೧. ‘ಬಳೆಗಳಿಂದ ನಿರ್ಮಾಣವಾಗುವ ನಾದಲಹರಿಗಳಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ-ಶಸ್ತ್ರಾಸ್ತ್ರಗಳ ಮೂಲಕ (ಮಾರಕ ಶಕ್ತಿಯ ಮೂಲಕ) ಇಂದ್ರಿಯಗಳ ರಕ್ಷಣೆಯಾಗಿ ಆಯಾ ಇಂದ್ರಿಯಗಳ ಸಾತ್ತ್ವಿಕತೆಯು ಹೆಚ್ಚಾಗುತ್ತದೆ.’
೨. ಬಳೆಗಳಿಂದ ಸ್ತ್ರೀಯರಲ್ಲಿರುವ ಕ್ರಿಯಾಶಕ್ತಿಯು ಜಾಗೃತವಾಗಿ ಸ್ತ್ರೀಯರ ದೇಹಕೋಶಗಳ ಶುದ್ಧಿಯಾಗುತ್ತದೆ, ಕೆಟ್ಟ ಶಕ್ತಿಗಳಿಂದ ಸ್ತ್ರೀಯರ ರಕ್ಷಣೆಯಾಗುತ್ತದೆ ಮತ್ತು ವಾಸ್ತುಶುದ್ಧಿಯಾಗುತ್ತದೆ.
ಅ. ಬಳೆಗಳ ಚಲನವಲನದಿಂದ ರಜೋಗುಣವು ನಿರ್ಮಾಣವಾಗುತ್ತದೆ. ಈ ರಜೋ ಗುಣವು ಸ್ತ್ರೀಯರ ದೇಹದಲ್ಲಿನ ಆದಿಶಕ್ತಿಯ ತತ್ತ್ವವನ್ನು ಕಾರ್ಯನಿರತಗೊಳಿಸಲು ಪೂರಕವಾಗಿರುತ್ತದೆ. ಬಳೆಗಳಲ್ಲಿರುವ ಕ್ರಿಯಾಲಹರಿಗಳು ಒಂದಾಗುವು ದರಿಂದ ಅವು ಕ್ರಿಯಾಶಕ್ತಿಯ ಲಹರಿಗಳಿಂದ ತುಂಬಿಕೊಳ್ಳುತ್ತವೆ.
ಆ. ಜಾಗೃತವಾದ ಶಕ್ತಿತತ್ತ್ವದಿಂದ ಸ್ತ್ರೀಯರ ಪ್ರಾಣಮಯ ಮತ್ತು ಮನೋಮಯ ಕೋಶಗಳ ಶುದ್ಧಿಯಾಗಲು ಸಹಾಯವಾಗುತ್ತದೆ.
ಇ. ಕ್ರಿಯಾಶಕ್ತಿಯ ಲಹರಿಗಳು ದೇಹಕ್ಕೆ ಸ್ಪರ್ಶವಾಗುವುದರಿಂದ ಜೀವದ ಸೂರ್ಯ ನಾಡಿಯು ಕಾರ್ಯನಿರತವಾಗಿ ಶಕ್ತಿಲಹರಿಗಳು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ.
ಈ. ಬಳೆಗಳಿಂದ ಪ್ರಕ್ಷೇಪಿತವಾಗುವ ಕ್ರಿಯಾಶಕ್ತಿಯ ಲಹರಿಗಳಿಂದ ಜೀವದ ಸುತ್ತಲೂ ರಜೋಲಹರಿಗಳ ಗತಿಮಾನ ಕವಚವು ನಿರ್ಮಾಣವಾಗುತ್ತದೆ. ಇದರಿಂದಾಗಿ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳಿಂದ ಜೀವದ ರಕ್ಷಣೆಯಾಗುತ್ತದೆ.
ಉ. ಆದಿಶಕ್ತಿಯ ಲಹರಿಗಳು ವಾಸ್ತುವಿನಲ್ಲಿ ಹರಡುವುದರಿಂದ ವಾಸ್ತುವಿನಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾಸ್ತುವಿನ ಶುದ್ಧಿಯಾಗುತ್ತದೆ, ಇದರಿಂದಾಗಿ ಬಳೆಗಳ ಆಘಾತದಾಯಕ ನಾದಕ್ಕೆ ಕೆಟ್ಟ ಶಕ್ತಿಗಳು ಹೆದರುತ್ತವೆ.
ನಾದವನ್ನು ನಿರ್ಮಿಸುವ ಬಳೆಗಳಿಂದ ಮೇಲಿನ ಲಾಭಗಳಾಗುತ್ತವೆ. ಆದುದರಿಂದ ನಾದ ಲಹರಿಗಳನ್ನು ನಿರ್ಮಾಣ ಮಾಡದಿರುವ ಪ್ಲಾಸ್ಟಿಕ್ ಬಳೆಗಳನ್ನು ಉಪಯೋಗಿಸಬಾರದು.
(ಸನಾತನ ನಿರ್ಮಿತ ಗ್ರಂಥ : ‘ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು’)
* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |