ಉದಯಪುರ (ರಾಜಸ್ಥಾನ್)ದಲ್ಲಿ ಬೀದಿ ನಾಯಿಗಳ ದಾಳಿಗೆ 5 ವರ್ಷದ ಬಾಲಕನಿಗೆ ಗಾಯ – Dog Attack Kid Injured

ಉದಯಪುರ (ರಾಜಸ್ಥಾನ) – ಆಗಸ್ಟ್ 17 ರಂದು ಮಧ್ಯಾಹ್ನ ಇಲ್ಲಿನ ಗೌತಮ್ ವಿಹಾರ್ ಕಾಲೋನಿಯಲ್ಲಿ 5 ವರ್ಷದ ಗೌರಾಂಶ ಮೇಲೆ 3 ಬೀದಿ ನಾಯಿಗಳು ದಾಳಿ ಮಾಡಿವೆ. ಅವು ಅವನನ್ನು ಎಳೆದುಕೊಂಡು ಹೋಗಿ ಕಚ್ಚಲು ಪ್ರಾರಂಭಿಸಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಗುವಿನ ಅಳು ಕೇಳಿದ ತಾಯಿ ಮನೆಯಿಂದ ಹೊರಗೆ ಬಂದು, ನಾಯಿಗಳ ಹಿಡಿತದಿಂದ ಗೌರಾಂಶನನ್ನು ರಕ್ಷಿಸಿದ್ದಾರೆ. ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಈ ಘಟನೆಯಿಂದ ಸ್ಥಳೀಯರು ಇಲ್ಲಿನ ಬೀದಿ ನಾಯಿಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಈ ನಾಯಿಗಳನ್ನು ದೇಶದ ನಾಯಿಪ್ರೇಮಿಗಳ ಮನೆಗಳಲ್ಲಿ ಬಿಡಬೇಕು ಎಂದು ಯಾರಾದರೂ ಬೇಡಿಕೆ ಇಟ್ಟರೆ ಆಶ್ಚರ್ಯಪಡಬೇಕಾಗಿಲ್ಲ!