‘ಜಮಿಯತ್ ಉಲೆಮಾ-ಎ-ಹಿಂದ್’ ನ ಮೌಲಾನಾ (ಇಸ್ಲಾಂ ವಿದ್ವಾಂಸರು) ಅರ್ಷದ್ ಮದನಿ ಹೇಳಿಕೆ!

ಲಕ್ಷಣಪುರಿ (ಉತ್ತರ ಪ್ರದೇಶ) – ಗಾಜಾದಲ್ಲಿ ಶಾಶ್ವತ ಕದನ ವಿರಾಮಕ್ಕಾಗಿ ಯುಎನ್ ಭದ್ರತಾ ಮಂಡಳಿಯ ಪ್ರಸ್ತಾವನೆಗೆ ಅಮೆರಿಕ ವೀಟೋ ಅಧಿಕಾರ ಬಳಸಿದ್ದರಿಂದ ಅದು ತಿರಸ್ಕೃತಗೊಂಡಿತು. ಇದಕ್ಕೆ ಮುಸಲ್ಮಾನರ ಧಾರ್ಮಿಕ ಸಂಘಟನೆ ‘ಜಮಿಯತ್ ಉಲೆಮಾ-ಎ-ಹಿಂದ್’ ನ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಅವರು, 14 ದೇಶಗಳು ಈ ಪ್ರಸ್ತಾವನೆಯನ್ನು ಮಂಡಿಸಿದ್ದವು; ಆದರೆ ಅಮೆರಿಕ ಅದನ್ನು ಬೆಂಬಲಿಸಲಿಲ್ಲ. ಇದರರ್ಥ, ಗಾಜಾದ ವಿನಾಶ ಮತ್ತು ವಿಧ್ವಂಸದಲ್ಲಿ ಅಮೆರಿಕದ ಕೈವಾಡವಿದೆ. ಪ್ಯಾಲೆಸ್ಟೈನ್ನಲ್ಲಿ ನಡೆದ ಹತ್ಯಾಕಾಂಡಕ್ಕೆ ಕಾರಣರಾದವರಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಗಾಜಾವನ್ನು ಮಾನವರಹಿತಗೊಳಿಸಿ ಅಲ್ಲಿ ಯಹೂದಿಗಳನ್ನು ನೆಲೆಸುವ ಅಮೆರಿಕದ ಆಸೆ ಇದೆ; ಆದರೆ ಅಲ್ಲಾಹನ ಇಚ್ಛೆಯಿದ್ದರೆ ಇದು ಎಂದಿಗೂ ಸಾಧ್ಯವಿಲ್ಲ, ಎಂದು ಹೇಳಿದರು.
ಪ್ಯಾಲೆಸ್ಟೈನ್ ಸ್ವಾತಂತ್ರ್ಯದ ಬೇಡಿಕೆಗೆ ಸಂಪೂರ್ಣ ಬೆಂಬಲ!
ಮದನಿ ಮಾತು ಮುಂದುವರೆಸಿ, ಇಸ್ರೇಲ್ ಮತ್ತು ಹಮಾಸ್ ಅನ್ನು ಸಂಪೂರ್ಣವಾಗಿ ನಾಶಪಡಿಸಲು ಬಯಸುವ ದೇಶಗಳು ಇನ್ನೂ ವಿಫಲವಾಗಿವೆ. ಈ ಪರಿಸ್ಥಿತಿಯನ್ನು ಕಾಪಾಡಿಕೊಳ್ಳಲು ಗಾಜಾದಲ್ಲಿ ಸುಮಾರು ಒಂದು ಲಕ್ಷ ಹುತಾತ್ಮರು ನಿಸ್ಸಂದೇಹವಾಗಿ ರಕ್ತ ಸುರಿಸಿದ್ದಾರೆ. ಜಮಿಯತ್ ಉಲೆಮಾ-ಎ-ಹಿಂದ್ ಪ್ಯಾಲೆಸ್ಟೈನ್ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೃತ್ಪೂರ್ವಕ ಸಹಾನುಭೂತಿ ವ್ಯಕ್ತಪಡಿಸುತ್ತದೆ ಮತ್ತು ಅವರ ಸ್ವಾತಂತ್ರ್ಯದ ಬೇಡಿಕೆಗೆ ಸಂಪೂರ್ಣ ಬೆಂಬಲ ನೀಡುತ್ತದೆ, ಎಂದು ಹೇಳಿದರು.
ಸಂಪಾದಕೀಯ ನಿಲುವು
|
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !