|

ಬತ್ತೀಸಶಿರಾಳ (ಸಾಂಗ್ಲಿ ಜಿಲ್ಲೆ) – ಕಳೆದ 23 ವರ್ಷಗಳಿಂದ ಬತ್ತೀಸಶಿರಾಳ (ಸಾಂಗ್ಲಿ ಜಿಲ್ಲೆ) ದಲ್ಲಿ ಜೀವಂತ ನಾಗರ ಹಾವುಗಳ ಪೂಜೆ ಮತ್ತು ಪ್ರದರ್ಶನಕ್ಕೆ ನಿಷೇಧವಿತ್ತು. ಈಗ ಈ ನಿಷೇಧವನ್ನು ಸ್ವಲ್ಪಮಟ್ಟಿಗೆ ಸಡಿಲಿಸಲಾಗಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ವನ್ಯಜೀವಿ ಇಲಾಖೆಯು 21 ಅರ್ಜಿದಾರರಿಗೆ ಶೈಕ್ಷಣಿಕ ಉದ್ದೇಶ ಮತ್ತು ಜಾಗೃತಿಗಾಗಿ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ವಿಧಿಸಿ ನಾಗರ ಹಾವುಗಳನ್ನು ಹಿಡಿಯಲು ಅನುಮತಿ ನೀಡಿದೆ. ಇದರಿಂದಾಗಿ ಜುಲೈ 29 ರ ನಾಗಪಂಚಮಿ ಶಿರಾಳಕರ್ ಅವರಿಗೆ ಅತ್ಯಂತ ವಿಶಿಷ್ಟ ಮತ್ತು ವಿಶೇಷ ಆನಂದವನ್ನು ನೀಡಿತು. ಸಮಾಜದಲ್ಲಿ ಸರ್ಪ ಸಂರಕ್ಷಣೆ ಮತ್ತು ಸಾಂಪ್ರದಾಯಿಕ ಜ್ಞಾನದ ಪ್ರಸಾರಕ್ಕಾಗಿ ಈ ಅನುಮತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಭಾಜಪ ಶಾಸಕ ಸತ್ಯಜಿತ್ ದೇಶಮುಖ್ ಅವರು, “2002 ರಿಂದ ಶಿರಾಳದ ನಾಗಪಂಚಮಿಗೆ ನ್ಯಾಯಾಲಯದ ನಿರ್ಬಂಧಗಳು ಬಂದಿದ್ದವು. ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ. ಅನೇಕ ನ್ಯಾಯಾಲಯದ ಹೋರಾಟಗಳು ನಡೆದವು; ಆದರೆ ಯಶಸ್ಸು ಸಿಗಲಿಲ್ಲ. ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಗಪಂಚಮಿಗೆ ಅದರ ಹಿಂದಿನ ವೈಭವವನ್ನು ಮರಳಿ ತರುವುದಾಗಿ ಶಿರಾಳಕರ್ ಅವರಿಗೆ ಭರವಸೆ ನೀಡಿದ್ದರು. ಅವರು ಆ ಭರವಸೆಯನ್ನು ಈಡೇರಿಸಿದ್ದಾರೆ. ಈ ನಿರ್ಧಾರದಲ್ಲಿ ಎಲ್ಲರ ಕೊಡುಗೆಯೂ ಇದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಭಾಪತಿ ಹಣಮಂತ ಪಾಟೀಲ್, ಸಂಪತ ರಾವ್ ದೇಶಮುಖ್, ಭಾಝಪ ನಾಯಕರಾದ ರಣಜಿತ್ ಸಿಂಗ್ ನಾಯಕ್, ಸಾಮ್ರಾಟ್ ಶಿಂದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್