ಸುಪ್ರಿಯಾ ಸುಳೆ ಅವರು ‘ನಾನು ಮಾಂಸಾಹಾರ ಸೇವಿಸುವುದು ನನ್ನ ಪಾಂಡುರಂಗನಿಗೆ ನಡೆಯುತ್ತದೆ, ನಿಮಗೆ ಏನು ಸಮಸ್ಯೆ?’ ಎಂದು ಹೇಳಿದ್ದನ್ನು ಭಾಜಪ ತೀವ್ರವಾಗಿ ವಿರೋಧಿಸಿ ಟೀಕಿಸಿದೆ. ‘ಪೀಳಿಗೆಗಳಿಂದಲೂ ಶಾಕಾಹಾರದ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿರುವ ವಾರಕರಿಗಳ ಆರಾಧ್ಯ ದೈವವಾದ ಪಾಂಡುರಂಗನಿಗೆ ಮಾಂಸಾಹಾರ ಸ್ವೀಕಾರಾರ್ಹ’ ಎಂದು ಹೇಳುವುದು ಮೂರ್ಖತನವಾಗಿದೆ. ನಿಮಗೆ ವಾರಕರಿ ಸಂಪ್ರದಾಯವನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅದನ್ನು ಅವಮಾನಿಸಬೇಡಿ; ಇನ್ನು ಮೌಲಾನಾ ಶರದ್ ಪವಾರ್ ಅವರ ಮಗಳಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ?’ ಎಂದು ಭಾಜಪ ಆಧ್ಯಾತ್ಮಿಕ ಘಟಕದ ಮುಖ್ಯಸ್ಥ ತುಷಾರ್ ಭೋಸ್ಲೆ ಅವರು ಸುಪ್ರಿಯಾ ಸುಳೆ ಅವರನ್ನು ಟೀಕಿಸಿದ್ದಾರೆ.
ಸುಪ್ರಿಯಾ ಸುಳೆ ಅವರ ಹೇಳಿಕೆಯ ಕುರಿತು ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, “ಇದಕ್ಕೆ ನಾನು ಉತ್ತರ ನೀಡುವುದಿಲ್ಲ. ಮಹಾರಾಷ್ಟ್ರದ ಎಲ್ಲಾ ವಾರಕರಿಗಳು ಇದಕ್ಕೆ ಉತ್ತರ ನೀಡುತ್ತಾರೆ” ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಭಾಜಪ ಶಾಸಕ ಪ್ರವೀಣ್ ದರೆಕರ್ ಅವರು, “ಯಾರು ಏನು ಬೇಕಾದರೂ ತಿನ್ನಬಹುದು, ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ನಮ್ಮ ಮಹಾರಾಷ್ಟ್ರ ವಾರಕರಿ ಸಂಪ್ರದಾಯಕ್ಕೆ ಸೇರಿದ್ದು. ಸುಪ್ರಿಯಾ ಸುಳೆ ಅವರಿಗೆ ಈ ರೀತಿಯ ಮಾತುಗಳು ಶೋಭೆ ತರುವುದಿಲ್ಲ” ಎಂದು ಹೇಳಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ