ಮುಸಲ್ಮಾನರು ತಮ್ಮ ಢಾಬಾಗಳಿಗೆ ಹಿಂದೂ ದೇವರುಗಳ ಹೆಸರುಗಳನ್ನು ಇಡುತ್ತಿರುವ ಪ್ರಕರಣ

ಋಷಿಕೇಶ (ಉತ್ತರಾಖಂಡ) – ನಮಗೆ ಹಿಂದೂಗಳೆಂದು ಯಾವ ರೀತಿ ಹೆಮ್ಮೆಯಿದೆಯೋ, ಅದೇ ರೀತಿ ಎಲ್ಲಾ ಮುಸಲ್ಮಾನರಿಗೂ ತಮ್ಮ ಧರ್ಮದ ಬಗ್ಗೆ ಹೆಮ್ಮೆಯಿರಬೇಕು. ಎಲ್ಲಾ ಮುಸಲ್ಮಾನರ ಪೂರ್ವಜರು ಹಿಂದೂಗಳೇ ಆಗಿದ್ದಾರೆ, ಆದ್ದರಿಂದ ಅಂಗಡಿಗಳ ಹೆಸರುಗಳನ್ನು ಬದಲಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅಂಗಡಿಗಳಿಗೆ ಹಿಂದೂ ಹೆಸರನ್ನು ಇಡುವುದರಲ್ಲಿ ಯಾವುದೇ ಅರ್ಥವಿಲ್ಲ. ಹೆಸರನ್ನು ಬದಲಾಯಿಸುವುದು ವ್ಯಾವಹಾರಿಕವಾಗಿ ಮತ್ತು ಧಾರ್ಮಿಕವಾಗಿ ತಪ್ಪಾಗಿದೆ ಎಂದು ಯೋಗಋಷಿ ರಾಮದೇವ ಬಾಬಾ ಪ್ರತಿಕ್ರಿಯಿಸಿದ್ದಾರೆ. ಕಾವಡ ಯಾತ್ರೆಯ ಮಾರ್ಗದಲ್ಲಿ ಮುಸಲ್ಮಾನರ ಢಾಬಾಗಳಿಗೆ ಹಿಂದೂ ದೇವರುಗಳ ಹೆಸರುಗಳನ್ನು ಇಡುತ್ತಿರುವ ಘಟನೆಗಳ ಕುರಿತು ಅವರು ಮಾತನಾಡುತ್ತಿದ್ದರು.
ರಾಮದೇವ ಬಾಬಾ ಅವರು ಮಾತು ಮುಂದುವರೆಸಿ, ಪ್ರತಿಯೊಬ್ಬರೂ ತಮ್ಮ ಹೆಸರು ಏನಿದೆಯೋ, ಅದನ್ನೇ ಇಡಬೇಕು. ಜನರಿಗೆ ಇಷ್ಟವಿದ್ದರೆ, ಅವರು ಹೋಟೆಲ್ ಅಥವಾ ಢಾಬಾಗೆ ಬಂದು ಊಟ ಮಾಡುತ್ತಾರೆ ಎಂದರು.
ಹಿಂದೂಗಳು ಬೇರೆ ಬೇರೆ ಭಾಷೆ ಮತ್ತು ಪಂಥಗಳ ಆಧಾರದ ಮೇಲೆ ಪರಸ್ಪರ ಜಗಳವಾಡಬಾರದು!
ಮಹಾರಾಷ್ಟ್ರದಲ್ಲಿ ಪ್ರಸ್ತುತ ಮರಾಠಿ ಮತ್ತು ಹಿಂದಿ ಭಾಷೆಗಳ ಕುರಿತು ನಡೆಯುತ್ತಿರುವ ವಿವಾದದ ಬಗ್ಗೆ ರಾಮದೇವ ಬಾಬಾ ಅವರು, ದೇಶದ ಎಲ್ಲಾ ಭಾಷೆಗಳೊಂದಿಗೆ ಮರಾಠಿ ಭಾಷೆಯನ್ನೂ ಗೌರವಿಸಬೇಕು ಎಂದರು. ಆದ್ದರಿಂದ, ಹಿಂದೂಗಳು ಬೇರೆ ಬೇರೆ ಭಾಷೆ ಮತ್ತು ಪಂಥಗಳ ಆಧಾರದ ಮೇಲೆ ಪರಸ್ಪರ ಜಗಳವಾಡಬಾರದು. ಇದರಿಂದ ಸನಾತನ ಧರ್ಮ ಮತ್ತು ರಾಷ್ಟ್ರೀಯ ಏಕತೆಗೆ ಹಾನಿ ಆಗುತ್ತದೆ ಎಂದು ಹೇಳಿದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ