ಆಸ್ಸಾಂನಲ್ಲಿ ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರ ವಶದಲ್ಲಿ 9 ಲಕ್ಷ 57 ಸಾವಿರ ಎಕರೆ ಭೂಮಿ !- Himanta Biswa Sarma

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರಿಂದ ಮಾಹಿತಿ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ

ಗೌಹತ್ತಿ(ಆಸ್ಸಾಂ) – ಆಸ್ಸಾಂನಲ್ಲಿ ಸುಮಾರು 29 ಲಕ್ಷ ಬಿಘಾ (ಅಂದರೆ 9 ಲಕ್ಷ .57 ಸಾವಿರ ಎಕರೆ) ಭೂಮಿ ಬಾಂಗ್ಲಾದೇಶಿ ನುಸುಳುಕೋರರು ಮತ್ತು ಬಂಗಾಳಿ ಮುಸ್ಲಿಮರ ವಶದಲ್ಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಹೇಳಿದ್ದಾರೆ. “2021 ರಲ್ಲಿ ರಾಜ್ಯದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಭೂಮಿಯನ್ನು ಮುಕ್ತಗೊಳಿಸಲು ವಿಶೇಷ ಅಭಿಯಾನವನ್ನು ನಡೆಸಲಾಗುತ್ತಿದೆ ಮತ್ತು ಇದನ್ನು ನಿಲ್ಲಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಲಾಗುತ್ತಿದೆ” ಎಂದು ಮುಖ್ಯಮಂತ್ರಿ ಸರಮಾ ಈ ಸಂದರ್ಭದಲ್ಲಿ ಹೇಳಿದ್ದಾರೆ. ಅವರು ದರಂಗ್ ಜಿಲ್ಲೆಯ ಗೋರುಖುಟಿ ಬಹು ಉದ್ದೇಶಿತ ಕೃಷಿ ಯೋಜನೆಯ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. “ದರಂಗ್‌ ನಲ್ಲಿ ಇದುವರೆಗೆ 77 ಸಾವಿರ 420 ಬಿಘಾ ಭೂಮಿಯನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ. ಈ ಒತ್ತುವರಿಯನ್ನು ಬಹುಸಂಖ್ಯಾತ ಬಂಗಾಳಿ ಮುಸ್ಲಿಮರು ಮಾಡಿದ್ದರು” ಎಂದು ಮುಖ್ಯಮಂತ್ರಿ ಸರಮಾ ಮಾಹಿತಿ ನೀಡಿದರು. (ಕೆಲವು ದಿನಗಳ ಹಿಂದೆ ಆಸ್ಸಾಂನ ಗ್ವಾಲಪಾಡಾ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಕಾರ್ಯಾಚರಣೆಯನ್ನು ‘ಜಮಿಯತ್ ಉಲೆಮಾ-ಎ-ಹಿಂದ್’ ಸಂಘಟನೆಯು ತೀವ್ರವಾಗಿ ವಿರೋಧಿಸಿ, ಮುಸ್ಲಿಮರನ್ನು ಗುರಿಪಡಿಸಲಾಗಿದೆ ಎಂದು ಆರೋಪಿಸಿತ್ತು. ಆದ್ದರಿಂದ, ಬಾಂಗ್ಲಾದೇಶಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಕಳುಹಿಸುವಾಗ, ಅಂತಹ ನುಸುಳುಕೋರಪರ ಸಂಘಟನೆಗಳ ಸದಸ್ಯರನ್ನೂ ಅಲ್ಲಿಗೆ ಶಾಶ್ವತವಾಗಿ ಕಳುಹಿಸಬೇಕು! – ಸಂಪಾದಕರು)

ಮುಖ್ಯಮಂತ್ರಿ ಸರಮಾ ಮಾಹಿತಿ ನೀಡುತ್ತಾ,

1. ದರಂಗ್ ಜಿಲ್ಲೆಯ ಅಭಿಯಾನದ ನಂತರ ಬೋರಸೊಲ್ಲಾ, ಲುಮಡಿಂಗ, ಬುರಹಾಪಹಾಡ, ಪಾಭಾ, ಬತದ್ರಾ, ಚಾಪರ್ ಮತ್ತು ಪೈಕನ್ ಪ್ರದೇಶಗಳಲ್ಲೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದೆ.

2. ಕಳೆದ 4 ವರ್ಷಗಳಲ್ಲಿ ರಾಜ್ಯದಲ್ಲಿ 1 ಲಕ್ಷ 29 ಸಾವಿರ ಬಿಘಾ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಈ ಭೂಮಿಯನ್ನು ಅರಣ್ಯ ಪ್ರದೇಶ ಮತ್ತು ಸ್ಥಳೀಯ ಜನರ ಬಳಕೆಗಾಗಿ ಬಳಸಲಾಗುವುದು.

3. 2-3 ಅಭಿಯಾನಗಳ ನಂತರ ನಾವು ಭಯಪಡುತ್ತೇವೆ, ಮಣಿಯುತ್ತೇವೆ ಅಥವಾ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ ಎಂದು ಯಾರಾದರೂ ಭಾವಿಸಿದರೆ, ಅದು ಅವರ ತಪ್ಪು ಕಲ್ಪನೆಯಾಗಿದೆ.

4. ಒಂದು ಕಾಲದಲ್ಲಿ ನಾವು ‘ಶಂಕರ-ಮಾಧವ’ ಬದಲಿಗೆ ‘ಶಂಕರ-ಅಜಾನ್’ ಎಂದು ಹೇಳಲು ಪ್ರಾರಂಭಿಸಿದ್ದೆವು. ಅಜಾನ್ ಪೀರ್ ಅವರ ಸ್ಥಾನದಲ್ಲಿ ಇರುತ್ತಾರೆ; ಆದರೆ ಮಾಧವದೇವ ಕೂಡ ನಮಗೆ ಅಷ್ಟೇ ಮುಖ್ಯವಾಗಿದ್ದಾರೆ. ಅವರೇ ನಮ್ಮ ಜನಾಂಗವನ್ನು ರಕ್ಷಿಸಲು ಸಮರ್ಥರು. (ಶ್ರೀಮಂತ ಶಂಕರದೇವ ಮತ್ತು ಶ್ರೀ ಶ್ರೀ ಮಾಧವದೇವ ಅವರು ಆಸ್ಸಾಂನ ಪೂಜ್ಯ ವೈಷ್ಣವ ಸಂತರಾಗಿದ್ದಾರೆ. ಅಜಾನ್ ಪೀರ್ 17 ನೇ ಶತಮಾನದಲ್ಲಿ ಇರಾಕ್‌ನಿಂದ ಆಸ್ಸಾಂಗೆ ಬಂದ ಮುಸ್ಲಿಂ ಪೀರರಾಗಿದ್ದರು.)

ಸಂಪಾದಕೀಯ ನಿಲುವು

  • ಇಷ್ಟು ದೊಡ್ಡ ಪ್ರಮಾಣದ ಭೂಮಿ ನುಸುಳುಕೋರರ ವಶವಾಗುತ್ತಿದ್ದಾಗ ಸ್ಥಳೀಯ ಆಡಳಿತ, ಪೊಲೀಸ್, ಗುಪ್ತಚರ ಸಂಸ್ಥೆಗಳು ಮತ್ತು ಸರ್ವಪಕ್ಷಗಳ ಸರಕಾರಗಳು ಏನು ಮಾಡುತ್ತಿದ್ದವು?
  • ಈ ಭೂಮಿಯನ್ನು ಒತ್ತುವರಿ ಮುಕ್ತಗೊಳಿಸಲು ಈಗ ಎಷ್ಟು ಹೋರಾಟ ಮಾಡಬೇಕಾಗಬಹುದು? ಎಷ್ಟು ಸಮಯ, ಹಣ ಖರ್ಚಾಗಲಿದೆ? ಇದಕ್ಕೆ ಜವಾಬ್ದಾರರಾದವರನ್ನು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು!