Telangana Nurse C-Section : ವೈದ್ಯರು ವಿಡಿಯೋ ಕರೆಯಲ್ಲಿ ಬ್ಯುಸಿ, ದಾದಿಯರಿಂದ ಸಿ-ಸೆಕ್ಷನ್ ಹೆರಿಗೆ; ಅವಳಿ ಮಕ್ಕಳ ಸಾವು!

ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ರಾಜಧಾನಿಯಾದ ಭಾಗ್ಯನಗರದ ಎಲಿಮಿನೇಡು ಗ್ರಾಮದ 30 ವರ್ಷದ ಬಿ. ಕೀರ್ತಿ ಎಂಬುವವರು ಹೆರಿಗೆ ಸಮಯದಲ್ಲಿ ಅವಳಿ ಮಕ್ಕಳನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಕೀರ್ತಿ ಅವರು ‘ಐವಿಎಫ್’ ಸಹಾಯದಿಂದ ಗರ್ಭಿಣಿಯಾಗಿದ್ದರು. ಹೆರಿಗೆಯ 8 ನೇ ತಿಂಗಳಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿತು. ಹೀಗಾಗಿ ಅವರನ್ನು ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ ಆಸ್ಪತ್ರೆಯ ಡಾ. ಅನುಷಾ ರೆಡ್ಡಿ ವಿಡಿಯೋ ಕರೆಯಲ್ಲಿ ಮಾತನಾಡುತ್ತಾ ದಾದಿಯರಿಂದ ಸಿ-ಸೆಕ್ಷನ್ ಹೆರಿಗೆ ಮಾಡಿಸಿದರು; ಆದರೆ ಈ ವೇಳೆ ಅವಳಿ ಮಕ್ಕಳು ಮೃತಪಟ್ಟರು. ಈ ಘಟನೆಯ ನಂತರ ಸಂತ್ರಸ್ತ ಮಹಿಳೆಯ ಕುಟುಂಬಸ್ಥರು ಆಕ್ರೋಶಗೊಂಡಿದ್ದು, ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದರು.

ರಂಗಾರೆಡ್ಡಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ವರ ರಾವ್ ಅವರು, ಈ ಘಟನೆಯ ನಂತರ ಆಸ್ಪತ್ರೆಯನ್ನು ಮುಚ್ಚಲಾಗಿದ್ದು, ಘಟನೆಯ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಕೀರ್ತಿ ಅವರನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ವೈದ್ಯರ ಮೇಲೆ ಹಲ್ಲೆ ಮಾಡುವ ರೋಗಿಗಳನ್ನು ನೇರವಾಗಿ ಜೈಲಿಗೆ ಹಾಕುವಂತೆ, ರೋಗಿಗಳ ಜೀವದೊಂದಿಗೆ ಆಟವಾಡುವ ವೈದ್ಯರನ್ನು ಸಹ ನೇರವಾಗಿ ಜೈಲಿಗೆ ಹಾಕಬೇಕು!