ಪಹಲ್ಗಾಮ್ ದಾಳಿ : ‘ಯುದ್ಧ ಮಾಡಿದರೆ ಸಾಯೋದು ನಮ್ಮ ಸೈನಿಕರೇ !’ – ಕಾಂಗ್ರೆಸ್ ನಾಯಕಿ ಮತ್ತು ನಟಿ ರಮ್ಯಾ

ಬೆಂಗಳೂರು – ಕಾಂಗ್ರೆಸ್ ನಾಯಕಿ ಮತ್ತು ನಟಿ ರಮ್ಯಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘ವೈಯಕ್ತಿಕವಾಗಿ ಹಿಂಸೆ ಮಾಡುವುದು ನನಗೆ ಇಷ್ಟವಿಲ್ಲ. ಯುದ್ಧದಿಂದ ಯಾರೂ ಉದ್ದಾರವಾಗುವುದಿಲ್ಲ, ಪ್ರತಿಯೊಂದು ವಿಷಯಕ್ಕೂ ಯುದ್ಧವೇ ಪರಿಹಾರವಲ್ಲ, ಅದರಿಂದ ನಮ್ಮ ಸೈನಿಕರೇ ಸಾಯುತ್ತಾರೆ ಎಂದು ಹೇಳಿದರು.

ನಟಿ ರಮ್ಯಾ ಅವರು ಮಾತು ಮುಂದುವರೆಸಿ, ಪಹಲ್ಗಾಮ್ ದಾಳಿಗೆ ಗುಪ್ತಚರ ಇಲಾಖೆಯ ವೈಫಲ್ಯ ಮತ್ತು ಭದ್ರತಾ ಲೋಪಗಳು ಕಾರಣವಾಗಿವೆ. ಭಯೋತ್ಪಾದಕರು ಹೇಗೆ ಒಳಗೆ ಬಂದರು? ಇದೆಲ್ಲಾ ಹೇಗೆ ನಡೆಯಿತು? ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈಗ ಸರಕಾರ ಏನು ಕ್ರಮ ಕೈಗೊಳ್ಳುತ್ತದೆ? ಎಂಬುದನ್ನು ನೋಡಬೇಕಾಗಿದೆ ಎಂದವರು ಹೇಳಿದರು.

ಸಂಪಾದಕೀಯ ನಿಲುವು

  • ಇದು ಸೈನಿಕರ ಮನೋಸ್ಥೈರ್ಯವನ್ನು ಕುಗ್ಗಿಸಲು ಕಾಂಗ್ರೆಸ್ ನ ಪ್ರಯತ್ನವಾಗಿದೆ, ಇದನ್ನು ದೇಶಪ್ರೇಮಿಗಳು ಅರಿತುಕೊಳ್ಳಬೇಕು ಮತ್ತು ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪ್ರಯತ್ನಿಸಬೇಕು!
  • ‘ಭಯೋತ್ಪಾದಕರು ಹಿಂದೂಗಳನ್ನು ಕ್ರೂರವಾಗಿ ಕೊಲ್ಲಬೇಕು ಮತ್ತು ಹಿಂದೂಗಳು ಮೌನವಾಗಿ ಸಾಯಬೇಕು’, ರಮ್ಯಾ ಅವರ ಹೇಳಿಕೆಯ ಅರ್ಥ ಇದೇ ಆಗಿದೆ! ಇದರಿಂದ ಕಾಂಗ್ರೆಸ್‌ನ ಭಯೋತ್ಪಾದಕರ ಬಗೆಗಿನ ಪ್ರೀತಿ ಎದ್ದು ಕಾಣುತ್ತಿದೆ ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.