
ಪುಣೆ, ಜುಲೈ 7 (ಸುದ್ದಿ) – ಸನಾತನ ಸಂಸ್ಥೆಯ ಶ್ರದ್ಧಾಸ್ಥಾನವಾಗಿರುವ ಪ.ಪೂ. ಭಕ್ತರಾಜ ಮಹಾರಾಜರ ಗುರುಪೂರ್ಣಿಮೆ ಮಹೋತ್ಸವವನ್ನು ಕಾಂದಳಿ ತಾಲ್ಲೂಕು ಜುನ್ನರ (ಪುಣೆ ಜಿಲ್ಲೆ)ನ ಆಶ್ರಮದಲ್ಲಿ ಜುಲೈ 10 ರಂದು ಆಯೋಜಿಸಲಾಗಿದೆ. ಈ ಪ್ರಯುಕ್ತ ಜುಲೈ 9 ರಂದು ಸಹ ಕೆಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ‘ಶ್ರೀ ರಾಮಚಂದ್ರ ದೇವ ಟ್ರಸ್ಟ್ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿ ಟ್ರಸ್ಟ್’ ನ ಕಾರ್ಯದರ್ಶಿ ಮಂಡಳಿ ತಿಳಿಸಿದೆ.

ಜುಲೈ 9 ರಂದು ಬೆಳಿಗ್ಗೆ 9 ರಿಂದ 11 ಈ ಸಮಯದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿಗೆ ನಿತ್ಯ ನೈಮಿತ್ತಿಕ ಅಭಿಷೇಕ ಮತ್ತು ಪೂಜೆ. ಮಧ್ಯಾಹ್ನ 12.30 ರಿಂದ 2.30 ಗಂಟೆಗೆ ಮಹಾಪ್ರಸಾದ. ಸಂಜೆ 7.30 ರಿಂದ ರಾತ್ರಿ 8 ಗಂಟೆಯ ಸಮಯದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿಯ ನಿತ್ಯ ನೈಮಿತ್ತಿಕ ಆರತಿ. ರಾತ್ರಿ 11 ಗಂಟೆಗೆ ಭಕ್ತರಿಂದ ಪ.ಪೂ. ಭಕ್ತರಾಜ ಮಹಾರಾಜರು ರಚಿಸಿದ ಭಜನೆಗಳ ಕಾರ್ಯಕ್ರಮ. ಜುಲೈ 10 ರಂದು ಬೆಳಿಗ್ಗೆ 9 ರಿಂದ 10 ಈ ಸಮಯದಲ್ಲಿ: ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿಗೆ ಅಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಈ ಸಮಯದಲ್ಲಿ ಪ.ಪೂ. ಶಂಕರ ಮಹಾರಾಜ, ಭಜನಾ ಮಂಡಳಿ, ನಾಶಿಕ ಇವರ ಭಜನಾ ಸೇವೆ. ಮಧ್ಯಾಹ್ನ 12.30 ರಿಂದ 2.30 ಈ ಸಮಯದಲ್ಲಿ ಮಹಾಪ್ರಸಾದ ಇರಲಿದೆ.
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!