‘ಮುಸ್ಲಿಮರನ್ನು ನಾಲ್ಕು ಕಡೆಯಿಂದ ಸುತ್ತುವರಿಯುತ್ತಿದ್ದಾರಂತೆ’

ಸಮಾಜವಾದಿ ಪಕ್ಷದ ನಾಯಕ ಅಬು ಆಜ್ಮಿ ಅವರ ಹುರುಳಿಲ್ಲದ ಹೇಳಿಕೆ!

ಮುಂಬಯಿ – ಈ ದೇಶದಲ್ಲಿ ಮುಸ್ಲಿಮರಿಗೆ ವಾಸಿಸುವ ಹಕ್ಕಿಲ್ಲ. ಅವರನ್ನು ನಾಲ್ಕು ಕಡೆಯಿಂದ ಸುತ್ತುವರಿಯಲಾಗುತ್ತಿದೆ. ನಮ್ಮ ಖುರೇಶಿ ಸಮುದಾಯ ಮಾಂಸ ವ್ಯಾಪಾರ ಮಾಡುತ್ತದೆ. ಅವರು ರೈತರ ಜಾತ್ರೆಗಳಿಂದ ಪ್ರಾಣಿಗಳನ್ನು ಖರೀದಿಸುತ್ತಾರೆ; ಆದರೆ ಒಬ್ಬ ಮುಸ್ಲಿಂ ಹಸುವನ್ನು ಖರೀದಿಸಿದರೆ, ಅದು ಹಾಲಿಗೆ ಅಥವಾ ಎತ್ತು ಕೃಷಿಗೆ ಖರೀದಿಸಬಹುದು. ಒಬ್ಬ ಮುಸ್ಲಿಂ ಖರೀದಿಸುತ್ತಿದ್ದಾನೆಂದರೆ ಅವನು ಹತ್ಯೆಗಾಗಿಯೇ ಖರೀದಿಸುತ್ತಿದ್ದಾನೆ ಎಂದಲ್ಲ. (ಹಾಲು ಕೊಡುವ ಹಸು-ಎತ್ತುಗಳನ್ನು ಖರೀದಿಸುವ ಮುಸ್ಲಿಮರನ್ನು ಅಬು ಆಜ್ಮಿ ತೋರಿಸಲಿ! – ಸಂಪಾದಕರು)

ಒಬ್ಬ ಮುಸ್ಲಿಂ ಹಸುವನ್ನು ಕೊಲ್ಲಲು ಅದನ್ನು ಖರೀದಿಸುತ್ತಿದ್ದರೆ, ಕಠಿಣ ಕಾನೂನು ಮಾಡಿ. ಅವನಿಗೆ ಗಲ್ಲು ಶಿಕ್ಷೆ ನೀಡಿ, ಇದರಿಂದ ಮತ್ತೆ ಯಾರೂ ಇಂತಹ ಕೃತ್ಯ ಮಾಡಬಾರದು ಎಂದು ಸಮಾಜವಾದಿ ಪಕ್ಷದ ನಾಯಕ ಅಬು ಆಜ್ಮಿ ಹೇಳಿಕೆ ನೀಡಿದರು.

ಅವರು ಮಾತು ಮುಂದುವರೆಸಿ, “ಖುರೇಶಿ ಸಮುದಾಯವು ಪ್ರಾಣಿಗಳನ್ನು ಖರೀದಿಸದಿರಲು ಮತ್ತು ಮಾಂಸವನ್ನು ಮಾರಾಟ ಮಾಡದಿರಲು ನಿರ್ಧರಿಸಿದೆ. ಅವರು ಮುಷ್ಕರಕ್ಕೆ ಇಳಿಯುತ್ತಿದ್ದಾರೆ. ಮುಸ್ಲಿಮರೂ ಈ ದೇಶದ ಜನರಾಗಿದ್ದಾರೆ. ಅವರ ಮೇಲೆ ಪದೇ ಪದೇ ಅನ್ಯಾಯ ಮಾಡಲಾಗುತ್ತಿದೆ. ಇದು ದೇಶಕ್ಕೆ ಸರಿಯಲ್ಲ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಈ ದೇಶದಲ್ಲಿ ಯಾರು ಯಾರನ್ನು ಸುತ್ತುವರಿಯುತ್ತಿದ್ದಾರೆ ಮತ್ತು ಯಾರು ಯಾರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂಬುದು ಇಡೀ ಜಗತ್ತಿಗೇ ಗೊತ್ತಿದೆ ! ಕಳೆದ ಕೆಲವು ವರ್ಷಗಳಲ್ಲಿ ದೇಶದ ಅನೇಕ ಹಳ್ಳಿಗಳು, ತಾಲ್ಲೂಕುಗಳು, ನಗರಗಳು ಮುಸ್ಲಿಂ ಬಹುಸಂಖ್ಯಾತವಾಗಿವೆ. ಮತಾಂಧ ಮುಸ್ಲಿಮರು ಹಿಂದೂಗಳನ್ನು ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಥೂಂಕ್ ಜಿಹಾದ್ ಇತ್ಯಾದಿಗಳ ಮೂಲಕ ಪ್ರತಿದಿನ ಸುತ್ತುವರಿಯುತ್ತಿದ್ದಾರೆ ಎಂಬುದನ್ನು ಆಜ್ಮಿ ಏಕೆ ಹೇಳುತ್ತಿಲ್ಲ?