ನಟಿ ಪ್ರಿಯಾ ಬಾಪಟ್ ಅವರ ಅನುಭವ

ಮುಂಬಯಿ – “ಒಮ್ಮೆ ನಾನು ನನ್ನ ದಾದರ ಮನೆಯಲ್ಲಿ ಕಿಟಕಿಯಿಂದ ಒಂದು ಆತ್ಮ ಒಳಗೆ ಪ್ರವೇಶಿಸುವುದನ್ನು ಗಮನಿಸಿದೆ. ಅದು ಸುಮ್ಮನೆ ಸುತ್ತಮುತ್ತ ನೋಡುತ್ತಿತ್ತು, ಬೇರೇನೂ ಮಾಡುತ್ತಿರಲಿಲ್ಲ. ಮನೆಯಲ್ಲಿ ನನಗೆ ಗೆಜ್ಜೆಗಳ ಝಣ್-ಝಣ್ ಶಬ್ದ ಕೇಳಿಸುತ್ತಿತ್ತು. ಆ ಶಬ್ದ ನಿಧಾನವಾಗಿ ನನ್ನ ತಾಯಿ-ತಂದೆಯ ಕೋಣೆಯ ಕಡೆಗೆ ಹೋಯಿತು. ನಾನು ತುಂಬಾ ಹೆದರುತ್ತೇನೆ. ಆದರೆ ಆ ಸಮಯದಲ್ಲಿ ನನಗೆ ಸ್ವಲ್ಪವೂ ಭಯವಾಗಲಿಲ್ಲ. ನನಗೆ ಆ ಶಬ್ದ ಮುಂದಕ್ಕೆ ಹೋಗುತ್ತಿರುವ ಅನುಭವವಾಯಿತು. ತಾಯಿ-ತಂದೆಯ ಕೋಣೆಯ ಬಳಿ ಹೋದ ನಂತರ ಶಬ್ದ ನಿಂತಿತು. ಸ್ವಲ್ಪ ಸಮಯದ ನಂತರ ಮತ್ತೆ ಶಬ್ದ ಬಂತು ಮತ್ತು ಎಲ್ಲವೂ ಶಾಂತವಾಯಿತು. ಈ ಘಟನೆ ಮುಂಜಾನೆ 3-4 ಗಂಟೆ ಸುಮಾರಿಗೆ ನಡೆಯಿತು. ನಾನು ಬೆಳಿಗ್ಗೆ ಈ ವಿಷಯವನ್ನು ತಾಯಿ-ತಂದೆಗೆ ಹೇಳುತ್ತೇನೆ ಎಂದು ಯೋಚಿಸಿದೆ; ಆದರೆ ನಂತರ ಅವರೇ ನನಗೆ, ‘ಯಾರೋ ನಮ್ಮ ಪಕ್ಕದಲ್ಲಿ ಬಂದು ಕುಳಿತಂತಾಯಿತು. ಆ ವ್ಯಕ್ತಿ ನಂತರ ಹೊರಟು ಹೋದರು’ ಎಂದು ಹೇಳಿದರು. ಆ ವ್ಯಕ್ತಿ ವಾಸ್ತುಪುರುಷ ಆಗಿದ್ದರು. ಕೊಂಕಣದಲ್ಲಿ ಇದರ ಬಗ್ಗೆ ಮಾತನಾಡುತ್ತಾರೆ” ಎಂದು ನಟಿ ಪ್ರಿಯಾ ಬಾಪಟ ಹೇಳಿದ್ದಾರೆ. ಅವರು ‘ಅಂಧೇರಾ’ ಎಂಬ ವೆಬ್ ಸೀರೀಸ್ ನಲ್ಲಿ ನಟಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅವರ ಈ ಅನುಭವದ ಬಗ್ಗೆ ಕೆಲವರು ಅವರನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಅವರು ಪ್ರಚಾರಕ್ಕಾಗಿ ಹೀಗೆ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಸಂಪಾದಕೀಯ ನಿಲುವುಇದರ ಬಗ್ಗೆ ಪ್ರಿಯಾ ಬಾಪಟ್ ಅವರನ್ನು ಟೀಕಿಸುವ ಬದಲು, ಅವರಿಗೆ ಆದ ಅನುಭವದ ಬಗ್ಗೆ ಅಧ್ಯಯನ ಮಾಡಿದರೆ ವೈಚಾರಿಕ ವಾದಿಗಳಿಗೆ ಒಳ್ಳೆಯದಾಗಬಹುದು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!