ಈಶ್ವರನ ಮೇಲೆ ಶ್ರದ್ಧೆ ಇರುವವರು ಮಾತ್ರ ವಾರಿಯಲ್ಲಿ ಬರಬೇಕು ಎಂಬ ಹೇಳಿಕೆ

ಮುಂಬಯಿ, ಜುಲೈ 10 (ವಿಶೇಷ ಪ್ರತಿನಿಧಿ) – ಇತ್ತೀಚೆಗೆ ನಡೆದ ಪಂಢರಪುರದ ಆಷಾಢ ಏಕಾದಶಿ ವಾರಿಯಲ್ಲಿ ಧರ್ಮದ್ರೋಹಿ ಕಬೀರ್ ಕಲಾ ಮಂಚ್ ಮತ್ತು ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಕಾರ್ಯಕರ್ತರಾದ ಸಚಿನ ಮಾಳಿ ಮತ್ತು ಶೀತಲ ಸಾಠೆ ಎಂಬ ದಂಪತಿಗಳು ‘ಸಂವಿಧಾನ ಸಮತಾ ದಿಂಡಿ’ ಹೆಸರಿನಲ್ಲಿ ಸಂವಿಧಾನ ಗ್ರಂಥವನ್ನು ಕೈಯಲ್ಲಿ ಹಿಡಿದು ಪ್ರಚಾರ ಮಾಡಿದ್ದರು. ಮೂಲತಃ, ಇವರಿಬ್ಬರೂ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಜುಲೈ 9 ರಂದು ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದಾಗ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಈ ಬಗ್ಗೆ ಕೇಳಿದಾಗ, ಅವರು, “ಪಂಢರಪುರದ ವಾರಿಯಲ್ಲಿ ‘ಸಗುಣ-ನಿರ್ಗುಣ’ ಯಾರಾದರೂ ಬರಬಹುದು; ಆದರೆ ಯಾರಿಗೆ ದೇವರ ಮೇಲೆ ಶ್ರದ್ಧೆ ಇದೆಯೋ, ಅಂತಹ ಭಕ್ತರು ಮಾತ್ರ ವಾರಿಯಲ್ಲಿ ಬರಬೇಕು ಎಂದು ನಿರೀಕ್ಷಿಸಲಾಗಿದೆ. ನಾಸ್ತಿಕರು, ಯಾರಿಗೆ ದೇವರ ಮೇಲೆ ಶ್ರದ್ಧೆ ಇಲ್ಲವೋ, ಅವರಿಗೆ ವಾರಿಯಲ್ಲಿ ಏನು ಸಂಬಂಧ? ಅವರು ವಾರಿಯಲ್ಲಿ ಬರುವುದು ತಪ್ಪು.” ಎಂದು ಹೇಳಿದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾತು ಮುಂದುವರೆಸಿ, “ನಾನು ಹಿಂದುತ್ವನಿಷ್ಠನಾಗಿದ್ದೇನೆ. ನಾಸ್ತಿಕರ ಕಾರ್ಯಕ್ರಮಗಳು ಮತ್ತು ಉತ್ಸವಗಳಲ್ಲಿ, ಹಿಂದುತ್ವನಿಷ್ಠರು ಅಥವಾ ಈಶ್ವರ ಮೇಲೆ ಶ್ರದ್ಧೆ ಇರುವ ಭಕ್ತರು ಹೋಗಿ ಅವರ ಪ್ರಚಾರ ಮಾಡಲಾಗುವುದಿಲ್ಲ, ಅದೇ ರೀತಿ ನಾಸ್ತಿಕರು ವಾರಿಗೆ ಬರುವ ಪ್ರಶ್ನೆಯೇ ಇಲ್ಲ” ಎಂದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ