ಚಲನಚಿತ್ರೋದ್ಯಮದ ಹಿಂದುದ್ವೇಷಿ ಮುಖವನ್ನು ಬಹಿರಂಗಪಡಿಸಿದ ನೀರಜ ಅತ್ರಿ ಅವರ ಪೋಸ್ಟ್

ನವದೆಹಲಿ – ಶಾಲಾ ಪಠ್ಯಪುಸ್ತಕಗಳ ಮೂಲಕ ಭಾರತೀಯ ಇತಿಹಾಸವನ್ನು ಹೇಗೆ ವಿಕೃತಗೊಳಿಸಲಾಗುತ್ತಿದೆ ಎಂಬುದರ ಕುರಿತು ‘ಹಿಸ್ ಸ್ಟೋರಿ ಆಫ್ ಇತಿಹಾಸ’ ಎಂಬ ಹೊಸದಾಗಿ ಬಿಡುಗಡೆಯಾದ ಚಲನಚಿತ್ರವು ಆಧಾರಿತವಾಗಿದೆ. ಇದು ಪ್ರಖರ ಹಿಂದುತ್ವನಿಷ್ಠ ಮತ್ತು ಲೇಖಕ ನೀರಜ ಅತ್ರಿ ಅವರ ಜೀವನವನ್ನು ಆಧರಿಸಿದೆ. ಸ್ಥಾಪಿತ ಹಿಂದೂ ವಿರೋಧಿ ವ್ಯವಸ್ಥೆಯ ಮುಖವನ್ನು ಬಹಿರಂಗಪಡಿಸುತ್ತಿರುವುದರಿಂದ ಈ ಚಲನಚಿತ್ರಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂಬುದು ಸತ್ಯ. ಈ ಕುರಿತು ಅತ್ರಿ ಅವರು ಚಲನಚಿತ್ರೋದ್ಯಮದ ಹಿಂದೂ ವಿರೋಧಿ ಮುಖವನ್ನು ‘ಎಕ್ಸ್’ ಮೂಲಕ ಬಹಿರಂಗಪಡಿಸುವ ಪೋಸ್ಟ್ ಮಾಡಿದ್ದಾರೆ. ಅವರು, “‘ಹಿಸ್ ಸ್ಟೋರಿ ಆಫ್ ಇತಿಹಾಸ’ದಂತಹ ಚಲನಚಿತ್ರಗಳನ್ನು ಯಾವುದೇ ಅಧಿಕೃತ ನಿಷೇಧವಿಲ್ಲದೆ, ಕೇವಲ ‘ಮಾಫಿಯಾಗಳ’ ಪರಿಸರ ವ್ಯವಸ್ಥೆಯಿಂದ (ಸಿಸ್ಟಮ್) ಹೇಗೆ ಮೌನಗೊಳಿಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ!”, ಎಂದು ಹೇಳಿದ್ದಾರೆ.
How Movies Like #HisStoryOfItihaas Are Silenced Without a Ban by a mafia ecosystem.
Ever wondered how powerful stories are quietly pushed out of theatres?
Here’s the playbook:
Give the movie a handful of shows on opening Friday — in far-off locations and odd timings like…
— Neeraj Atri Mushrik (@AtriNeeraj) June 3, 2025
ಅತ್ರಿ ಅವರು,
೧. ಜನರಿಗೆ ಆಘಾತಕಾರಿ ಸತ್ಯಗಳನ್ನು ಹೇಳುವ ಚಲನಚಿತ್ರಗಳನ್ನು ಚಿತ್ರಮಂದಿರಗಳಿಂದ ಹೇಗೆ ಹೊರಹಾಕಲಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ?
೨. ಇದು ಅವರ ವಿರುದ್ಧದ ಕ್ರಮದ ಸೂತ್ರ ಹೀಗಿದೆ:
ಅ. ಮೊದಲ ಶುಕ್ರವಾರ ಚಲನಚಿತ್ರಕ್ಕೆ ಕೆಲವೇ ಪ್ರದರ್ಶನಗಳನ್ನು ನೀಡಲಾಗುತ್ತದೆ, ಅವುಗಳು ದೂರದ ಸ್ಥಳಗಳಲ್ಲಿ ಮತ್ತು ಮಧ್ಯದ ಸಮಯಗಳಲ್ಲಿ, ಉದಾಹರಣೆಗೆ ಬೆಳಗಿನ ಅವಧಿ ಅಥವಾ ಮಧ್ಯಾಹ್ನ, ಹೆಚ್ಚಿನ ಜನರು ಬರಲು ಸಾಧ್ಯವಾಗದ ಸಮಯದಲ್ಲಿ.
ಆ. ಶನಿವಾರ ಮತ್ತು ಭಾನುವಾರ, ಜನರಿಗೆ ಸಮಯವಿದ್ದಾಗ, ಆ ಚಲನಚಿತ್ರದ ಪ್ರದರ್ಶನಗಳನ್ನು ರದ್ದುಗೊಳಿಸಲಾಗುತ್ತದೆ. ‘ಶುಕ್ರವಾರ ಜನಸಂದಣಿ ಕಡಿಮೆ ಇತ್ತು’ ಎಂಬುದು ಇದರ ಹಿಂದಿನ ಕಾರಣ ನೀಡಲಾಗುತ್ತದೆ.
ಇ. ಸೋಮವಾರದಿಂದ ನಿರ್ಮಾಪಕರು ಹೋರಾಟ ಪ್ರಾರಂಭಿಸಿದರೆ, ಅವರಿಗೆ ಮತ್ತೆ ಕೆಲವು ಪ್ರದರ್ಶನಗಳು ಸಿಗುತ್ತವೆ; ಆದರೆ ಅವು ಕೂಡ ಸಾಮಾನ್ಯ ಪ್ರೇಕ್ಷಕರಿಗೆ ಅನುಕೂಲಕರವಲ್ಲದ ಸಮಯ ಮತ್ತು ಸ್ಥಳಗಳಲ್ಲಿ ಇಡಲಾಗುತ್ತದೆ.
|
ಚಿತ್ರದ ಬರಹಗಾರ ಮತ್ತು ನಿರ್ದೇಶಕ ಮನ್ಪ್ರೀತ್ ಸಿಂಗ್ ಧಾಮಿ ಅವರ ‘x’ ಪೋಸ್ಟ್ ನೋಡಿ –
|
ಈ. ಮತ್ತೊಮ್ಮೆ ಶುಕ್ರವಾರ ಬರುವ ಮೊದಲೇ… ಆ ಚಲನಚಿತ್ರವು ಚಲನಚಿತ್ರಗಳ ಪಟ್ಟಿಯಿಂದ ಮಾಯವಾಗುತ್ತದೆ.
ಉ. ಈ ಪ್ರಕ್ರಿಯೆಯಲ್ಲಿ ತಮ್ಮ ಶ್ರಮದ ಹಣವನ್ನು ಹೂಡಿದ (ದಾವೂದ್ ಇಬ್ರಾಹಿಂ ಗ್ಯಾಂಗ್ನ ಹಣವಲ್ಲ) ನಿರ್ಮಾಪಕರು ತಮ್ಮ ಜೀವನೋಪಾಯದ ಮೂಲವನ್ನು ಕಳೆದುಕೊಳ್ಳುತ್ತಾರೆ. ಇದು ಒಂದು ಸುಸಂಘಟಿತ ಮತ್ತು ಯೋಜಿತ ಪಿತೂರಿಯಾಗಿದೆ.
೩. ಯಾವುದೇ ಅಧಿಕೃತ ನಿಷೇಧವಿಲ್ಲ. ‘ಸೆನ್ಸಾರ್ ಬೋರ್ಡ್’ನಿಂದ ಯಾವುದೇ ಕ್ರಮವಿಲ್ಲ. ಕೇವಲ ಬುದ್ಧಿವಂತಿಕೆಯಿಂದ ಮತ್ತು ಶಾಂತವಾಗಿ ಧ್ವನಿಯನ್ನು ಅಡಗಿಸಲಾಗುತ್ತದೆ.
೪. ಸುಳ್ಳು ಕಥಾವಸ್ತುವಿನ ಸತ್ಯವನ್ನು ಬಯಲು ಮಾಡುವ ಚಲನಚಿತ್ರದ ಪ್ರಸಾರವನ್ನು ತಡೆಯಲು ಈ ರೀತಿ ಯಂತ್ರಗಳು ಕಾರ್ಯನಿರ್ವಹಿಸುತ್ತವೆ.
|
ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಪ್ರಭಾವಿ ಭಾಷಣಕಾರ ಮತ್ತು ಬರಹಗಾರರಾದ ಅಭಾಸ್ ಕೆ. ಮಾಲ್ದಹಿಯಾರ್ ಅವರ ‘x’ ಕುರಿತ ಪೋಸ್ಟ್ ಅನ್ನು ಈಗ ಪರಿಶೀಲಿಸಿ.
|
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ