
ಪ್ರಯಾಗ್ ರಾಜ್ (ಉತ್ತರ ಪ್ರದೇಶ) – 2025 ರ ಪ್ರಯಾಗ್ ರಾಜ್ ಮಹಾಕುಂಭವು ಭವ್ಯ ಮತ್ತು ವೈಭವದಿಂದ ಆಚರಿಸಲಾಯಿತು. 144 ವರ್ಷಗಳ ನಂತರ ನಡೆದ ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮದಲ್ಲಿ 66 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು. ಕುಂಭಮೇಳದ ಆಡಳಿತ ಮಂಡಳಿಯು ಈ ಮಹಾಕಾರ್ಯಕ್ರಮದ ವೇಳೆ ಕಾಣೆಯಾಗಿದ್ದ 54,357 ಭಕ್ತರನ್ನು ಅವರ ಕುಟುಂಬಸ್ಥರೊಂದಿಗೆ ಮರಳಿ ಸೇರಿಸುವಲ್ಲಿ ಯಶಸ್ವಿಯಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರದ ದೂರದೃಷ್ಟಿ ಮತ್ತು ಸಮರ್ಪಿತ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಈ ಕಠಿಣ ಕಾರ್ಯದಲ್ಲಿ ರಾಜ್ಯ ಸರಕಾರವು ರಚಿಸಿದ ‘ಡಿಜಿಟಲ್ ಲಾಸ್ಟ್ ಅಂಡ್ ಫೌಂಡ್ ಸೆಂಟರ್’ ಅಂದರೆ ‘ಡಿಜಿಟಲ್ ಖೋಯಾ-ಪಾಯಾ ಕೇಂದ್ರ’ ದ ದೊಡ್ಡ ಕೊಡುಗೆಯಿದೆ.
ಅಂಕಿಅಂಶಗಳು ಈ ರೀತಿ ಇವೆ!
1. ಕಾಣೆಯಾಗಿದ್ದ ಭಕ್ತರು ಒಂದೇ ದಿನದಲ್ಲಿ ಪತ್ತೆಯಾದ ಸಂಖ್ಯೆ : ಕಾಣೆಯಾದ ಒಟ್ಟು 54,357 ಭಕ್ತರ ಪೈಕಿ 35 ಸಾವಿರಕ್ಕೂ ಹೆಚ್ಚು ಭಕ್ತರನ್ನು ಅದೇ ದಿನದಂದು ಕುಟುಂಬಸ್ಥರೊಂದಿಗೆ ಸೇರ್ಪಡೆ ಮಾಡಲಾಗಿದೆ.
2. ಮಕರ ಸಂಕ್ರಾಂತಿಯ ಅಮೃತಸ್ನಾನದ ಯಲ್ಲಿ(ಜನವರಿ 13-15): ಕಾಣೆಯಾಗಿದ್ದ 598 ಜನರು ತಮ್ಮ ಕುಟುಂಬವನ್ನು ಸೇರಿದ್ದಾರೆ.
3. ಮೌನಿ ಅಮವಾಸ್ಯೆಯ ಅವಧಿಯಲ್ಲಿ (ಜನವರಿ 28-30) : 8,725 ಜನರು ಹಾಗೂ
4. ವಸಂತ ಪಂಚಮಿಯ ಅವಧಿಯಲ್ಲಿ (ಫೆಬ್ರವರಿ 2-4) : ಕಾಣೆಯಾಗಿದ್ದ 864 ಜನರು ವಾಪಸ್ ತಮ್ಮ ಕುಟುಂಬವನ್ನು ಸೇರಿದ್ದಾರೆ.
ಸಂಪಾದಕೀಯ ನಿಲುವುಈ ಸಾಧನೆಗಾಗಿ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಅಭಿನಂದನೆಗಳು! ‘ಗಂಗಾನದಿ ಅಶುದ್ಧವಾಗಿತ್ತು’, ‘ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದವು’, ಎಂದು ಹೇಳಿ ಉತ್ತರ ಪ್ರದೇಶ ಸರಕಾರವನ್ನು ಟೀಕಿಸುವವರು ಈಗ ಅವರ ಈ ಸಾಧನೆಯ ಬಗ್ಗೆ ಮಾತನಾಡುತ್ತಿಲ್ಲ ಏಕೆ ? |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ