ಭಾಗ್ಯನಗರ (ತೆಲಂಗಾಣ) – ಸರಕಾರವು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತದೆ. ಭಯೋತ್ಪಾದನೆಯನ್ನು ಕೊನೆಗೊಳಿಸಲು ಭಾರತವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಭಯೋತ್ಪಾದಕರು ಅಮಾಯಕ ಪ್ರವಾಸಿಗರನ್ನು ಕೊಂದಿದ್ದಾರೆ. ಅದರ ಹಿಂದೆ ಪಾಕಿಸ್ತಾನವಿದೆ ಎಂಬುದು ಸ್ಪಷ್ಟವಾಗಿದೆ. ಆದರೂ ಪಾಕಿಸ್ತಾನದ ರಾಜಕಾರಣಿಗಳು ಪುರಾವೆಗಳನ್ನು ಕೇಳುತ್ತಿದ್ದಾರೆ. ಪಾಕಿಸ್ತಾನಕ್ಕೆ ಈ ಹಿಂದೆಯೂ ಪಠಾಣಕೋಟ ಮತ್ತು ಮುಂಬಯಿ ದಾಳಿಯ ಬಗ್ಗೆ ಸಾಕ್ಷ್ಯ ನೀಡಲಾಗಿತ್ತು; ಆದರೆ ಪಾಕಿಸ್ತಾನವು ಯಾವುದೇ ಕ್ರಮ ಕೈಗೊಂಡಿಲ್ಲ. ಪಾಕಿಸ್ತಾನವು ನಾಚಿಕೆಗೇಡಿನ ರಾಷ್ಟ್ರವಾಗಿದೆ. ಆದ್ದರಿಂದ ಅದಕ್ಕೆ ತಿಳಿಹೇಳುವ ಸಮಯವಲ್ಲ, ಶಿಕ್ಷಿಸುವ ಸಮಯ ಬಂದಿದೆ. ಇಲ್ಲದಿದ್ದರೆ ಪ್ರತಿ 2-4 ತಿಂಗಳಿಗೊಮ್ಮೆ ಅದು ಸಾಮಾನ್ಯ ಜನರನ್ನು ಕೊಲ್ಲುತ್ತದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎ.ಐ.ಎಮ್.ಐ.ಎಮ್.) ಪಕ್ಷದ ಮುಖ್ಯಸ್ಥ ಸಂಸದ ಅಸಾದುದ್ದೀನ ಓವೈಸಿ ಹೇಳಿದ್ದಾರೆ.
“Time to stop convincing Pakistan — time to teach it a lesson!”
– Bhagyanagar MP Asaduddin OwaisiBut not just Pakistan — even Pak sympathizers & fanatics within India must face action!
Enough is enough! 🇮🇳⚔️🔥#IndiaPakistanWar#PahalgamTerrorAttack
VC: @livemint pic.twitter.com/ZF7p6toHdd— Sanatan Prabhat (@SanatanPrabhat) May 6, 2025
ಓವೈಸಿ ಮಾತು ಮುಂದುವರೆಸಿ, ಪಹಲ್ಗಾಮ್ನಲ್ಲಿ ಸಾವನ್ನಪ್ಪಿದವರಿಗೆ ಸರಕಾರ ಹುತಾತ್ಮರ ಸ್ಥಾನಮಾನ ನೀಡಿದರೆ ಅವರ ಕುಟುಂಬಕ್ಕೆ ಸರಿಯಾದ ಗೌರವ ಸಿಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಅವರಿಗೆ ಹುತಾತ್ಮರ ಸ್ಥಾನಮಾನ ನೀಡುವ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.
ಸಂಪಾದಕೀಯ ನಿಲುವುಕೇವಲ ಪಾಕಿಸ್ತಾನಿ ಅಲ್ಲ, ಭಾರತದಲ್ಲಿರುವ ಪಾಕಿಸ್ತಾನಿ ಪ್ರೇಮಿಗಳು ಮತ್ತು ಜಿಹಾದಿ ಮುಸಲ್ಮಾನರಿಗೂ ಸರಕಾರ ಪಾಠ ಕಲಿಸುವ ಸಮಯ ಬಂದಿದೆ! |