Sourav Ganguly : ‘ಭಯೋತ್ಪಾದನೆ ಇರಬಾರದು, ಆದರೆ ಆಟ ಮುಂದುವರಿಯಬೇಕಂತೆ!’

  • ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಭಾರತ-ಪಾಕ್ ಕ್ರಿಕೆಟ್ ಪಂದ್ಯದ ಹೇಳಿಕೆ

  • ಸಾಮಾಜಿಕ ಮಾಧ್ಯಮಗಳಲ್ಲಿ ಗಂಗೂಲಿ ವಿರುದ್ಧ ಟೀಕೆ!

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ (ಬಲ)

ನವದೆಹಲಿ – ಸೆಪ್ಟೆಂಬರ್ 2025 ರಲ್ಲಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ವಿರೋಧ ವ್ಯಕ್ತವಾಗಿದೆ. ಈ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ. ಈ ಕುರಿತು ಎಎನ್‌ಐ (ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್) ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, “ನನಗೆ ಯಾವುದೇ ಸಮಸ್ಯೆ ಇಲ್ಲ. ಆಟ ಮುಂದುವರಿಯಬೇಕು. ಪಹಲ್ಗಾಮ್‌ನಲ್ಲಿ ಏನಾಯಿತೋ ಅದು ನಡೆಯಬಾರದಿತ್ತು, ಆದರೆ ಆಟ ಮುಂದುವರಿಯಬೇಕು. ಭಯೋತ್ಪಾದನೆ ಇರಬಾರದು. ಅದನ್ನು ತಡೆಯಬೇಕು. ಭಾರತವು ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ” ಎಂದು ಹೇಳಿದರು. ಈ ಹೇಳಿಕೆಯ ನಂತರ ಗಂಗೂಲಿ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

ಕೆಲವು ದಿನಗಳ ಹಿಂದೆ, ಬ್ರಿಟನ್‌ನಲ್ಲಿ ನಡೆಯಲಿರುವ ‘ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಬೇಕಿತ್ತು; ಆದರೆ ಭಾರತೀಯರ ವಿರೋಧದ ನಂತರ ಅದನ್ನು ರದ್ದುಗೊಳಿಸಲಾಯಿತು.

ಸಂಪಾದಕೀಯ ನಿಲುವು

  • ದುರದೃಷ್ಟವಶಾತ್ ಪಹಲ್ಗಾಮ್ ಅಥವಾ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಯಲ್ಲಿ ಗಂಗೂಲಿ ಅವರ ಕುಟುಂಬಕ್ಕೆ ಹಾನಿಯಾಗಿದ್ದರೆ, ಅವರು ಇದೇ ರೀತಿ ಹೇಳುತ್ತಿದ್ದರೇ?
  • ದೇಶಕ್ಕಿಂತ ಆಟ ಮತ್ತು ಹಣ ದೊಡ್ಡದು ಎಂದು ಭಾವಿಸುವ ಆಟಗಾರರು ಎಂದಾದರೂ ದೇಶಕ್ಕಾಗಿ ಆಡಿರುತ್ತಾರೆಯೇ?