ಕೇಂದ್ರ ಸಚಿವ ಸಂಜಯ ಸೇಠ್ ಅವರಿಗೆ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ನಿಮಿತ್ತ ಗ್ರಂಥ ಮತ್ತು ಮೂರ್ತಿ ಉಡುಗೊರೆ !

ಶ್ರೀ. ಸಂಜಯ ಸೇಠ್ (ಬಲಕ್ಕೆ) ಅವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸಂಕ್ಷಿಪ್ತ ಜೀವನ ಚರಿತ್ರೆಯ ಗ್ರಂಥವನ್ನು ನೀಡುತ್ತಿರುವ ಶ್ರೀ. ಶಂಭು ಗವಾರೆ ಮತ್ತು ಪೂಜಾ ಚೌಹಾಣ್

ರಾಂಚಿ (ಜಾರ್ಖಂಡ್) – ಸನಾತನ ಸಂಸ್ಥೆಯು ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಮತ್ತು ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ 83ನೇ ಜನ್ಮೋತ್ಸವದ ನಿಮಿತ್ತ ಮೇ 17 ರಿಂದ 19 ರವರೆಗೆ ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಆಯೋಜಿಸಲಾಗಿತ್ತು. ಈ ಮಹೋತ್ಸವಕ್ಕೆ ಕೇಂದ್ರ ರಕ್ಷಣಾ ರಾಜ್ಯ ಸಚಿವ ಶ್ರೀ. ಸಂಜಯ ಸೇಠ್ ಅವರಿಗೂ ಆಹ್ವಾನ ನೀಡಲಾಗಿತ್ತು; ಆದರೆ ಅವರು ಇತರ ಕಾರ್ಯನಿಮಿತ್ತ ಭಾಗವಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಈಶಾನ್ಯ ಭಾರತದ ಸಂಯೋಜಕ ಶ್ರೀ. ಶಂಭು ಗವಾರೆ ಅವರು ಶಂಖನಾದ ಮಹೋತ್ಸವದ ಆಯೋಜಕರ ಪರವಾಗಿ, ಈ ಮಹೋತ್ಸವದಲ್ಲಿ ನಡೆಸಲಾದ ಶತಚಂಡಿ ಯಜ್ಞ ಮತ್ತು ಮಹಾಧನ್ವಂತರಿ ಯಜ್ಞದ ಪವಿತ್ರ ಪ್ರಸಾದ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸಂಕ್ಷಿಪ್ತ ಜೀವನಚರಿತ್ರೆಯ ಗ್ರಂಥ, ಹಾಗೂ ಶ್ರೀ ತಿರುಪತಿ ಬಾಲಾಜಿ ಅವರ ಬೆಳ್ಳಿಯ ವಿಗ್ರಹವನ್ನು ಶ್ರೀ. ಸೇಠ್ ಅವರಿಗೆ ಉಡುಗೊರೆಯಾಗಿ ನೀಡಿದರು. ಅವರಿಗೆ ಗೋವಾದಲ್ಲಿರುವ ಸನಾತನ ಆಶ್ರಮಕ್ಕೆ ಭೇಟಿ ನೀಡಲು ಆಹ್ವಾನವನ್ನೂ ಸಹ ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ರಾಂಚಿ ಸಂಯೋಜಕಿ ಪೂಜಾ ಚೌಹಾಣ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ. ಸಂಜಯ ಸೇಠ್ ಅವರಿಗೆ ಶ್ರೀ ತಿರುಪತಿ ಬಾಲಾಜಿ ಅವರ ವಿಗ್ರಹವನ್ನೂ ಉಡುಗೊರೆಯಾಗಿ ನೀಡಲಾಯಿತು.

ಕೇಂದ್ರ ಸಚಿವ ಸೇಠ್ ಅವರಿಗೆ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದಾಗ ಅವರಿಗೆ ಬಹಳ ಸಂತೋಷವಾಯಿತು. ಮಹೋತ್ಸವಕ್ಕೆ 30 ಸಾವಿರ ಭಕ್ತರು ಆಗಮಿಸಿದ್ದರು ಎಂದು ಕೇಳಿ ಸೇಠ್ ಪ್ರಭಾವಿತರಾದರು ಮತ್ತು ಈ ಮಾಹಿತಿಯನ್ನು ಇತರರಿಗೂ ತಿಳಿಸಿದರು.