ಪಾಕಿಸ್ತಾನ ಸಿದ್ದರಾಮಯ್ಯನವರ ಹೇಳಿಕೆಯನ್ನು ಭಾರತದ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದೆ
ಬೆಂಗಳೂರು – ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಹಲ್ಗಾಮ್ ಹತ್ಯಾಕಾಂಡವನ್ನು ಭದ್ರತಾ ವ್ಯವಸ್ಥೆಯ ದೊಡ್ಡ ವೈಫಲ್ಯ ಎಂದು ಕರೆದಿದ್ದರು ಮತ್ತು ಅದಕ್ಕೆ ಸರಕಾರವನ್ನು ಹೊಣೆಗಾರರನ್ನಾಗಿ ಮಾಡಿದ್ದರು. ‘ಈ ವಿಷಯದ ಕುರಿತು ಪಾಕಿಸ್ತಾನದೊಂದಿಗೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದರು.
ಪಾಕಿಸ್ತಾನದ ವಾಹಿನಿಗಳಿಂದ ಸಿದ್ದರಾಮಯ್ಯ ಇವರ ಹೇಳಿಕೆಯ ಪ್ರಸಾರ
ಪಾಕಿಸ್ತಾನದ ‘ಜಿಯೋ ಟಿವಿ’ ಈ ವಾರ್ತ ವಾಹಿನಿಯಲ್ಲಿ ಸಿದ್ದರಾಮಯ್ಯ ಇವರ ಹೇಳಿಕೆಯ ವಿಡಿಯೋ ಪ್ರಸಾರ ಮಾಡಿದೆ. ಹಾಗೂ ‘ಇದು ಭಾರತದ ಆಂತರಿಕ ಸುರಕ್ಷತೆಯಲ್ಲಿನ ವಿಫಲತೆ ಆಗಿದೆ. ಪಾಕಿಸ್ತಾನಕ್ಕೆ ಇದರಲ್ಲಿ ಅನಾವಶ್ಯಕವಾಗಿ ಎಳೆದು ತರಲಾಗಿದೆ’, ಎಂದು ಹೇಳಲಾಗಿದೆ.
ಭಾಜಪದ ನಾಯಕ ಅಮಿತ್ ಮಾನವಿಯ ಇವರು ‘ಎಕ್ಸ’ನಲ್ಲಿ ಪಾಕಿಸ್ತಾನ ವಾರ್ತಾ ವಾಹಿನಿಯ ಈ ವಿಡಿಯೋ ಪೋಸ್ಟ ಮಾಡಿ, ಕಾಂಗ್ರೆಸ್ ಪಾಕಿಸ್ತಾನದ ರಕ್ಷಣೆಗಾಗಿ ಮುಂದೆ ಬಂದಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಹೇಳಿಕೆ ಪಾಕಿಸ್ತಾನದಲ್ಲಿ ವೈಭವಿಕರಿಸಲಾಗುತ್ತಿದೆ, ನಾವು ಪಾಕಿಸ್ತಾನವನ್ನು ಎದುರಿಸುವ ಬದಲು ಕಾಶ್ಮೀರದಲ್ಲಿನ ರಕ್ಷಣಾ ಉಪಾಯದ ಕಡೆಗೆ ಗಮನ ಕೇಂದ್ರೀಕರಿಸಬೇಕು. ಸಿದ್ದರಾಮಯ್ಯ ಮುಸ್ಲಿಮರ ಮತದಿಂದ ಅಧಿಕಾರದಲ್ಲಿ ಇದ್ದಾರೆ, ಆದ್ದರಿಂದ ಭಯೋತ್ಪಾಕರು ಭಾರತೀಯ ಹಿಂದುಗಳನ್ನು ಬರ್ಬರ ಹತ್ಯೆ ಮಾಡುತ್ತಿದ್ದಾರೆ, ಎಂದು ಬರೆದಿದ್ದಾರೆ.
Congress rushes to Pakistan’s rescue. Karnataka Chief Minister Siddaramaiah, who owes his position to Muslim votes, is being quoted across Pakistan for suggesting that we focus on security measures in Kashmir instead of confronting Pakistan, despite them murdering Indian Hindus… pic.twitter.com/YKvVoGN3UE
— Amit Malviya (@amitmalviya) April 26, 2025