ಮುಸಲ್ಮಾನರು ತಮ್ಮ ಢಾಬಾಗಳಿಗೆ ಹಿಂದೂ ದೇವರುಗಳ ಹೆಸರುಗಳನ್ನು ಇಡುತ್ತಿರುವ ಪ್ರಕರಣ

ಋಷಿಕೇಶ (ಉತ್ತರಾಖಂಡ) – ನಮಗೆ ಹಿಂದೂಗಳೆಂದು ಯಾವ ರೀತಿ ಹೆಮ್ಮೆಯಿದೆಯೋ, ಅದೇ ರೀತಿ ಎಲ್ಲಾ ಮುಸಲ್ಮಾನರಿಗೂ ತಮ್ಮ ಧರ್ಮದ ಬಗ್ಗೆ ಹೆಮ್ಮೆಯಿರಬೇಕು. ಎಲ್ಲಾ ಮುಸಲ್ಮಾನರ ಪೂರ್ವಜರು ಹಿಂದೂಗಳೇ ಆಗಿದ್ದಾರೆ, ಆದ್ದರಿಂದ ಅಂಗಡಿಗಳ ಹೆಸರುಗಳನ್ನು ಬದಲಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅಂಗಡಿಗಳಿಗೆ ಹಿಂದೂ ಹೆಸರನ್ನು ಇಡುವುದರಲ್ಲಿ ಯಾವುದೇ ಅರ್ಥವಿಲ್ಲ. ಹೆಸರನ್ನು ಬದಲಾಯಿಸುವುದು ವ್ಯಾವಹಾರಿಕವಾಗಿ ಮತ್ತು ಧಾರ್ಮಿಕವಾಗಿ ತಪ್ಪಾಗಿದೆ ಎಂದು ಯೋಗಋಷಿ ರಾಮದೇವ ಬಾಬಾ ಪ್ರತಿಕ್ರಿಯಿಸಿದ್ದಾರೆ. ಕಾವಡ ಯಾತ್ರೆಯ ಮಾರ್ಗದಲ್ಲಿ ಮುಸಲ್ಮಾನರ ಢಾಬಾಗಳಿಗೆ ಹಿಂದೂ ದೇವರುಗಳ ಹೆಸರುಗಳನ್ನು ಇಡುತ್ತಿರುವ ಘಟನೆಗಳ ಕುರಿತು ಅವರು ಮಾತನಾಡುತ್ತಿದ್ದರು.
ರಾಮದೇವ ಬಾಬಾ ಅವರು ಮಾತು ಮುಂದುವರೆಸಿ, ಪ್ರತಿಯೊಬ್ಬರೂ ತಮ್ಮ ಹೆಸರು ಏನಿದೆಯೋ, ಅದನ್ನೇ ಇಡಬೇಕು. ಜನರಿಗೆ ಇಷ್ಟವಿದ್ದರೆ, ಅವರು ಹೋಟೆಲ್ ಅಥವಾ ಢಾಬಾಗೆ ಬಂದು ಊಟ ಮಾಡುತ್ತಾರೆ ಎಂದರು.
ಹಿಂದೂಗಳು ಬೇರೆ ಬೇರೆ ಭಾಷೆ ಮತ್ತು ಪಂಥಗಳ ಆಧಾರದ ಮೇಲೆ ಪರಸ್ಪರ ಜಗಳವಾಡಬಾರದು!
ಮಹಾರಾಷ್ಟ್ರದಲ್ಲಿ ಪ್ರಸ್ತುತ ಮರಾಠಿ ಮತ್ತು ಹಿಂದಿ ಭಾಷೆಗಳ ಕುರಿತು ನಡೆಯುತ್ತಿರುವ ವಿವಾದದ ಬಗ್ಗೆ ರಾಮದೇವ ಬಾಬಾ ಅವರು, ದೇಶದ ಎಲ್ಲಾ ಭಾಷೆಗಳೊಂದಿಗೆ ಮರಾಠಿ ಭಾಷೆಯನ್ನೂ ಗೌರವಿಸಬೇಕು ಎಂದರು. ಆದ್ದರಿಂದ, ಹಿಂದೂಗಳು ಬೇರೆ ಬೇರೆ ಭಾಷೆ ಮತ್ತು ಪಂಥಗಳ ಆಧಾರದ ಮೇಲೆ ಪರಸ್ಪರ ಜಗಳವಾಡಬಾರದು. ಇದರಿಂದ ಸನಾತನ ಧರ್ಮ ಮತ್ತು ರಾಷ್ಟ್ರೀಯ ಏಕತೆಗೆ ಹಾನಿ ಆಗುತ್ತದೆ ಎಂದು ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !