ರಾಜಕೋಟ (ಮಾಲವಣ)ದಲ್ಲಿ ಮುಖ್ಯಮಂತ್ರಿಗಳಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ

  • ಕರಂಜೆಯಲ್ಲಿ ದೇಸಿ ಹಸುಗಳ ಭವ್ಯ ಗೋವರ್ಧನ ಗೋಶಾಲೆಯ ಉದ್ಘಾಟನೆ

  • ಕೊಂಕಣದ ಅಭಿವೃದ್ಧಿಗೆ ಸರಕಾರದ ಆದ್ಯತೆ! – ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

ರಾಜಕೋಟ್ ನಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ

ಸಿಂಧುದುರ್ಗ – ಜಿಲ್ಲೆಯ ಮಾಲವಣ ತಾಲೂಕಿನ ರಾಜಕೋಟ್ ನಲ್ಲಿ ಸ್ಥಾಪಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯು ಕೆಲವು ತಿಂಗಳ ಹಿಂದೆ ಹಾನಿಗೊಳಗಾಗಿತ್ತು. ಆಗಲೇ ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು ಮತ್ತು ಇಂದು ಆ ಸಂಕಲ್ಪವು ಪೂರ್ಣಗೊಂಡಿದೆ. ಇಲ್ಲಿಗೆ ಬರುವವರಿಗೆ ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯದ ಅನುಭವವಾಗುವ ರೀತಿಯಲ್ಲಿ ‘ಶಿವಸೃಷ್ಟಿ’ಯನ್ನು ನಿರ್ಮಿಸಿ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು. ಕೊಂಕಣವು ಮಹಾಮೈತ್ರಿಗೆ ಯಾವಾಗಲೂ ತುಂಬು ಹೃದಯದ ಪ್ರೀತಿಯನ್ನು ನೀಡಿದೆ. ಆದ್ದರಿಂದ ಕೊಂಕಣದ ಅಭಿವೃದ್ಧಿಗೆ ಮಹಾಮೈತ್ರಿಯ ಆದ್ಯತೆ ಇದೆ. ಕೊಂಕಣಕ್ಕೆ ಎಷ್ಟು ನೀಡಲು ಸಾಧ್ಯವೋ ಅಷ್ಟು ನೀಡಲು ಪ್ರಯತ್ನಿಸಲಾಗುವುದು, ಹಾಗೆಯೇ ಪ್ರವಾಸೋದ್ಯಮದ ಮೂಲಕ ಕೊಂಕಣದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಲ್ಲಿ ಹೇಳಿದ್ದಾರೆ.

ಪ್ರದರ್ಶನವನ್ನು ಅವಲೋಕಿಸುತ್ತಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ

ಮುಖ್ಯಮಂತ್ರಿ ಫಡ್ನವೀಸ್ ಅವರಿಂದ ಪೂಜೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಆರತಿಯನ್ನು ನೆರವೇರಿಸಿ ರಾಜಕೋಟ್ ನಲ್ಲಿ ಸ್ಥಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮೇ 11 ರಂದು ಲೋಕಾರ್ಪಣೆಗೊಳಿಸಲಾಯಿತು. ನಂತರ ಗಣ್ಯರು ಇಲ್ಲಿನ ಪ್ರದೇಶವನ್ನು ವೀಕ್ಷಿಸಿದರು.

ಉದ್ಘಾಟನೆಯ ನಂತರ ಕರಂಜೆಯ ಗೋವರ್ಧನ ಗೋಶಾಲೆಯನ್ನು ನೋಡುತ್ತಿರುವ ಮುಖ್ಯಮಂತ್ರಿ ಫಡ್ನವೀಸ
ಗೋವರ್ಧನ ಗೋಶಾಲೆಯ ವಿನ್ಯಾಸ