ಗುರುದಕ್ಷಿಣೆಯಾಗಿ ‘ಪಾಕ್ ಆಕ್ರಮಿತ ಕಾಶ್ಮೀರ’ವನ್ನು ಕೊಡಿ ! – ಜಗದ್ಗುರು ರಾಮಭದ್ರಾಚಾರ್ಯ!

ಜಗದ್ಗುರು ರಾಮಭದ್ರಾಚಾರ್ಯರಿಂದ ದೀಕ್ಷೆ ಸ್ವೀಕರಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ

ಚಿತ್ರಕೂಟ (ಮಧ್ಯಪ್ರದೇಶ) – ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ತಮ್ಮ ಪತ್ನಿ ಸುನಿತಾ ಅವರೊಂದಿಗೆ ತುಳಸಿ ಪೀಠ ಆವರಣದಲ್ಲಿ ಪದ್ಮವಿಭೂಷಣ ಜಗದ್ಗುರು ರಾಮಭದ್ರಾಚಾರ್ಯರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅವರು ಜಗದ್ಗುರುಗಳಿಂದ ದೀಕ್ಷೆಯನ್ನು ಪಡೆದರು. ಗುರುಗಳು ಜನರಲ್ ದ್ವಿವೇದಿ ಅವರ ಬಳಿ ‘ಗುರುದಕ್ಷಿಣೆಯಾಗಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಬೇಕು’ ಎಂದು ಬೇಡಿಕೆ ಇಟ್ಟರು. ಅದಕ್ಕೆ ಜನರಲ್ ದ್ವಿವೇದಿ ಅವರು, ‘ಪಾಕ್ ಆಕ್ರಮಿತ ಕಾಶ್ಮೀರವನ್ನು ಶೀಘ್ರದಲ್ಲೇ ಮರಳಿ ಪಡೆಯುತ್ತೇವೆ’, ಎಂದು ವಚನ ನೀಡಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಜನರಲ್ ದ್ವಿವೇದಿ, ‘ಆಪರೇಷನ್ ಸಿಂದೂರ’ ನಿಂತಿಲ್ಲ. ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವವರೆಗೂ ಅದು ಮುಂದುವರಿಯುತ್ತದೆ. ದೇಶದ ಮೇಲೆ ನಡೆಯುವ ಯಾವುದೇ ದಾಳಿಗೆ ತಕ್ಕ ಉತ್ತರ ನೀಡಲು ಸೇನೆ ಹಿಂಜರಿಯುವುದಿಲ್ಲ ಎಂದವರು ಭರವಸೆ ನೀಡಿದರು.