
ಪ್ರಯಾಗ್ ರಾಜ್ (ಉತ್ತರ ಪ್ರದೇಶ) – 2025 ರ ಪ್ರಯಾಗ್ ರಾಜ್ ಮಹಾಕುಂಭವು ಭವ್ಯ ಮತ್ತು ವೈಭವದಿಂದ ಆಚರಿಸಲಾಯಿತು. 144 ವರ್ಷಗಳ ನಂತರ ನಡೆದ ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮದಲ್ಲಿ 66 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು. ಕುಂಭಮೇಳದ ಆಡಳಿತ ಮಂಡಳಿಯು ಈ ಮಹಾಕಾರ್ಯಕ್ರಮದ ವೇಳೆ ಕಾಣೆಯಾಗಿದ್ದ 54,357 ಭಕ್ತರನ್ನು ಅವರ ಕುಟುಂಬಸ್ಥರೊಂದಿಗೆ ಮರಳಿ ಸೇರಿಸುವಲ್ಲಿ ಯಶಸ್ವಿಯಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರದ ದೂರದೃಷ್ಟಿ ಮತ್ತು ಸಮರ್ಪಿತ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಈ ಕಠಿಣ ಕಾರ್ಯದಲ್ಲಿ ರಾಜ್ಯ ಸರಕಾರವು ರಚಿಸಿದ ‘ಡಿಜಿಟಲ್ ಲಾಸ್ಟ್ ಅಂಡ್ ಫೌಂಡ್ ಸೆಂಟರ್’ ಅಂದರೆ ‘ಡಿಜಿಟಲ್ ಖೋಯಾ-ಪಾಯಾ ಕೇಂದ್ರ’ ದ ದೊಡ್ಡ ಕೊಡುಗೆಯಿದೆ.
ಅಂಕಿಅಂಶಗಳು ಈ ರೀತಿ ಇವೆ!
1. ಕಾಣೆಯಾಗಿದ್ದ ಭಕ್ತರು ಒಂದೇ ದಿನದಲ್ಲಿ ಪತ್ತೆಯಾದ ಸಂಖ್ಯೆ : ಕಾಣೆಯಾದ ಒಟ್ಟು 54,357 ಭಕ್ತರ ಪೈಕಿ 35 ಸಾವಿರಕ್ಕೂ ಹೆಚ್ಚು ಭಕ್ತರನ್ನು ಅದೇ ದಿನದಂದು ಕುಟುಂಬಸ್ಥರೊಂದಿಗೆ ಸೇರ್ಪಡೆ ಮಾಡಲಾಗಿದೆ.
2. ಮಕರ ಸಂಕ್ರಾಂತಿಯ ಅಮೃತಸ್ನಾನದ ಯಲ್ಲಿ(ಜನವರಿ 13-15): ಕಾಣೆಯಾಗಿದ್ದ 598 ಜನರು ತಮ್ಮ ಕುಟುಂಬವನ್ನು ಸೇರಿದ್ದಾರೆ.
3. ಮೌನಿ ಅಮವಾಸ್ಯೆಯ ಅವಧಿಯಲ್ಲಿ (ಜನವರಿ 28-30) : 8,725 ಜನರು ಹಾಗೂ
4. ವಸಂತ ಪಂಚಮಿಯ ಅವಧಿಯಲ್ಲಿ (ಫೆಬ್ರವರಿ 2-4) : ಕಾಣೆಯಾಗಿದ್ದ 864 ಜನರು ವಾಪಸ್ ತಮ್ಮ ಕುಟುಂಬವನ್ನು ಸೇರಿದ್ದಾರೆ.
ಸಂಪಾದಕೀಯ ನಿಲುವುಈ ಸಾಧನೆಗಾಗಿ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಅಭಿನಂದನೆಗಳು! ‘ಗಂಗಾನದಿ ಅಶುದ್ಧವಾಗಿತ್ತು’, ‘ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದವು’, ಎಂದು ಹೇಳಿ ಉತ್ತರ ಪ್ರದೇಶ ಸರಕಾರವನ್ನು ಟೀಕಿಸುವವರು ಈಗ ಅವರ ಈ ಸಾಧನೆಯ ಬಗ್ಗೆ ಮಾತನಾಡುತ್ತಿಲ್ಲ ಏಕೆ ? |
ಶ್ರೀರಾಮನ ಮೇಲಿನ ಆಘಾತ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ