ಪುಣೆ – ಗಂಗಾ ನದಿ ಸ್ವಚ್ಛವಾಗುತ್ತದೆ ಎಂದು ರಾಜೀವ್ ಗಾಂಧಿ ಕಾಲದಿಂದ ಕೇಳುತ್ತಿದ್ದೇನೆ. ನಮ್ಮ ಪಕ್ಷದ ನಾಯಕ ಬಾಲಾ ನಂದಗಾಂವ್ಕರ್ ಕುಂಭಮೇಳದಿಂದ ನನಗಾಗಿ ಗಂಗಾ ನೀರು ತಂದಿದ್ದರು. “ನಾನು ಅದನ್ನು ಕುಡಿಯುವುದಿಲ್ಲ” ಎಂದು ಅವರಿಗೆ ಹೇಳಿದೆ. ಆ ನದಿಯಲ್ಲಿ ಎಷ್ಟೋ ಜನ ಸ್ನಾನ ಮಾಡುತ್ತಿದ್ದರು. ಅಂತಹ ನೀರನ್ನು ಹೇಗೆ ಕುಡಿಯುವುದು? ದೇಶದಲ್ಲಿ ಒಂದೂ ನದಿ ಸ್ವಚ್ಛವಾಗಿಲ್ಲ. ಇಂತಹ ಪರಿಸ್ಥಿತಿ ಇದೆ ಮತ್ತು ನಾವು ನದಿಯನ್ನು ತಾಯಿ ಎಂದು ಪರಿಗಣಿಸುತ್ತೇವೆ. ಶ್ರದ್ಧೆ ಮತ್ತು ಮೂಢನಂಬಿಕೆಗಳ ನಡುವಿನ ವ್ಯತ್ಯಾಸವನ್ನು ತಿಳಿಯಿರಿ ಎಂದು ಮನಸೆ ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ್ದಾರೆ. ಇಲ್ಲಿ ಮನಸೆಯ 19 ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಗಂಗಾ ನದಿಗೆ ಅವಮಾನ ಮಾಡಿದ್ದಕ್ಕಾಗಿ ರಾಜ್ ಠಾಕ್ರೆ ವಿರುದ್ಧ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ.
MNS Chief Raj Thackeray disrespects the sacred Ganga snan at #Mahakumbh 🌊 🏞️
“No river in our country is truly clean, yet we call it our mother. Come out of superstition and use your heads properly” Thackeray remarked
🕉️ The Ganga snan holds immense significance in Hindu… pic.twitter.com/HWPBE1wHy4
— Sanatan Prabhat (@SanatanPrabhat) March 9, 2025
ಗಂಗೆಯನ್ನು ಪರೀಕ್ಷಿಸಬಾರದು! – ಆಚಾರ್ಯ ಮಹಾಮಂಡಲೇಶ್ವರ ಶ್ರೀ ಮಹಂತ ಸುಧೀರದಾಸ್ ಮಹಾರಾಜ, ನಾಸಿಕ
ತೀರ್ಥಗಳನ್ನು ಅಥವಾ ಗಂಗೆಯನ್ನು ಪರೀಕ್ಷಿಸಬಾರದು. ಗಂಗಾ ನದಿಯ ಬಗ್ಗೆ ಇಂತಹ ಮೂರ್ಖತನದ ಟೀಕೆಗಳನ್ನು ಮಾಡಿ ಪ್ರಗತಿಪರರೆಂದು ತೋರಿಸಿಕೊಳ್ಳುವುದು ತಪ್ಪು, ಎಂದು ಹೇಳಿದರು.
🚨 Raj Thackeray’s remarks on #Mahakumbh and Ganga mata are entirely inappropriate and deserve strong condemnation. He has insulted the faith of 65 crore devotees!
– Acharya Mahamandaleshwar Shri Mahant Sudhirdas Maharaj, Nashik @mahantpt03🛕 No one should question the holiness… pic.twitter.com/08777L0Yu9
— Sanatan Prabhat (@SanatanPrabhat) March 9, 2025
ಗಂಗಾ ಸ್ನಾನ ಮಾಡುವುದು ಮೂಢನಂಬಿಕೆ ಅಲ್ಲ! – ಶಾಸಕ ಗಿರೀಶ್ ಮಹಾಜನ್, ಭಾಜಪ
ಕುಂಭಮೇಳದಲ್ಲಿ ಗಂಗಾ ಸ್ನಾನ ಮಾಡುವುದು ಮೂಢನಂಬಿಕೆ ಅಲ್ಲ, ಅದು ಶ್ರದ್ಧೆಯಾಗಿದೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇದಕ್ಕೆ ಧಾರ್ಮಿಕ ಹಿನ್ನೆಲೆ ಇದೆ, ಎಂದು ಹೇಳಿದರು.
ರಾಜ್ ಠಾಕ್ರೆ ಅವರಿಂದ ಭಕ್ತರ ಶ್ರದ್ಧೆಯ ಅವಮಾನ! – ಪ್ರವೀಣ್ ದರೆಕರ್, ಭಾಜಪ
ರಾಜ್ ಠಾಕ್ರೆ ಹೇಳಿಕೆ ಭಕ್ತರಿಗೆ ಅವಮಾನ ಮಾಡುವಂತಿದೆ. ಹಿಂದೂಗಳು ದೇವರುಗಳಲ್ಲಿ ಶ್ರದ್ಧೆ ಇಟ್ಟಿದ್ದಾರೆ, ಆದ್ದರಿಂದ ನಾವು ಕಲ್ಲಿನನ್ನೂ ದೇವರೆಂದು ಪರಿಗಣಿಸುತ್ತೇವೆ. ಆದ್ದರಿಂದ ಇತರರ ಶ್ರದ್ಧೆಗಳಿಗೆ ಅವಮಾನ ಮಾಡಬಾರದು, ಎಂದು ಹೇಳಿದರು.
ಪ್ರತಿಯೊಬ್ಬರ ಶ್ರದ್ಧೆಯನ್ನು ಗೌರವಿಸಬೇಕು! – ಶಾಸಕ ರಾಮ ಕದಂ, ಭಾಜಪ
ಆರೋಪ ಮಾಡುವ ಮೊದಲು ರಾಜ ಠಾಕ್ರೆ ಯೋಚಿಸಬೇಕು. ಮನೆಯಲ್ಲಿ ಕುಳಿತು ಹೀಗೆ ಹೇಳುವುದು ತಪ್ಪು. ಪ್ರತಿಯೊಬ್ಬರ ಶ್ರದ್ಧೆಯನ್ನು ಗೌರವಿಸಬೇಕು, ಎಂದು ಹೇಳಿದರು.
ಸಂಪಾದಕೀಯ ನಿಲುವುಗಂಗಾ ಸ್ನಾನಕ್ಕೆ ಹಿಂದೂ ಧರ್ಮದಲ್ಲಿ ಅನನ್ಯ ಮಹತ್ವವಿದೆ. ಹೀಗಿರುವಾಗ ರಾಜ್ ಠಾಕ್ರೆ ನೀಡಿರುವ ಹೇಳಿಕೆಯಿಂದ ಕೋಟ್ಯಂತರ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆಯಾಗಿದೆ! |